ರಜತ್ ಪಾಟೀದಾರ್‌ 
ಕ್ರಿಕೆಟ್

'ರಜತ್ ಪಾಟೀದಾರ್‌ರನ್ನು ಭಾರತದ ಟಿ20ಐ ತಂಡಕ್ಕೆ ಕರೆತನ್ನಿ': BCCI, ಗೌತಮ್ ಗಂಭೀರ್‌ಗೆ ಇರ್ಫಾನ್ ಪಠಾಣ್ ಸೂಚನೆ

ಬ್ಯಾಟಿಂಗ್‌ನಲ್ಲಿನ ತಮ್ಮ ಸಾಧನೆಗಳಲ್ಲದೆ, ನಾಯಕರಾಗಿಯೂ ಯಶಸ್ಸು ಕಂಡಿರುವ ಪಾಟೀದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ.

ಶನಿವಾರ ಇಂಗ್ಲೆಂಡ್ ವಿರುದ್ಧ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ನಾಲ್ಕು ವಿಕೆಟ್‌ ಅಂತರದ ಸೋಲು ಕಂಡಿತು. ಅಯ್ಯರ್ ನಾಯಕರಾದಾಗಿನಿಂದ ಭಾರತ ತಂಡ ಈಗಾಗಲೇ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಸರಣಿಯಲ್ಲಿ 0-2 ಅಂತರದ ಐತಿಹಾಸಿಕ ವೈಟ್‌ವಾಶ್ ಅನ್ನು ಅನುಭವಿಸಿತು. ನಂತರ ತಂಡವು ಐದು ಪಂದ್ಯಗಳ ಟಿ20ಐ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದು, ಆರಂಭಿಕ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸುವ ಮೂಲಕ 1-0 ಮುನ್ನಡೆ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಬದಲಿಗೆ ಭಾರತದ ಟಿ20ಐ ನಾಯಕನಾಗಿ ಅಯ್ಯರ್ ಆಯ್ಕೆಯಾಗಿದ್ದು, ತಂಡದ ಕಳಪೆ ಫಲಿತಾಂಶಗಳ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಈ ಮಧ್ಯೆ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಬಿಸಿಸಿಐ ಆಯ್ಕೆದಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟೀದಾರ್ ಅವರನ್ನು ರಾಷ್ಟ್ರೀಯ T20I ತಂಡಕ್ಕೆ ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ. ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ದಾಖಲೆಯನ್ನು ಉಲ್ಲೇಖಿಸಿದ್ದಾರೆ.

'ಸದ್ಯದ ಭಾರತೀಯ ಟಿ20 ತಂಡದಲ್ಲಿರುವ ಎಡಗೈ ಬ್ಯಾಟರ್‌ಗಳ ಸಂಖ್ಯೆಯನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ರಜತ್ ಪಾಟೀದಾರ್ ಅವರನ್ನು ಪರಿಗಣಿಸಲು ಟೀಮ್ ಇಂಡಿಯಾಗೆ ಇದೊಂದು ಪ್ರಮುಖ ಕಾರಣವಾಗಿದೆ' ಎಂದು ಪಠಾನ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಅವರಿಗೆ ಅವಕಾಶ ಸಿಗುತ್ತದೆ ಎಂದು ನಾನು ಬಲವಾಗಿ ಆಶಿಸುತ್ತೇನೆ; ವಿಶೇಷವಾಗಿ ಮುಂದಿನ ಟಿ20 ವಿಶ್ವಕಪ್‌ಗೆ ಮುನ್ನ ಪ್ರಯೋಗಗಳನ್ನು ನಡೆಸಲು ಟೀಂ ಇಂಡಿಯಾಗೆ ಇನ್ನೂ ಸಾಕಷ್ಟು ಸಮಯವಿರುವುದರಿಂದ ಇದು ಮುಖ್ಯವಾಗಿದೆ' ಎಂದಿದ್ದಾರೆ.

ಪಾಟೀದಾರ್ ಭಾರತದ ಪರ ಇನ್ನೂ T20I (ಅಂತರರಾಷ್ಟ್ರೀಯ ಟಿ-20) ಪಂದ್ಯಕ್ಕೆ ಪದಾರ್ಪಣೆ ಮಾಡಿಲ್ಲವಾದರೂ, ದೇಶೀಯ ಟಿ-20 ಕ್ರಿಕೆಟ್‌ನಲ್ಲಿ ಅವರು ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು 106 ಇನಿಂಗ್ಸ್‌ಗಳಲ್ಲಿ 160.08 ರ ಸ್ಟ್ರೈಕ್ ರೇಟ್‌ನೊಂದಿಗೆ 3,389 ರನ್‌ಗಳನ್ನು ಗಳಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿನ ತಮ್ಮ ಸಾಧನೆಗಳಲ್ಲದೆ, ನಾಯಕರಾಗಿಯೂ ಯಶಸ್ಸು ಕಂಡಿರುವ ಪಾಟೀದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ. ಐಪಿಎಲ್ 2026ನೇ ಆವೃತ್ತಿಯಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ.

ಒಂದು ಓವರ್ ಬಾಕಿ ಇರುವಾಗಲೇ 191 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಆತಿಥೇಯರು ಎರಡನೇ T20I ನಲ್ಲಿ ಭಾರತವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದರು. ಆರಂಭಿಕ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಅವರ ಡಬಲ್ ಸ್ಟ್ರೈಕ್ ಹೊರತಾಗಿಯೂ, ಹ್ಯಾರಿ ಬ್ರೂಕ್ ಅವರ 15 ಎಸೆತಗಳಲ್ಲಿ ಸ್ಫೋಟಕ 39 ರನ್‌ಗಳು ಮೊಮೆಂಟಮ್ ಅನ್ನು ಬದಲಿಸಿತು. ನಂತರ ಜೇಕಬ್ ಬೆಥೆಲ್ 46 ಎಸೆತಗಳಲ್ಲಿ ಅಜೇಯ 76 ರನ್‌ಗಳೊಂದಿಗೆ ಚೇಸ್ ಅನ್ನು ಬಲಪಡಿಸಿದರು. ಟಾಮ್ ಬ್ಯಾಂಟನ್ ಅವರ 39 ರನ್‌ಗಳು ನಿರ್ಣಾಯಕವಾಯಿತು.

ರವಿ ಬಿಷ್ಣೋಯ್ ಅವರು 17 ನೇ ಓವರ್‌ನಲ್ಲಿ ಎಸೆದ ಎರಡು ನೋ-ಬಾಲ್‌ಗಳು ಫ್ರೀ ಹಿಟ್‌ಗಳಿಗೆ ಕಾರಣವಾದವು. ಇದು ಪಂದ್ಯಕ್ಕೆ ತಿರುವು ನೀಡಿತು. ಒಂದೇ ಓವರ್‌ನಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟರು. ಇದಕ್ಕು ಮೊದಲು, ಭಾರತವು 190/7 ಗಳಿಸಿತು. ಆದರೆ, ಇಂಗ್ಲೆಂಡ್‌ನ ಲೆಕ್ಕಾಚಾರದ ಬ್ಯಾಟಿಂಗ್, ಪರಿಸ್ಥಿತಿಗಳ ಬುದ್ಧಿವಂತ ಬಳಕೆ ಮತ್ತು ತಡವಾಗಿ ವೇಗವರ್ಧನೆಯು ಸರಣಿಯನ್ನು ಸಮಬಲಗೊಳಿಸುವ ಗೆಲುವನ್ನು ಮುದ್ರೆ ಮಾಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಹಿಜ್ಬುಲ್ಲಾ ವಿರುದ್ಧ ಹೋರಾಟ: ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು

'ಸಟ್ಲುಜ್' OTTಯಿಂದಲೂ ಹೊರಕ್ಕೆ: ಇದೇ ಕಾರಣ? ನಟ ದಿಲ್ಜಿತ್ ದೋಸಾಂಜ್ ಮೊದಲ ಪ್ರತಿಕ್ರಿಯೆ...