ದೇವದತ್ ಪಡಿಕ್ಕಲ್ 
ಕ್ರಿಕೆಟ್

RCB ಪ್ಲೇಯಿಂಗ್ ಇಲೆವೆನ್‌ನಿಂದ ದೇವದತ್ ಪಡಿಕ್ಕಲ್ ಔಟ್, ವೆಂಕಟೇಶ್ ಅಯ್ಯರ್ ಇನ್?; ಕನ್ನಡಿಗ ಹೇಳಿದ್ದಿಷ್ಟು...

IPL 2026ರ ಹರಾಜಿನಲ್ಲಿ, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಟಗಾರರಿಗೆ ಅಥವಾ ದುರ್ಬಲ ಆಟಗಾರರಿಗೆ ಬ್ಯಾಕಪ್ ಆಟಗಾರರನ್ನು ಪಡೆಯುವಲ್ಲಿ RCB ಯಶಸ್ವಿಯಾಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸದ್ಯ ಸ್ಥಿರವಾದ ತಂಡವನ್ನು ಹೊಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಹಾಲಿ ಚಾಂಪಿಯನ್‌ಗಳು ಈಗಾಗಲೇ ವಿಜೇತ ತಂಡವನ್ನು ಒಟ್ಟುಗೂಡಿಸಿದ್ದಾರೆ. ಹೆಚ್ಚೆಂದರೆ, ಅವರು ಸ್ವಲ್ಪ ಬದಲಾವಣೆಗಳನ್ನು ಮಾತ್ರ ಮಾಡಬೇಕಾಗಿದೆ. ಪರಿಸ್ಥಿತಿಗಳು, ಪಿಚ್, ಗಾಯ ಅಥವಾ ಕೆಲಸದ ಹೊರೆ ನಿರ್ವಹಣೆ ದೃಷ್ಟಿಯಿಂದಾಗಿ ಮಾತ್ರ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತಿದೆ.

IPL 2026ರ ಹರಾಜಿನಲ್ಲಿ, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಟಗಾರರಿಗೆ ಅಥವಾ ದುರ್ಬಲ ಆಟಗಾರರಿಗೆ ಬ್ಯಾಕಪ್ ಆಟಗಾರರನ್ನು ಪಡೆಯುವಲ್ಲಿ RCB ಯಶಸ್ವಿಯಾಯಿತು. ಕಳೆದ ಆವೃತ್ತಿಯಲ್ಲಿ ಜಾಶ್ ಹೇಜಲ್‌ವುಡ್ ಕೆಲವು ಪಂದ್ಯಗಳಿಂದ ಹೊರಗುಳಿದರು. ಹೀಗಾಗಿ, ಅವರು ನ್ಯೂಜಿಲೆಂಡ್‌ನ ಜೇಕಬ್ ಡಫಿಯನ್ನು ಪಡೆದರು. ಫಿಲ್ ಸಾಲ್ಟ್ ಬದಲಿಗೆ, ಅವರು ಇಂಗ್ಲಿಷ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋರ್ಡಾನ್ ಕಾಕ್ಸ್ ಅವರನ್ನು ಪಡೆದರು. ಯಶ್ ದಯಾಳ್ ಅವರಿಗೆ ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗದಿದ್ದರೆ ಎಂಬುದನ್ನು ಇಟ್ಟುಕೊಂಡು ಮಂಗೇಶ್ ಯಾದವ್ ಅವರನ್ನು ಖರೀದಿಸಿದರು.

ಮೂರನೇ ಸ್ಥಾನಕ್ಕಾಗಿ ಪೈಪೋಟಿ

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಿದ್ದ ದೇವದತ್ ಪಡಿಕ್ಕಲ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರು. ಕರ್ನಾಟಕದ ಈ ಆಟಗಾರ 150.60 ಸ್ಟ್ರೈಕ್ ರೇಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಆದರೆ, ಗಾಯದಿಂದಾಗಿ ಅವರು ಹೊರಗುಳಿಯಬೇಕಾಯಿತು.

ಆರ್‌ಸಿಬಿ ಅವರನ್ನು ಉಳಿಸಿಕೊಂಡಿತು. ಮಿನಿ ಹರಾಜಿನಲ್ಲಿ, ವೆಂಕಟೇಶ್ ಅಯ್ಯರ್ ಅವರನ್ನು ₹7 ಕೋಟಿಗೆ ಖರೀದಿಸಿತು. ಮಧ್ಯಪ್ರದೇಶದ ಈ ಆಲ್‌ರೌಂಡರ್ ಕೋಲ್ಕತ್ತಾ ನೈಟ್ ರೈಡರ್ಸ್‌ನೊಂದಿಗೆ 2025ರ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಆದರೆ, 43.23 ರ ಸರಾಸರಿ ಮತ್ತು 168.77 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ದೇವದತ್ ಪಡಿಕ್ಕಲ್ ಮತ್ತು ವೆಂಕಟೇಶ್ ಅಯ್ಯರ್ ನಡುವೆ ಇದೀಗ ಸ್ಪರ್ಧೆ ಏರ್ಪಟ್ಟಿದಂತೆ ಕಾಣುತ್ತಿದೆ. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಲಾಗುತ್ತದೆಯಾ ಅಥವಾ ವೆಂಕಟೇಶ್‌ ಅಯ್ಯರ್ ಮೇಲೆ ನಂಬಿಕೆ ಇಡುತ್ತದೆಯಾ ಎಂಬುದು ಇದೀಗ ಪ್ರಶ್ನೆಯಾಗಿದೆ. ಈ ಕುರಿತು ಇನ್‌ಸೈಡ್‌ಸ್ಪೋರ್ಟ್ ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ ದೇವದತ್ ಪಡಿಕ್ಕಲ್‌ ಉತ್ತರಿಸಿದ್ದಾರೆ.

25 ವರ್ಷದ ಪಡಿಕ್ಕಲ್ ದೃಷ್ಟಿಕೋನ ಸ್ವಲ್ಪ ಭಿನ್ನವಾಗಿದೆ. ಪಡಿಕ್ಕಲ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುವತ್ತ ಗಮನಹರಿಸಲು ಬಯಸುವುದಿಲ್ಲ. ಆದರೆ, ತಾನು ಮತ್ತು ವೆಂಕಟೇಶ್ ಇಬ್ಬರೂ RCB ಪರ ಕೊಡುಗೆ ನೀಡಲು ಮತ್ತು ಪಂದ್ಯಗಳನ್ನು ಗೆಲ್ಲಲು ಆಡುವುದಾಗಿ ಆಶಿಸುತ್ತಾರೆ.

'ನೀವು ಐಪಿಎಲ್‌ನಲ್ಲಿ ಆಡುತ್ತಿದ್ದರೆ, ನಿಮಗೆ ಸ್ಪರ್ಧೆ ಖಂಡಿತ ಇರುತ್ತದೆ. ವೆಂಕಿ ಒಬ್ಬ ಉತ್ತಮ ಆಟಗಾರ. ನಾನು ಅವರೊಂದಿಗೆ ಮತ್ತು ಅವರ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಅವರು ತಂಡದಲ್ಲಿ ಇರುವುದನ್ನು ನಾನು ಎದುರು ನೋಡುತ್ತಿದ್ದೇನೆ. ತಂಡದ ಯಶಸ್ಸಿಗೆ ನಾವಿಬ್ಬರೂ ಕೊಡುಗೆ ನೀಡಬಹುದು ಎಂದು ಆಶಿಸುತ್ತೇವೆ' ಎಂದು ಪಡಿಕ್ಕಲ್ ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು; ಇದಕ್ಕೆ ಉಗ್ರರು ಕಾರಣ ಎಂದ ಅಧಿಕಾರಿಗಳು

Toxic Teaserನಲ್ಲಿ 'ಟೂ ಮಚ್ ಸೆಕ್ಸ್' ಇದೆಯೇ? CBFCಗೆ ಮತ್ತೊಂದು ದೂರು!

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್, ಈ ಎರಡು ಮೈದಾನಗಳಲ್ಲೇ ಪಂದ್ಯ!

'BJP feast' ನಲ್ಲಿ ಲಾಲು ಹಿರಿಯ ಪುತ್ರ! NDA ಸೇರ್ತಾರಾ?Video

SCROLL FOR NEXT