ಆರ್ ಅಶ್ವಿನ್ Photo | AFP
ಕ್ರಿಕೆಟ್

ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯ ಆಡದಿರುವುದು ಒಳ್ಳೆಯದಾಯಿತು; ಆರ್ ಅಶ್ವಿನ್

ಚೆಂಡು ಸ್ವಿಂಗ್ ಆಗುವ ಅಥವಾ ವೇಗದ ಬೌಲರ್‌ಗಳಿಗೆ ನೆರವಾಗುವಂತಹ ಪಿಚ್‌ಗಳಲ್ಲಿ ಆಕ್ರಮಣಕಾರಿ ಶೈಲಿಯ ಟಿ20 ಕ್ರಿಕೆಟ್ ಆಡಲು ಪ್ರಯತ್ನಿಸಿದಾಗ ವಿಫಲಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಅಶ್ವಿನ್ ಹೇಳಿದರು.

ಇತ್ತೀಚೆಗೆ ನಡೆದ ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ 15 ವರ್ಷ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿಲ್ಲ. ಆ ಸರಣಿಯಲ್ಲಿ ಭಾರತ 0-2 ಅಂತರದಲ್ಲಿ ಆಘಾತಕಾರಿ ಸೋಲು ಕಂಡಿತು. ಬಳಿಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೂಗುಗಳು ಹೆಚ್ಚಿವೆ. ಆದಾಗ್ಯೂ, ಭಾರತದ ದಂತಕಥೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ವಿಷಯಕ್ಕೆ ವಿಭಿನ್ನ ದೃಷ್ಟಿಕೋನವನ್ನು ನೀಡಿದ್ದಾರೆ.

ವೈಭವ್ ಸೂರ್ಯವಂಶಿ ಆಡಿದ್ದರೂ, ಉತ್ತಮ ಪ್ರದರ್ಶನ ನೀಡದಿದ್ದರೆ ಕಥೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತಿತ್ತು. ಸೂರ್ಯವಂಶಿ ಇದೀಗ ತಮ್ಮ ತಂಡದ ಆಟಗಾರರ ತಪ್ಪುಗಳನ್ನು ಹತ್ತಿರದಿಂದ ನೋಡುವುದರಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.

'ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದರು. ಆದರೆ, ಅವರು ಈ ಎರಡು ಪಂದ್ಯಗಳಲ್ಲಿ ವಿಫಲರಾದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಂತಹ ಸಮಯದಲ್ಲಿ ಎಲ್ಲವೂ ಅವರ ವಿರುದ್ಧವಾಗಿರುತ್ತಿತ್ತು. ಎಲ್ಲರೂ 'ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮಾಡಬಹುದು, ಆದರೆ ಅವರು ಸೀಮಿಂಗ್, ಕ್ರೀಡಾ ಪರಿಸ್ಥಿತಿಗಳಲ್ಲಿ ಆಡಲು ಸಾಧ್ಯವಿಲ್ಲ' ಎಂದು ಹೇಳುತ್ತಿದ್ದರು' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದರು.

ಚೆಂಡು ಸ್ವಿಂಗ್ ಆಗುವ ಅಥವಾ ವೇಗದ ಬೌಲರ್‌ಗಳಿಗೆ ನೆರವಾಗುವಂತಹ ಪಿಚ್‌ಗಳಲ್ಲಿ ಆಕ್ರಮಣಕಾರಿ ಶೈಲಿಯ ಟಿ20 ಕ್ರಿಕೆಟ್ ಆಡಲು ಪ್ರಯತ್ನಿಸಿದಾಗ ವಿಫಲಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಅಶ್ವಿನ್ ಹೇಳಿದರು.

'ಅಂತಹ ಪರಿಸ್ಥಿತಿಗಳಲ್ಲಿ- ವೈಭವ್, ಅಭಿಷೇಕ್ ಅಥವಾ ಸಂಜು ಯಾರೇ ಆಗಿರಲಿ - ನೀವು ಅದೇ ಟಿ20 ಶೈಲಿಯಲ್ಲೇ ಆಡಿದರೆ, ಔಟ್ ಆಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿಯೇ, ತಂಡದ ವಾತಾವರಣದಲ್ಲಿ ಹೊರಗೆ ಕುಳಿತುಕೊಳ್ಳುವುದು ಕೆಟ್ಟ ಅನುಭವವಲ್ಲ ಎಂದು ನಾನು ಹೇಳಿದೆ. ಏಕೆಂದರೆ, ನೀವು ಬೇರೊಬ್ಬರ ಅನುಭವದಿಂದ ಕಲಿಯುತ್ತಿರುತ್ತೀರಿ' ಎಂದರು.

'ನೀವು ಯಾರನ್ನಾದರೂ ಕೇಳಬಹುದು. ನೀವು ಹತ್ತಿರದಿಂದ ಕುಳಿತು ಉತ್ತಮ ಪ್ರದರ್ಶನ ನೀಡುವ ವ್ಯಕ್ತಿಗಳ ತಪ್ಪುಗಳನ್ನು ಗಮನಿಸಿದಾಗ ಅತ್ಯಂತ ಉಚಿತ ಮತ್ತು ಅಮೂಲ್ಯವಾದ ಪಾಠಗಳನ್ನು ಕಲಿಯಬಹುದು. ಅದಕ್ಕಿಂತ ಉತ್ತಮ ವೇದಿಕೆ ನಿಮಗೆ ಸಿಗುವುದಿಲ್ಲ' ಎಂದು ಅವರು ಹೇಳಿದರು.

ಇಂಗ್ಲೆಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ T20I ಸರಣಿಗೆ ಭಾರತ ತಂಡದಲ್ಲಿ ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ಸರಣಿಯು ಜುಲೈ 1 ಬುಧವಾರದಿಂದ ಆರಂಭವಾಗಲಿದೆ. 15 ವರ್ಷದ ಈ ಆಟಗಾರನಿಗೆ ಈ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಅವಕಾಶ ಸಿಗುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಲಾಖೆಗಳ ನಡುವಿನ ತಡೆಗೋಡೆ ಒಡೆಯಿರಿ, ಒಂದೇ ತಂಡವಾಗಿ ಕೆಲಸ ಮಾಡಿ: ಕೇಂದ್ರ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಖಡಕ್ ಸೂಚನೆ..!

ವಿಮಾನಯಾನ ಸಂಸ್ಥೆಗಳಿಗೆ ಬಿಗ್ ರಿಲೀಫ್; ATF ದರ ಲೀಟರ್‌ಗೆ 5 ರೂ. ಇಳಿಕೆ, ವಿಮಾನ ಪ್ರಯಾಣ ದರವೂ ಕಡಿಮೆಯಾಗುತ್ತಾ..?

ಜನ್ಮಸಿದ್ಧ ಪೌರತ್ವ ರದ್ದತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಟ್ರಂಪ್‌ಗೆ ಭಾರೀ ಶಾಕ್, 'ದೇಶಕ್ಕೆ ಮಾರಕ' ಎಂದ ಅಮೆರಿಕ ಅಧ್ಯಕ್ಷ..!

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದ ಹೊಸ ದರ ಜಾರಿ, ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು..?

ಜನ್ಮಸಿದ್ಧ ಪೌರತ್ವ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಚೀನಾಗೆ ಅಭಿನಂದನೆ ತಿಳಿಸಿದ ಟ್ರಂಪ್, ಕಾರಣ..?