ಎಂಎಸ್ ಧೋನಿ 
ಕ್ರಿಕೆಟ್

IPL 2026: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರಾಂಚಿಗೆ ತೆರಳಿದ ಎಂಎಸ್ ಧೋನಿ; ಮತ್ತೆ CSKಗೆ ಮರಳುವ ಸಾಧ್ಯತೆ!

ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಧೋನಿ ತಂಡದೊಂದಿಗೆ ಇಲ್ಲ ಮತ್ತು ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದರೆ, ಅನುಭವಿ ಕ್ರಿಕೆಟಿಗ ತಂಡವನ್ನು ಸೇರಬಹುದು ಎಂದು ಹೇಳಿದರು.

ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಾರ, ಎಂಎಸ್ ಧೋನಿ ರಾಂಚಿಗೆ ತವರಿಗೆ ಮರಳಿದ್ದಾರೆ ಮತ್ತು ಗುರುವಾರ ಗುಜರಾತ್ ಟೈಟಾನ್ಸ್ (GT) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ನ (CSK) ಅಂತಿಮ ಐಪಿಎಲ್ 2026ರ ಗುಂಪು ಹಂತದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆವೃತ್ತಿಗು ಮುನ್ನವೇ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದ ನಂತರ ಧೋನಿ ಈ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆ ಹಿನ್ನಡೆಯಿಂದ ಅವರು ಚೇತರಿಸಿಕೊಂಡಿದ್ದರೂ, ನಂತರದ ಹೆಬ್ಬೆರಳಿನ ಗಾಯದಿಂದ ಕಳೆದ ಕೆಲವು ಪಂದ್ಯಗಳಿಂದಲೂ ಅವರು ಹೊರಗಳಿದರು.

ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಬೇಕಾದ ಪಂದ್ಯಕ್ಕೂ ಮುನ್ನ ಧೋನಿ ತಂಡದೊಂದಿಗೆ ಪ್ರಯಾಣಿಸಿಲ್ಲ. ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸಿಎಸ್‌ಕೆ ಈ ಪಂದ್ಯವನ್ನು ಗೆದ್ದು ಇತರ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ. ಸಿಎಸ್‌ಕೆ ಸದ್ಯ ಐಪಿಎಲ್ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಗ್ರ 4 ರಲ್ಲಿ ಸ್ಥಾನಕ್ಕಾಗಿ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ.

ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಧೋನಿ ತಂಡದೊಂದಿಗೆ ಇಲ್ಲ ಮತ್ತು ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದರೆ, ಅನುಭವಿ ಕ್ರಿಕೆಟಿಗ ತಂಡವನ್ನು ಸೇರಬಹುದು ಎಂದು ಹೇಳಿದರು.

'ಅವರು ತಂಡದೊಂದಿಗೆ ಇಲ್ಲ ಎಂದು ನಾನು ಖಚಿತಪಡಿಸಬಲ್ಲೆ. ಆದರೆ, ನಾವು ಅರ್ಹತೆ ಪಡೆದರೆ, ಅವರು ಖಂಡಿತವಾಗಿಯೂ ತಂಡದೊಂದಿಗೆ ಮತ್ತೆ ಸೇರಿಕೊಳ್ಳುತ್ತಾರೆ. ಅವರಿಗೆ ಸ್ವಲ್ಪ ನೋವು ಇದೆ, ಆದ್ದರಿಂದ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಈ ಪಂದ್ಯಕ್ಕೆ ಸಿದ್ಧರಿರುವುದಿಲ್ಲ. ಆದರೆ ನಾವು ಪ್ಲೇಆಫ್‌ಗೆ ತಲುಪಿದರೆ, ಅವರು ತಂಡವನ್ನು ಸೇರಬಹುದು' ಎಂದರು.

ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಸೋಲಿನ ನಂತರ, CSK ತಂಡವು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ (GT) ತಂಡವನ್ನು ಎದುರಿಸಲಿದೆ. ಸಿಎಸ್‌ಕೆಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಗೆದ್ದರೆ 14 ಅಂಕಗಳನ್ನು ಗಳಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಮೂವರು ಪುತ್ರರು ಭಾಗಿ: ಆದರೆ ಸರ್ವೋಚ್ಛ ನಾಯಕ ಮೊಜ್ತಾಬಾ ಗೈರು, ಹಲವು ಅನುಮಾನ!

ರಾಮಮಂದಿರದಲ್ಲಿದ್ದ 5 ಕೋಟಿ ರೂ. ಮೌಲ್ಯದ ಚಿನ್ನಲೇಪಿತ 'ರಾಮಚರಿತ ಮಾನಸ' ನಾಪತ್ತೆ: ಮಾಜಿ ಐಎಎಸ್ ಅಧಿಕಾರಿ ಹೇಳಿಕೆ ಕೋಲಾಹಲ

ರಸಗೊಬ್ಬರ ಹೊತ್ತ 15 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿವೆ: ಕೇಂದ್ರ ಸರ್ಕಾರ ಮಾಹಿತಿ

3 ತಿಂಗಳಿಗೆ ಮುರಿದು ಬಿತ್ತ ಪೃಥ್ವಿ ಶಾ ನಿಶ್ಚಿತಾರ್ಥ?: ಪ್ರತಿ ಹಂತದಲ್ಲೂ ನನಗೆ ಮೋಸವಾಗಿದೆ; ಅಕೃತಿ ರಹಸ್ಯ ಪೋಸ್ಟ್ ವೈರಲ್!

ಬುಲಂದ್‌ಶಹರ್ ಎನ್‌ಕೌಂಟರ್‌: ದನ ಕಳ್ಳತನ ಆರೋಪಿಗೆ ಗಾಯ, 5 ಬಂಧನ