ಭಾರತ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ 
ಕ್ರಿಕೆಟ್

T20 ವಿಶ್ವಕಪ್ 2026: 'ಇದೊಂದು ನಮ್ಮ ನಿಯಂತ್ರಣದಲ್ಲಿಲ್ಲ..!'; ಭಾರತ ಬೌಲಿಂಗ್ ಕೋಚ್ Morne Morkel ಆತಂಕ ಯಾಕೆ?

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಾಲಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದ್ದು, ಈಗಾಗಲೇ ಪಿಚ್ ಕುರಿತು ಮಾಹಿತಿ ಲಭ್ಯವಾಗಿದೆ.

ಮುಂಬೈ: ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮೀಫೈನಲ್ ಗೂ ಮೊದಲು ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ದೊಡ್ಡ ವಿಚಾರವನ್ನು ಹೊರ ಹಾಕಿದ್ದಾರೆ.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಾಲಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದ್ದು, ಈಗಾಗಲೇ ಪಿಚ್ ಕುರಿತು ಮಾಹಿತಿ ಲಭ್ಯವಾಗಿದೆ.

ಭಾರತದ ಡ್ರೈ ಪಿಚ್ ಗೆ ಬದಲಾಗಿ ಈ ಬಾರಿ ಐಸಿಸಿ ಹಸಿರು ಹೊದಿಕೆ ಇರುವ ತೇವಾಂಶದ ಪಿಚ್ ಅನ್ನು ಈ ಪಂದ್ಯಕ್ಕಾಗಿ ಸಿದ್ಧಪಡಿಸಿದೆ. ಇದು ಭಾರತಕ್ಕೆ ಕೊಂಚ ಹಿನ್ನಡೆ ಎಂದು ಹೇಳಲಾಗುತ್ತಿದೆಯಾದರೂ ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಇದಕ್ಕಿಂತಲೂ ದೊಡ್ಡ ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದಾರೆ.

ಪಂದ್ಯದ ಮೇಲೆ ಇಬ್ಬನಿ ನಿರ್ಣಾಯಕ ಪಾತ್ರ

ಈ ಪಂದ್ಯದಲ್ಲೂ ಇಬ್ಬನಿ ನಿರ್ಣಾಯಕ ಪಾತ್ರ ವಹಿಸುವ ಕುರಿತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಆತಂಕ ವ್ಯಕ್ತಪಡಿಸಿದ್ದು, ಇದೊಂದು ವಿಚಾರ ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಹೇಳಿದ್ದಾರೆ.

"ಇಬ್ಬನಿ ಯಾವಾಗಲೂ ದೊಡ್ಡ ಕಾಳಜಿ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಮತ್ತೊಮ್ಮೆ ನೀವು ನಿಯಂತ್ರಿಸಲು ಸಾಧ್ಯವಿಲ್ಲದ ವಿಷಯ: ಟಾಸ್ ನಿರ್ಣಾಯಕವಾಗಿದ್ದು, ವಾಂಖೆಡೆಯಲ್ಲಿ ಯಾವಾಗಲೂ ಹೆಚ್ಚುವರಿ ಬೌನ್ಸ್ ಇರುತ್ತದೆ ಎಂದು ನಾನು ಭಾವಿಸುತ್ತೇನೆ.

ಆಟಗಾರರು ಬೌನ್ಸ್ ಅನ್ನು ನಂಬಬಹುದು ಮತ್ತು ಲೈನ್ ಮೂಲಕ ಆಡಬಹುದು, ಇದು ಬೌಲರ್ ಆಗಿ ನಿಮ್ಮನ್ನು ಆಟಕ್ಕೆ ತರಬಹುದು. ಇಲ್ಲಿನ ಪಿಚ್ ನ ಅಂಚುಗಳು ತುಂಬಾ ಚಿಕ್ಕದಾಗಿದೆ ಎಂದು ನಾನು ಭಾವಿಸುತ್ತೇನೆ. ಚೆಂಡು ಚಲಿಸುತ್ತದೆ; ಇದು ತುಂಬಾ ಸಣ್ಣ ಮೈದಾನವಾಗಿದೆ. ಹೀಗಾಗಿ ಹೆಚ್ಚೆಚ್ಚು ರನ್ ಗಳನ್ನು ನೋಡಬಹುದು" ಎಂದು ಅವರು ವಿವರಿಸಿದರು.

ಅಂತೆಯೇ ನೀವು ಪ್ರತಿ ಓವರ್‌ನಲ್ಲಿ ಹೋರಾಡುತ್ತಲೇ ಇರಬೇಕು, ಕ್ಷಣದಲ್ಲಿ ಉಳಿಯಬೇಕು ಮತ್ತು ಪ್ರತಿ ಚೆಂಡಿಗೆ ಸ್ಪರ್ಧಿಸಬೇಕು. ಏಕೆಂದರೆ, ನಾನು ಹೇಳಿದಂತೆ, ಈ ಮೇಲ್ಮೈಯಲ್ಲಿ ಬ್ಯಾಟ್ಸ್‌ಮನ್‌ನ ಬಲವು ಅವನ ದೌರ್ಬಲ್ಯವೂ ಆಗಿರಬಹುದು. ಕೆಲವೊಮ್ಮೆ ಹೆಚ್ಚು ರಕ್ಷಣಾತ್ಮಕವಾಗಿ ಹೋಗದೆ ಆಕ್ರಮಣ ಮಾಡುತ್ತಲೇ ಇರುವುದು ಉತ್ತಮ, ಏಕೆಂದರೆ ಅವಕಾಶಗಳು ಉದ್ಭವಿಸಬಹುದು" ಎಂದು ಮಾರ್ಕೆಲ್ ಹೇಳಿದರು.

ಕ್ಯಾಚಿಂಗ್, ಫೀಲ್ಡಿಂಗ್ ಉತ್ತಮವಾಗಿರಬೇಕು

ಇದೇ ವೇಳೆ ತಂಡದಲ್ಲಿನ ಕೆಲ ವಿಚಾರಗಳ ಕುರಿತು ಮಾತನಾಡಿದ ಮಾರ್ಕೆಲ್ ಪ್ರಮುಖವಾಗಿ ಕ್ಯಾಚಿಂಗ್ ಎಫಿಶಿಯನ್ಸಿ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದರು. 'ಈ ವಿಶ್ವಕಪ್‌ನಲ್ಲಿ ಭಾರತ 13 ಕ್ಯಾಚ್‌ಗಳನ್ನು ಕೈಬಿಟ್ಟಿದ್ದು, ಇದು ಯಾವುದೇ ತಂಡಗಳಿಗಿಂತ ಅಧಿಕ.. ಇದು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ಗೆ ಹೋಗುವ ಮೊದಲು "ಕಳವಳಕಾರಿ"ಯಾಗಿ ಉಳಿದಿದೆ ಎಂದು ಮೋರ್ನೆ ಮಾರ್ಕೆಲ್ ಒಪ್ಪಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧವೇ ಮೂರು ಅವಕಾಶಗಳು ಕೈಚೆಲ್ಲಿದವು. ಫೀಲ್ಡಿಂಗ್ ವೈಫಲ್ಯಗಳು ಬೇಗನೆ ನಿರ್ಣಾಯಕವಾಗಬಹುದು ಎಂದು ಮಾರ್ನೆ ಮಾರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ