ನವದೆಹಲಿ: ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ವೆಸ್ಟ್ ಇಂಡೀಸ್-ಭಾರತ ನಡುವಿನ ಐಸಿಸಿ ಟಿ-20 ವಿಶ್ವಕಪ್ ಸೂಪರ್ 8 ಪಂದ್ಯಕ್ಕೂ ಮುನ್ನಾ ಪಾಕಿಸ್ತಾನದ ಸ್ಪಿನ್ ದಿಗ್ಗಜ ಸಕ್ಲೇನ್ ಮುಷ್ತಾಕ್ ನೀಡಿದ ಹೇಳಿಕೆ ವಿರುದ್ಧ ನೆಟ್ಟಿಗರು ಮುಗಿಬಿದಿದ್ದಾರೆ.
ಹೌದು. ಆರಂಭದಲ್ಲಿ ಭಾರತ ತಂಡಕ್ಕಾಗಿ ನಿರಂತರವಾಗಿ ಪ್ರತಿಭಾವಂತ ಆಟಗಾರರನ್ನು ಸೇರಿಸಿಕೊಳ್ಳುವ ಭಾರತದ ಕ್ರಿಕೆಟ್ ವ್ಯವಸ್ಥೆಯನ್ನು ಶ್ಲಾಘಿಸಿದ ಮುಷ್ತಾಕ್, ತಮಾಷೆಯಾಗಿ ICC ಯನ್ನು ಭಾರತೀಯ ಕ್ರಿಕೆಟ್ ಕೌನ್ಸಿಲ್ ಎಂದು ಕರೆದಿದ್ದರು.
ಅಲ್ಲದೇ, ಇದು ಭಾರತಕ್ಕೆ ತಕ್ಕಂತೆ ಪಿಚ್ ಸಿದ್ಧಗೊಳಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
"ಒಂದು ವಿಷಯವೆಂದರೆ ಈಗ ಪಿಚ್ ಅನ್ನು ಹೇಗೆ ಸಿದ್ಧಪಡಿಸಲಾಗಿದೆ. ಐಸಿಸಿ... ಭಾರತೀಯ ಕ್ರಿಕೆಟ್ ಮಂಡಳಿ. ಐಸಿಸಿ ಬೇರೆ ಕೌನ್ಸಿಲ್ ಅಲ್ಲ. ಅವರು ಆಟಕ್ಕೆ ಯಾವ ರೀತಿ ಬೇಕೋ ಹಾಗೆ ಪಿಚ್ ಸಿದ್ಧಗೊಳಿಸುತ್ತಾರೆ. ಇವತ್ತು ಕೂಡಾ ಶೇ.10 ರಿಂದ 15 ರಷ್ಟು ಪಿಚ್ ಪರಿಸ್ಥಿತಿ ಭಾರತದ ಪರವಾಗಿಯೇ ಇದೆ ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಇದೀಗ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.