ಕ್ರಿಕೆಟ್

ಒಂದಲ್ಲ 8 ಗೆಲುವು: 49 ಅಂತ ಕೆಣಕ್ಕಿದ್ದ KKR ಅನ್ನು ಸೋಲಿಸಿ ತಿರುಗೇಟು ನೀಡಿದ RCB ಫ್ರಾಂಚೈಸಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲೀಗ್ ಹಂತದ ಅಂತ್ಯಕ್ಕೂ ಮುನ್ನವೇ ಲಯಕ್ಕೆ ಮರಳಿದೆ. ಬುಧವಾರ ನಡೆದ ಐಪಿಎಲ್‌ನ 57ನೇ ಪಂದ್ಯದಲ್ಲಿ ಆರ್‌ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲೀಗ್ ಹಂತದ ಅಂತ್ಯಕ್ಕೂ ಮುನ್ನವೇ ಲಯಕ್ಕೆ ಮರಳಿದೆ. ಬುಧವಾರ ನಡೆದ ಐಪಿಎಲ್‌ನ 57ನೇ ಪಂದ್ಯದಲ್ಲಿ ಆರ್‌ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವು ಬೆಂಗಳೂರು ತಂಡವನ್ನು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದೆ. ವಿರಾಟ್ ಕೊಹ್ಲಿ ಶತಕ ಗಳಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಸೋಲಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಪ್ಲೇಆಫ್‌ನ ಹಾದಿ ಮತ್ತೊಮ್ಮೆ ಕಷ್ಟಕರವಾಗಿದೆ. ಏತನ್ಮಧ್ಯೆ, ಆರ್‌ಸಿಬಿ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ. ಈ ಅವಮಾನಕರ ಸೋಲಿನ ನಂತರ, ಸಾಮಾಜಿಕ ಮಾಧ್ಯಮವು ಕೆಕೆಆರ್ ಬಗ್ಗೆ ಹಾಸ್ಯಾಸ್ಪದ ಮೀಮ್‌ಗಳಿಂದ ತುಂಬಿದೆ.

ಇನ್ನು 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೂ ಮುನ್ನ KKR ವೀಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಅಲ್ಲಿ ಟ್ರಾಫಿಕ್ ಸಿಗ್ನಲ್ ಅನ್ನು ಕೆಂಪು ದೀಪದೊಂದಿಗೆ ತೋರಿಸಲಾಗಿದ್ದು ಸಿಗ್ನಲ್‌ನಲ್ಲಿರುವ ಟೈಮರ್ 49 ಸಂಖ್ಯೆಯನ್ನು ಪ್ರಮುಖವಾಗಿ ತೋರಿಸುತ್ತದೆ. ಐಪಿಎಲ್ ಇತಿಹಾಸದಲ್ಲಿ 49 ಗಮನಾರ್ಹ ಸಂಖ್ಯೆಯಾಗಿದೆ. ಏಕೆಂದರೆ ಇದು ಲೀಗ್‌ನಲ್ಲಿ ಆರ್‌ಸಿಬಿ ಕೆಕೆಆರ್ ವಿರುದ್ಧ ದಾಖಲಿಸಿದ ಅತ್ಯಂತ ಕಡಿಮೆ ತಂಡದ ಮೊತ್ತವನ್ನು ಪ್ರತಿನಿಧಿಸುತ್ತದೆ. ಇದು ಅಂದು ಎರಡು ಜನಪ್ರಿಯ ಫ್ರಾಂಚೈಸಿಗಳ ಅಭಿಮಾನಿಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು. ಆದರೆ ಇಂದು ಇದಕ್ಕೆ ಆರ್ ಸಿಬಿ ತಿರುಗೇಟು ನೀಡಿದೆ. ಅದೇ ರೀತಿಯ ಟ್ರಾಫಿಕ್ ಸಿಗ್ನಲ್ ನಲ್ಲಿ ಆರ್ ಸಿಬಿ ಬಸ್ ಯಾವುದೇ ಅಡೆತಡೆ ಇಲ್ಲದೆ ಮುನ್ನುಗುತ್ತಿರುವಂತೆ ತೋರಿಸಲಾಗಿದೆ. ಅಲ್ಲದೆ ಹಸಿರು ದೀಪದಲ್ಲಿ 16 ಪಾಯಿಂಟ್ಸ್ ಎಂದು ತೋರಿಸುವ ಮೂಲಕ ಕೆಕೆಆರ್ ನ ಸ್ಥಾನವನ್ನು ನೆನಪಿಸಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 192 ರನ್ ಗಳಿಸಿದ್ದು ಈ ರನ್ ಗುರಿ ಬೆನ್ನಟ್ಟಿದ RCB 194 ರನ್ ಬಾರಿಸಿ ಗೆಲುವಿನ ನಗೆ ಬೀರಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; 6 ತಿಂಗಳು ಹೊಸ ವಾಹನ ಖರೀದಿ ಮಾಡುವಂತಿಲ್ಲ!

ಕನ್ನಡ ಭಾಷೆ ಮರೆತಿಲ್ಲ: ಆದ್ರೆ ಟಚ್ ಬಿಟ್ಟು ಹೋಗಿದೆ, ಮೂಲ ಮರೆಯದ ತಲೈವಾ! ಕನ್ನಡಿಗರು ಫಿದಾ Video

ಕೋಟ್‌ ಧರಿಸಿ ಕೋರ್ಟ್‌ಗೆ ಹಾಜರಾದ ಮಮತಾಗೆ ಸಂಕಷ್ಟ?: ವಕೀಲ ವೃತ್ತಿಯ ವಿವರ ಕೇಳಿದ ಬಾರ್ ಕೌನ್ಸಿಲ್

SIR Stage 3: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮೇ 30 ರಿಂದ- ಚುನಾವಣಾ ಆಯೋಗ

ಮೇ 20ರಂದು ದೇಶಾದ್ಯಂತ 12 ಲಕ್ಷ ಔಷಧ ಅಂಗಡಿ ಮಾಲೀಕರ ಮುಷ್ಕರ, ಕಾರಣ ಏನು ಗೊತ್ತಾ?

SCROLL FOR NEXT