ಸಂಜು ಸ್ಯಾಮ್ಸನ್  online desk
ಕ್ರಿಕೆಟ್

T20 ವಿಶ್ವಕಪ್: ಸಂಜು ಸ್ಯಾಮ್ಸನ್ ಆರ್ಭಟಕ್ಕೆ "ದೇವರು" ಕಾರಣ; ಮದುವೆಯ ಭರಾಟೆಯಲ್ಲೂ ಟೀಂ ಇಂಡಿಯಾ ಮರೆಯದ God!

ಆದರೆ ಮನುಷ್ಯರ ಕೈಗಳು ದೂರವಾದಾಗ, ದೇವರುಗಳ ಕೈಗಳು ತಮ್ಮ ಕೆಲಸವನ್ನು ಪ್ರಾರಂಭಿಸುತ್ತವೆ ಎನ್ನುವಂತೆ ಸಂಜು ಸ್ಯಾಮ್ಸನ್ ವಿಷಯದಲ್ಲಿಯೂ ಆಯಿತು.

ಭಾರತ ತಂಡ ಕ್ರಿಕೆಟ್ ವಿಶ್ವಚಾಂಪಿಯನ್ ಶಿಪ್ ಪಟ್ಟವನ್ನು ಸತತ 2ನೇ ಬಾರಿಗೆ ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಈಗ ಎಲ್ಲೆಡೆ ಸುದ್ದಿಯಾಗತೊಡಗಿದೆ.

ಮೊಣಕೈ ಗಾಯದಿಂದಾಗಿ ವರ್ಷದ ಆರಂಭದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದ ಸಂಜು ಸ್ಯಾಮ್ಸನ್ ಫಿಟ್ನೆಸ್ ಟೆಸ್ಟ್ ನಲ್ಲಿ ಹಿನ್ನಡೆ ಎದುರಿಸಿದ್ದ ಕಾರಣ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯೂ ಕಡಿಮೆ ಇತ್ತು. ಆದರೂ ಈ ಬಾರಿ ವಿಶ್ವಕಪ್ ನಲ್ಲಿ ಏಕಾಏಕಿ ಮಿಂಚಿದರು. ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಕೈ ಹಿಡಿದ ಸಂಜು ಸ್ಯಾಮ್ಸನ್ ಆರಂಭದಲ್ಲಿ ಟಿ20 ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಪಡೆದಿರಲಿಲ್ಲ. ಇಂಡಿಯಾ ಟುಡೆ ಕಾನ್ಲೇವ್ ನಲ್ಲಿ ಟಿ20 ವಿಶ್ವಕಪ್‌ನ ಆರಂಭದಲ್ಲಿನ ಕಠಿಣ ಹಂತವನ್ನು ನೆನಪಿಸಿಕೊಂಡಿದ್ದು. "ನಾನು ವಿಶ್ವಕಪ್ ಗೆಲ್ಲುತ್ತೇನೆ ಎಂದು ಭಾವಿಸಿದ್ದೆ, ಆದರೆ ನಾನು ಆಡುವ XI ನಲ್ಲಿಯೂ ಇರಲಿಲ್ಲ. ಇದು ನನ್ನನ್ನು ಮಾನಸಿಕವಾಗಿ ಕಾಡಿತ್ತು. 5 ಅಥವಾ 6 ದಿನಗಳವರೆಗೆ ಎಲ್ಲದರಿಂದ ದೂರವಿದ್ದೆ." ಎಂದು ಹೇಳಿದ್ದಾರೆ.

ಆದರೆ ಮನುಷ್ಯರ ಕೈಗಳು ದೂರವಾದಾಗ, ದೇವರುಗಳ ಕೈಗಳು ತಮ್ಮ ಕೆಲಸವನ್ನು ಪ್ರಾರಂಭಿಸುತ್ತವೆ ಎನ್ನುವಂತೆ ಸಂಜು ಸ್ಯಾಮ್ಸನ್ ವಿಷಯದಲ್ಲಿಯೂ ಆಯಿತು.

ತಂಡದಲ್ಲಿ ಸ್ಥಾನ ಪಡೆಯದೇ ಇದ್ದುದ್ದಕ್ಕಾಗಿ ಮಾನಸಿಕವಾಗಿ ನೋವು ಎದುರಿಸುತ್ತಿದ್ದ ಸಂಜು ಸ್ಯಾಮ್ಸನ್ ಗೆ ಅದೃಷ್ಟ ಅರಸಿಬಂದಿತ್ತು. ಅವರಿಗೆ ಸಿಕ್ಕ ಮಾರ್ಗದರ್ಶನದ ಸಮಯ ಉತ್ತಮವಾಗಿತ್ತು, ಅದರ ಹಿಂದೆ ಇದ್ದವರು ಗಾಡ್ ಆಫ್ ಕ್ರಿಕೆಟ್ ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್!

ಕಳೆದ ವಾರ, ಭಾರತ ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್‌ನ ಹೆಚ್ಚಿನ ಒತ್ತಡವನ್ನು ನಿಭಾಯಿಸಿದಾಗ. ತೆಂಡೂಲ್ಕರ್ ಮನೆಯಲ್ಲಿ ವಿಭಿನ್ನ ರೀತಿಯ ಸಂತಸ ಮೂಡಿತ್ತು. ಆ ಸಮಯ ಸಚಿನ್ ತೆಂಡೂಲ್ಕರ್ ಅವರ ಮಗನ ಮದುವೆಯ ಸಮಯವಾಗಿತ್ತು. ಆದರೂ, ಮನೆಯಲ್ಲಿ ಸಂಭ್ರಮದ ವಾತಾವರಣ ಮತ್ತು ಜಾಗತಿಕ ಗಣ್ಯರಿಂದ ಗುನುಗುತ್ತಿದ್ದರೂ ಸಹ, ಮಾಸ್ಟರ್ ಬ್ಲಾಸ್ಟರ್ ಕೇರಳದ ಹುಡುಗನಿಗಾಗಿ ಸಮಯ ಮೀಸಲಿಟ್ಟರು.

ಫೈನಲ್ ಪಂದ್ಯದ ಮುನ್ನಾದಿನದಂದು ಸಚಿನ್ ಸ್ಯಾಮ್ಸನ್ ಜೊತೆ ಮಾತನಾಡಿದರು. ಅದು ಆತನ ಬ್ಯಾಟಿಂಗ್ ವೇಗದ ಕುರಿತದ್ದಾಗಲಿ ಮೊಣ ಕೈ ಗಾಯದ ಬಗ್ಗೆ ಮಾತನಾಡಲಾಗಲಿ ಅಲ್ಲ. ಅದು ಸ್ಪಷ್ಟತೆಯ ವಿಷಯವಾಗಿತ್ತು. 24 ವರ್ಷಗಳ ಕಾಲ ಒಂದು ದೇಶದ ತಂಡದ ಭಾರವನ್ನು ಎದುರಿಸಿದ ಸಚಿನ್, ಸ್ಯಾಮ್ಸನ್ ಆಟವನ್ನು ಬೆನ್ನಟ್ಟುವುದನ್ನು ನಿಲ್ಲಿಸಲು ಮತ್ತು ಆಟ ಆತನ ಬಳಿಗೆ ಬರಲು ಅವಕಾಶ ನೀಡುವ ಆಟದ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಮಾನಸಿಕ ಸ್ಥೈರ್ಯ ತುಂಬಿ ಸಹಾಯ ಮಾಡಿದರು.

"ನಾನು ಸಚಿನ್ ತೆಂಡೂಲ್ಕರ್ ಸರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ಸ್ಯಾಮ್ಸನ್ ಫೈನಲ್ ನಂತರ ಬಹಿರಂಗಪಡಿಸಿದರು. "ನಿನ್ನೆ ಕೂಡ, ಅವರು ನನ್ನ ಭಾವನೆಯನ್ನು ಪರಿಶೀಲಿಸಲು ನನಗೆ ಕರೆ ಮಾಡಿದರು. ಅವರಂತಹ ವ್ಯಕ್ತಿಯಿಂದ ಮಾರ್ಗದರ್ಶನ ಪಡೆಯುವುದನ್ನು ಹೊರತುಪಡಿಸಿದರೆ ನನಗೆ ಇನ್ನೇನು ಬೇಕು? ಆ ಸ್ಪಷ್ಟತೆ, ಆ ಆಟದ ಅರಿವನ್ನು ಅಭಿವೃದ್ಧಿಪಡಿಸಿಕೊಳ್ಳಲು ನನಗೆ ಅವರು ಸಹಾಯ ಮಾಡಿದರು."

ಕ್ರಿಕೆಟ್ ದೇವರು ತನ್ನ ಮಗನ ವಿವಾಹ ಸಂಭ್ರಮದ ಮಧ್ಯದಲ್ಲೂ ಸಮಯ ಮಾಡಿಕೊಂಡು ಯುವ ಕ್ರಿಕೆಟಿಗನಲ್ಲಿ ಆಟದ ಸ್ಪಷ್ಟನೆಯನ್ನು ಸ್ಥಿರಗೊಳಿಸಿದ್ದು ಸ್ಯಾಮ್ಸನ್ ಅಂತಿಮವಾಗಿ ಪಡೆದುಕೊಂಡ ದೈವಿಕ ಬೆಂಬಲಕ್ಕೆ ಸಾಕ್ಷಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ