ಗುಜರಾತ್ ಟೈಟಾನ್ಸ್ ತಂಡ 
ಕ್ರಿಕೆಟ್

'ಗುಜರಾತ್ ಟೈಟಾನ್ಸ್‌ಗೆ ಕೊನೆಗೂ ಹಾರ್ದಿಕ್ ಪಾಂಡ್ಯ ಬದಲಿ ಆಟಗಾರ ಸಿಕ್ಕಿದ್ದಾರೆ': ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಿಪತಿ ಬಾಲಾಜಿ

ಐಪಿಎಲ್ 2026ರಲ್ಲಿ ಜಿಟಿ ಪರ ರಬಾಡ ಮತ್ತೊಂದು ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಅವರು 12 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈಮಧ್ಯೆ, ಸಿರಾಜ್ 12 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಗುಜರಾತ್ ಟೈಟಾನ್ಸ್‌ನ (GT) ಜೇಸನ್ ಹೋಲ್ಡರ್, ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಶ್ಲಾಘಿಸಿದ ಭಾರತದ ಮಾಜಿ ವೇಗಿ ಲಕ್ಷ್ಮಿಪತಿ ಬಾಲಾಜಿ, ಗುಜರಾತ್ ಟೈಟಾನ್ಸ್ ತಂಡವು ಹಾರ್ದಿಕ್ ಪಾಂಡ್ಯ ಬದಲಿ ಆಟಗಾರನನ್ನು ಕಂಡುಕೊಂಡಿದೆ ಎಂದು ಹೇಳಿದರು. ಹಾರ್ದಿಕ್ ಎರಡು ಆವೃತ್ತಿಗಳಿಗೆ ಗುಜರಾತ್ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ 2022 ರಲ್ಲಿ ತಂಡವು ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಮುಂದಿನ ಆವೃತ್ತಿಯಲ್ಲಿ ಫೈನಲ್‌ಗೆ ತಲುಪಿತು. ನಾಯಕತ್ವದ ಜೊತೆಗೆ, ಹಾರ್ದಿಕ್ ತಮ್ಮ ಆಲ್‌ರೌಂಡ್ ಸಾಮರ್ಥ್ಯಗಳಿಂದ ಕೂಡ ಪ್ರಭಾವ ಬೀರಿದ್ದರು. ತಂಡಕ್ಕಾಗಿ ಎರಡೂ ಆವೃತ್ತಿಗಳಲ್ಲಿ 487 ಮತ್ತು 346 ರನ್‌ಗಳನ್ನು ಗಳಿಸಿದರು ಮತ್ತು 11 ವಿಕೆಟ್‌ಗಳನ್ನು ಸಹ ಪಡೆದಿದ್ದರು.

ಸ್ಟಾರ್ ಸ್ಪೋರ್ಟ್ಸ್‌ನ ವಿಡಿಯೋದಲ್ಲಿ ಹೋಲ್ಡರ್ ಅವರನ್ನು ಹೊಗಳುತ್ತಾ, ಆಟಗಾರನು ತನ್ನ ಆಲ್‌ರೌಂಡ್ ಸಾಮರ್ಥ್ಯಗಳಲ್ಲಿ ವಿಕಸನಗೊಂಡಿದ್ದಾರೆ ಎಂದು ಬಾಲಾಜಿ ಗಮನಸೆಳೆದರು. ಈ ಆವೃತ್ತಿಯಲ್ಲಿ ಜಿಟಿ ಪರ ಆರು ಪಂದ್ಯಗಳಲ್ಲಿ ಹೋಲ್ಡರ್ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

'ಕಳೆದ ಎರಡು ವರ್ಷಗಳಿಂದ ಅವರು ಟಿ20 ಕ್ರಿಕೆಟ್‌ನಲ್ಲಿ ಸುಧಾರಿತ ಕ್ರಿಕೆಟಿಗರಾಗಿದ್ದಾರೆ. ವಿಶೇಷವಾಗಿ ಡೆತ್ ಓವರ್ ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿ ಅಭಿವೃದ್ಧಿ ಕಂಡಿದ್ದಾರೆ. ಅವರು ಕಾಮಿಯೋ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯದಲ್ಲಿ ವಿಕಸನಗೊಂಡಿದ್ದಾರೆ. ಜಿಟಿ ತಂಡಕ್ಕಾಗಿ ಹಾರ್ದಿಕ್ ಪಾಂಡ್ಯ ನಿರ್ವಹಿಸಿದ್ದ ಪಾತ್ರವನ್ನು ಅಂತಿಮವಾಗಿ ಅವರು ತುಂಬಿದ್ದಾರೆ. ಅವರು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಜಿಟಿಗೆ ಉತ್ತಮ ಸಮತೋಲನ ನೀಡುವ ಆಧಾರಸ್ತಂಭವಾಗಿದ್ದಾರೆ' ಎಂದು ಭಾರತದ ಮಾಜಿ ವೇಗಿ ಹೇಳಿದರು.

ಐಪಿಎಲ್ 2026ರಲ್ಲಿ ಜಿಟಿ ಪರ ರಬಾಡ ಮತ್ತೊಂದು ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಅವರು ಆಡಿರುವ 12 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಈಮಧ್ಯೆ, ಸಿರಾಜ್ 12 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 8.23​​ರ ಎಕಾನಮಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಸಿರಾಜ್ ಅವರ ಬಿಗಿಯಾದ ಬೌಲಿಂಗ್ ರಬಾಡ ಅವರಿಗೂ ಸಹಾಯ ಮಾಡಿದೆ ಎಂದು ಬಾಲಾಜಿ ಅಭಿಪ್ರಾಯಪಟ್ಟರು.

'ರಬಾಡ ಹೆಚ್ಚಿನ ಆಕ್ಟೇನ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಅವರು ಅದನ್ನು ಗರಿಷ್ಠಗೊಳಿಸುತ್ತಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಅವರು ಸ್ಲೋವರ್ ಎಸೆತಗಳನ್ನು ಹೆಚ್ಚಾಗಿ ನಂಬುತ್ತಿದ್ದರು. ಈ ಆವೃತ್ತಿಯಲ್ಲಿ ಅವರ ವೇಗವು ಅವರು ಗರಿಷ್ಠ ಫಿಟ್‌ನೆಸ್‌ನಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರ ಪ್ರದರ್ಶನವು ತಂಡದ ಫಲಿತಾಂಶವನ್ನು ಸುಧಾರಿಸಲು ಸಹಾಯ ಮಾಡಿದೆ' ಎಂದರು.

'ಸಿರಾಜ್ ಅವರ ರನ್ ಕಟ್ಟಿಹಾಕುವ ಬೌಲಿಂಗ್ ಪ್ರದರ್ಶನ ಪರೋಕ್ಷವಾಗಿ ರಬಾಡಗೆ ಸಹಾಯ ಮಾಡಿದೆ. ಪ್ರಸಿದ್ಧ್ ಕೃಷ್ಣ ಮತ್ತು ಉತ್ತಮ ಫಾರ್ಮ್‌ನಲ್ಲಿರುವ ಜೇಸನ್ ಹೋಲ್ಡರ್ ಅವರೊಂದಿಗೆ ಜಿಟಿ ಮಾರಕ ವೇಗದ ದಾಳಿಯನ್ನು ಹೊಂದಿದೆ. ಈ ನಾಲ್ವರು ಆಟಗಾರರು 1980ರ ದಶಕದ ವೆಸ್ಟ್ ಇಂಡೀಸ್ ತಂಡವನ್ನು ನೆನಪಿಸುತ್ತಾರೆ. ಅವರು ಎಲ್ಲ ಸಮಯದಲ್ಲೂ ಆಕ್ರಮಣಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಕೆಟ್‌ಗಳ ಕಾಲಂ ಬದಲಾಗುತ್ತಲೇ ಇದೆ. ಅವರು ಸ್ಪರ್ಧೆಯಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು

ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ, ಕೆಜಿಗೆ 1 ರೂ. ಹೆಚ್ಚಳ..!

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಗುರಿಯಾಗಿಸಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು: ವಿಶ್ವಸಂಸ್ಥೆಯಲ್ಲಿ ಭಾರತ ಖಂಡನೆ

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

SCROLL FOR NEXT