ವಿಜಯ್ ಪ್ರಮಾಣ ವಚನ ಕಾರ್ಯಕ್ರಮ 
ಕ್ರಿಕೆಟ್

ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ CSK ಸ್ಟಾರ್! ತಕ್ಷಣ ಕ್ಯಾಬ್ ಹಿಡಿದು ಚೇಪಾಕ್ ತಲುಪು! ಕಾಲೆಳೆದ ಆರ್ ಅಶ್ವಿನ್

ವೇದಿಕೆಯ ಮೇಲಿದ್ದ ಭದ್ರತಾ ಅಧಿಕಾರಿಯೊಬ್ಬರು, ಸಿಎಸ್‌ಕೆ ವೇಗಿ ಅನ್ಶುಲ್ ಕಾಂಬೋಜ್ ಅವರನ್ನೇ ಹೋಲುತ್ತಿದ್ದುದೇ ಇದಕ್ಕೆ ಕಾರಣ.

ಚೆನ್ನೈ: ಭಾನುವಾರ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಿಎಸ್ ಕೆ ಆಟಗಾರನೊಬ್ಬ ಕಾಣಿಸಿಕೊಂಡಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ತಮಾಷೆ ಭಾರೀ ವೈರಲ್ ಆಗಿತ್ತು.

ಅದರಲ್ಲೂ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಪೋಸ್ಟ್ ಹಾಕಿದ್ದ ಮೇಲಂತೂ ಮತ್ತಷ್ಟು ಚರ್ಚೆಯಾಯಿತು. ಚೆನ್ನೈ ತಂಡದ ಮುಂಚೂಣಿ ಬೌಲರ್ ಆಗಿ ಕಾಣಿಸಿಕೊಂಡಿರುವ ಅನ್ಶುಲ್ ಕಾಂಬೋಜ್.!

ಹೌದು. ವೇದಿಕೆಯ ಮೇಲಿದ್ದ ಭದ್ರತಾ ಅಧಿಕಾರಿಯೊಬ್ಬರು, ಸಿಎಸ್‌ಕೆ ವೇಗಿ ಅನ್ಶುಲ್ ಕಾಂಬೋಜ್ ಅವರನ್ನೇ ಹೋಲುತ್ತಿದ್ದುದೇ ಇದಕ್ಕೆ ಕಾರಣ. ಈ ಪೊಲೀಸ್ ರೂಪದ ಕಾಂಬೋಜ್" ಚಿತ್ರ ಟ್ರೆಂಡಿಂಗ್ ಆಗುತ್ತಿದ್ದಂತೆಯೇ, ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ವಿಶಿಷ್ಟ ಹಾಸ್ಯ ಪ್ರಜ್ಞೆಯೊಂದಿಗೆ ಕಾಂಬೋಜ್ ಕಾಲೆಳೆದರು.

ಕರ್ತವ್ಯ ಯಾವಾಗಲೂ ಮೊದಲು, ಆದರೆ ಪಂದ್ಯ ಗೆಲ್ಲಲೇಬೇಕಾದ ದಿನದಂದು ಇದು ಸ್ವಲ್ಪ ಅತಿ ಎನಿಸುತ್ತದೆ ಎಂದು ಅಶ್ವಿನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದರು. ಅಲ್ಲದೇ, "ಇದು ಹಗಲು ಪಂದ್ಯ, ಅನ್ಶುಲ್ ಕಾಂಬೋಜ್... ತಕ್ಷಣ ಕ್ಯಾಬ್ ಹಿಡಿದು ಚೇಪಾಕ್ ತಲುಪು. ಇದು ದೊಡ್ಡ ಪಂದ್ಯ," ಎಂದು ತಮಾಷೆ ಮಾಡಿದರು.

ಮತ್ತೆ ಕೆಲವರು ಸಿಎಸ್ ಕೆಗೆ ಡಬಲ್ ಡ್ಯೂಟಿ. ಕರ್ತವ್ಯ ನಿಷ್ಠ ಸಿಎಸ್ ಕೆ ಬೌಲಕ್ ಎಂದೆಲ್ಲಾ ಹಾಸ್ಯ ಮಾಡಿದರು.

ಈ ಚರ್ಚೆಯಲ್ಲಿ ಭಾಗಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಅನ್ಶುಲ್ ಕಾಂಬೋಜ್ ತಂಡದ ಜೊತೆಗೇ ಇದ್ದಾರೆ ಮತ್ತು ಪಂದ್ಯಕ್ಕೆ ಸಿದ್ಧರಾಗುತ್ತಿದ್ದಾರೆ ಎಂಬುದನ್ನು ಅವರು ಬೌಲಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಗಟ್ಟಿ; ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ, 2027ರಲ್ಲಿ ಟ್ರಂಪ್ ಭಾರತಕ್ಕೆ..!

ಇಸ್ಲಾಂಗೆ ಮತಾಂತರಗೊಂಡರೆ ಹಿಂದುಳಿದ ವರ್ಗಗಗಳ ಸ್ಥಾನಮಾನ ಸಿಗಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು!

ಯಾವುದನ್ನೂ ಲಘುವಾಗಿ ಪರಿಗಣಿಸಬಾರದು, ಮೈದಾನಕ್ಕೆ ಇಳಿದಾಕ್ಷಣ ಗೆಲುವು ಸಾಧ್ಯವಿಲ್ಲ: ಕ್ಯಾಪ್ಟನ್ Shreyas Iyer ಆಕ್ರೋಶ!

ನಮಗೆ 'ಬಿಜೆಪಿ ಮುಕ್ತ ರಾಮ' ಬೇಕು: ರಾಮ ಮಂದಿರ ದೇಣಿಗೆ ವಿವಾದದ ಬಗ್ಗೆ ಉದ್ಧವ್ ಠಾಕ್ರೆ ವಾಗ್ದಾಳಿ!

'ಮೌನದ ಏಕೈಕ ಧ್ವನಿ’: ಗಾಜಾ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿ ಸೋನಿಯಾ ಗಾಂಧಿ ಬರೆದ ಲೇಖನಕ್ಕೆ ಬಿಜೆಪಿ ಟೀಕೆ