ಕ್ರಿಕೆಟ್

'Pink Looks Good On Me': ಗನ್ ಶಾಟ್ ಸೆಲೆಬ್ರೇಷನ್, CKS ಮ್ಯಾನೇಜ್​​ಮೆಂಟ್ ಗೆ ಜಡೇಜಾ ಹೇಳಿದ್ದೇನು? Video

ಎಂಟನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಹಾಕಿದ ಮೊದಲ ಓವರ್​​​ನ ಎರಡನೇ ಬಾಲ್​​ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್​​ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು.

ಗುವಾಹಟಿ: ಗುವಾಹಟಿಯ ACA ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2026 ಪಂದ್ಯದಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ವಿರುದ್ಧ ಪ್ರಭಾವಶಾಲಿ ಬೌಲಿಂಗ್ ಮಾಡಿದ ಅನುಭವಿ ಎಡಗೈ ಸ್ಪಿನರ್, ಆಲ್‌ರೌಂಡರ್ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದು ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಕೊಡುಗೆ ನೀಡಿದರು.

ಎಂಟನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಹಾಕಿದ ಮೊದಲ ಓವರ್​​​ನ ಎರಡನೇ ಬಾಲ್​​ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್​​ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು.

ನಂತರ ಕಣಕ್ಕೆ ಇಳಿದ ಶಿವಂ ದುಬೆ ಕೂಡಾ ಸಿಕ್ಸರ್ ಹೊಡೆಯಲು ಹೋಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಒಂದೇ ಓವರ್​ ಅಲ್ಲಿ ಎರಡು ವಿಕೆಟ್ ತೆಗೆದು ಜಡೇಜಾ ಮಿಂಚಿದರು.

ಈ ವೇಳೆ ಜಡೇಜಾ ಭರ್ಜರಿಯಾಗಿ ಸೆಲೆಬ್ರೇಷನ್ ಕೂಡ ಮಾಡಿದರು. ಗನ್ ಪೋಸ್ ಕೊಟ್ಟು ಸೆಲೆಬ್ರೇಷನ್ ಮಾಡುವ ಮೂಲಕ CKS ಮ್ಯಾನೇಜ್​​ಮೆಂಟ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಪಂದ್ಯದ ನಂತರ ಮಾತನಾಡಿದ ರವೀಂದ್ರ ಜಡೇಜಾ, ನನಗೆ ಗುಲಾಬಿ ಬಣ್ಣವು ಚೆನ್ನಾಗಿ ಕಾಣುತ್ತದೆ ಎಂದುಭಾವಿಸುತ್ತೇನೆ. ಶಿವಂ ದುಬೆ ಬಹಳ ಸಮಯದಿಂದ ನನಗೆ ತಿಳಿದಿದೆ.ಅವರಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದೇನೆ, ಆದ್ದರಿಂದ ಅವರು ಸ್ಪಿನ್ನರ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್: ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ, ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ಬರಬೇಕಿದ್ದ ವಿಮಾನಕ್ಕೆ ಹಾನಿ!

ಸಿದ್ದರಾಮಯ್ಯ ಅಂದು ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು : ಶ್ರೀರಾಮುಲು

ಜಮೀರ್- ಮಲ್ಲಿಕಾರ್ಜುನ್ ಜಟಾಪಟಿ: ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಗೆ ಬಿಸಿ ತುಪ್ಪ; ಶಾಮನೂರು ಕುಟುಂಬದ ವಿರುದ್ಧ ಮುಸ್ಲಿಮರ ಕೋಪ!

ನೂರಾರು ಕೋಟಿಗಳ ಒಡೆಯ TVK Vijay ತಂದೆ-ತಾಯಿ, ಮಕ್ಕಳಿಗೂ ಸಾಲ ಕೊಟ್ಟಿದ್ದಾರಾ? ಅಫಿಡವಿಟ್ಟಿನಲ್ಲಿ ನಮೂದು

ಭಾರತದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆಯ ಬೊಜ್ಜಿನ ಸಮಸ್ಯೆ: ಅಧ್ಯಯನ ವರದಿ

SCROLL FOR NEXT