ಅಕ್ಷರ್ ಪಟೇಲ್ 
ಕ್ರಿಕೆಟ್

'ಇಂಪ್ಯಾಕ್ಟ್ ಪ್ಲೇಯರ್ ನಿಯಮ ನನಗೆ ಇಷ್ಟವಿಲ್ಲ': ಐಪಿಎಲ್ 2026ಕ್ಕೂ ಮುನ್ನ ಅಕ್ಷರ್ ಪಟೇಲ್ ಸ್ಫೋಟಕ ಹೇಳಿಕೆ

ಆಗಾಗ್ಗೆ ನಾಯಕತ್ವ ಬದಲಾವಣೆಗಳನ್ನು ಫ್ರಾಂಚೈಸಿ ಕಂಡಿದೆ. 19 ಆವೃತ್ತಿಗಳಲ್ಲಿ 13 ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಬದಲಾವಣೆಯಾಗಿದೆ. ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್‌ನ ಅನುಭವಿ ಆಟಗಾರ.

ಮಾರ್ಚ್ 28ರಂದು ಐಪಿಎಲ್ 2026ನೇ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಆರಂಭವಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಇದೀಗ ಐಪಿಎಲ್‌ನಲ್ಲಿನ ನಿಯಮವೊಂದರ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಣಕ್ಯಪುರಿಯ ಲೀಲಾ ಹೋಟೆಲ್‌ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ನ ಆವೃತ್ತಿಯ ಆರಂಭಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಲ್‌ನಲ್ಲಿನ ಇಂಪ್ಯಾಕ್ಟ್ ಸಬ್ ನಿಯಮವು ಆಲ್‌ರೌಂಡರ್‌ಗಳ ಪಾತ್ರವನ್ನು ಕಡಿಮೆ ಮಾಡಿದೆ. 'ನನಗೆ ಈ ನಿಯಮ ಇಷ್ಟವಿಲ್ಲ'. ತಂಡಗಳು ಈಗ ತಜ್ಞ ಬ್ಯಾಟರ್ ಅಥವಾ ಬೌಲರ್‌ನೊಂದಿಗೆ ಹೋಗುತ್ತವೆ... ಆಲ್‌ರೌಂಡರ್ ಆಗಿ, ಅದು ನಿಮ್ಮ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ನಿಯಮಗಳು ನಿಯಮಗಳೇ ಆಗಿವೆ ಎಂದು ಹೇಳಿದರು.

ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಭಾರತದ ಐಸಿಸಿ ಯಶಸ್ಸಿನ ನಂತರ ಐಪಿಎಲ್‌ನತ್ತ ಮರಳುತ್ತಿರುವ ಅಕ್ಷರ್ ಎರಡನೇ ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 'ಮಾನಸಿಕವಾಗಿ ಇಷ್ಟೊಂದು ನೀಡಿದ ನಂತರ, ಸ್ವಲ್ಪ ಶೂನ್ಯತೆ ಇದೆ. ನಾನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದೆ' ಎಂದು ಹೇಳಿದರು.

ಆಗಾಗ್ಗೆ ನಾಯಕತ್ವ ಬದಲಾವಣೆಗಳನ್ನು ಫ್ರಾಂಚೈಸಿ ಕಂಡಿದೆ. 19 ಆವೃತ್ತಿಗಳಲ್ಲಿ 13 ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಬದಲಾವಣೆಯಾಗಿದೆ. ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್‌ನ ಅನುಭವಿ ಆಟಗಾರ. 7 ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ.

'ಫ್ರ್ಯಾಂಚೈಸ್ ಕ್ರಿಕೆಟ್ ತುಂಬಾ ವಿಭಿನ್ನವಾಗಿದೆ. ಆಟಗಾರರು ವಿಭಿನ್ನ ದೇಶಗಳಿಂದ ಬರುತ್ತಾರೆ, ವಿಭಿನ್ನ ಪಾತ್ರಗಳು. ಆದರೆ, ಭಾರತೀಯ ತಂಡದಿಂದ ಕಲಿತುಕೊಂಡ ಒಂದು ವಿಷಯವೆಂದರೆ ಫ್ಲೆಕ್ಸಿಬಲಿಟಿ - ಪರಿಸ್ಥಿತಿಗಳಿಗೆ ತ್ವರಿತವಾಗಿ ಹೊಂದಿಕೊಳ್ಳುವುದು. ನಾವು ಒಂದೇ ಶೈಲಿಯನ್ನು ಆಡಲು ಸಾಧ್ಯವಿಲ್ಲ; ನಾವು ಪರಿಸ್ಥಿತಿಗಳು ಮತ್ತು ಪಾತ್ರಗಳಿಗೆ ಹೊಂದಿಕೊಳ್ಳಬೇಕು' ಎಂದರು.

ಅಕ್ಷರ್ ಪಟೇಲ್ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಫೀಲ್ಡಿಂಗ್‌ನಿಂದಾಗಿ ಎಲ್ಲರ ಗಮನ ಸೆಳೆದರು. ಸೆಮಿಫೈನಲ್‌ ಪಂದ್ಯದಲ್ಲಿ ಅವರ ಎರಡು ಪ್ರಮುಖ ಕ್ಯಾಚ್‌ಗಳನ್ನು ಭಾರತದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಜಾಂಟಿ ರೋಡ್ಸ್‌ಗೆ ಹೋಲಿಸಲಾಯಿತು.

'ನಾನು ಏನು ಮಾಡಿದ್ದೇನೆಂದು ಆ ಕ್ಷಣದಲ್ಲಿ ನನಗೆ ಅರಿವಾಗಲಿಲ್ಲ. ನಾನು ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೆ. ನಂತರ, ನನ್ನ ಸ್ನೇಹಿತರು ಹಂಚಿಕೊಂಡ ರೀಲ್‌ಗಳಿಂದ ವಿಡಿಯೋಗಳನ್ನು ನೋಡಿದಾಗ ಮಾತ್ರ ಆ ಕ್ಯಾಚ್‌ಗಳು ಎಷ್ಟು ಕಷ್ಟಕರವೆಂದು ನನಗೆ ಅರ್ಥವಾಯಿತು' ಎಂದರು.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಚೊಚ್ಚಲ ಪ್ರಶಸ್ತಿ ಹುಡುಕಾಟದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷ: 'ನಾವು ಎಲ್ಲದಕ್ಕೂ ಸಿದ್ಧ.. ಭಾರತಕ್ಕೆ 'ಅಭೂತಪೂರ್ವ' ಸವಾಲುಗಳ ಸೃಷ್ಟಿ': ಪ್ರಧಾನಿ ಮೋದಿ ಘೋಷಣೆ

IPL 2026: 'ನಾವು ಮನುಷ್ಯರು.. ವಸ್ತುಗಳಲ್ಲ.. ಹರಾಜು ಪ್ರಕ್ರಿಯೆ ನಿಲ್ಲಿಸಿ': Robin Uthappa ಶಾಕಿಂಗ್ ಹೇಳಿಕೆ

ವಿದ್ರಾವಕ: ಕೋತಿ ಕುತ್ತಿಗೆ ಸೀಳಿದ ಬಾಣ, ಮಹಾರಾಷ್ಟ್ರದಲ್ಲಿ 4 ದಿನದಲ್ಲಿ 2ನೇ ದಾಳಿ!

ನಗರ ಪ್ರದೇಶಗಳಿಗೆ 25- ಗ್ರಾಮೀಣ ಪ್ರದೇಶಗಳಿಗೆ 40 ದಿನಗಳಿಗೊಮ್ಮೆ ಸಿಲಿಂಡರ್‌ ಪೂರೈಕೆ; ವಾಣಿಜ್ಯ ಬಳಕೆದಾರರಿಗೆ GAIL ನೋಂದಣಿ ಕಡ್ಡಾಯ: ರಾಜ್ಯ ಸರ್ಕಾರ

ಚಿನ್ನಾಭರಣ ನೀಡಿ ಯುದ್ಧಗ್ರಸ್ತ ಇರಾನ್ ಜೊತೆ ನಿಂತ ಕಾಶ್ಮೀರಿಗಳು: ಸಹಾಯದ ಬೆನ್ನಲ್ಲೇ ಬಂದ ಪ್ರತಿಕ್ರಿಯೆ ಏನೆಂದರೆ...

SCROLL FOR NEXT