ರಿಷಭ್ ಪಂತ್ 
ಕ್ರಿಕೆಟ್

'ಅಷ್ಟೊಂದು ಆತುರವೇಕೆ, ಉಸಿರಾಡಲು ಅವಕಾಶ ನೀಡಿ': ಕೆಟ್ಟ ಪದ ಬಳಸಿದ್ದ ರಿಷಭ್ ಪಂತ್ ಬೆಂಬಲಕ್ಕೆ ನಿಂತ ಸುನೀಲ್ ಗವಾಸ್ಕರ್

ಇಂತಹ ಅಭ್ಯಾಸಗಳು ಹೆಚ್ಚಾಗಿ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತವೆ. ಹಾಗೆ ನೋಡಿದರೆ, ಪಂತ್ ಒಬ್ಬ ಉಲ್ಲಾಸಭರಿತ ವ್ಯಕ್ತಿ ಎಂದು ಗವಾಸ್ಕರ್ ಹೇಳಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ರಿಷಭ್ ಪಂತ್ ಅವರ ಪಂದ್ಯದ ನಂತರದ ಸಂದರ್ಶನದ ನಂತರ ಕೆಟ್ಟ ಪದ ಬಳಕೆಗಾಗಿ ಟೀಕೆಗಳು ಕೇಳಿಬಂದಿದ್ದು, ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರನ್ನು ಬೆಂಬಲಿಸಿದರು. ಎಲ್‌ಎಸ್‌ಜಿ ಮತ್ತು ಪಂತ್‌ಗೆ ಐಪಿಎಲ್ 2026ನೇ ಆವೃತ್ತಿ ಉತ್ತಮವಾಗಿಲ್ಲ. ಲಕ್ನೋ ಮೂಲದ ಫ್ರಾಂಚೈಸಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂತ್ ಕೂಡ 14 ಪಂದ್ಯಗಳಲ್ಲಿ ಕೇವಲ 312 ರನ್ ಗಳಿಸಿ ಬ್ಯಾಟಿಂಗ್‌ನಲ್ಲಿ ಎಡವಿದ್ದಾರೆ. ಆದಾಗ್ಯೂ, ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಸೋಲಿನ ನಂತರ ಅವರ ಹೇಳಿಕೆ ಎಲ್ಲರ ಗಮನ ಸೆಳೆಯಿತು. ಆರ್‌ಆರ್ ವಿರುದ್ಧ ಎಲ್‌ಎಸ್‌ಜಿ ಸೋಲಿನ ನಂತರ, ಪಂತ್ ಪಂದ್ಯದ ನಂತರದ ಸಂದರ್ಶನಕ್ಕೆ ಹಾಜರಾಗಿ ನೇರ ಪ್ರಸಾರದಲ್ಲಿ ‘ನಾವು f***** ಉತ್ತಮ ತಂಡ’ ಎಂದು ಹೇಳಿದರು.

ಪಂತ್ ಅವರ ವರ್ತನೆಗೆ ವ್ಯಾಪಕ ಟೀಕೆಗಳು ಎದುರಾಗುತ್ತಿದ್ದಂತೆ, ಸೋತ ತಂಡದ ನಾಯಕನನ್ನು ಸಂದರ್ಶನಕ್ಕೆ ಕರೆಸುವ ಮೊದಲು ಸಾಕಷ್ಟು ಸಮಯ ನೀಡದಿದ್ದಕ್ಕಾಗಿ ಗವಾಸ್ಕರ್ ಪ್ರಸಾರಕರ ವಿರುದ್ಧ ಕಿಡಿಕಾರಿದ್ದಾರೆ.

‘ಪಂದ್ಯದ ನಂತರದ ಸಂದರ್ಶನದಲ್ಲಿ ರಿಷಭ್ ಪಂತ್ 'ಎಫ್' ಪದವನ್ನು ಹೇಳಿರುವುದು, ಪಂದ್ಯವನ್ನು ಸೋತ ತಂಡದ ನಾಯಕನನ್ನು ಕೆಲವೇ ನಿಮಿಷಗಳಲ್ಲಿಯೇ ಸಂದರ್ಶಿಸುವ ಅಗತ್ಯವಿದೆಯೇ ಎಂದು ಯೋಚಿಸುವಂತೆ ಮಾಡುತ್ತದೆ. ಅದು ಕೊನೆಯ ಓವರ್‌ನಲ್ಲಿ ಮುಕ್ತಾಯವಾಗಿದ್ದರೆ, ನಾಯಕನಿಗೆ ನಿರಾಶೆ ಇನ್ನೂ ಹೆಚ್ಚಾಗಿರುತ್ತದೆ ಮತ್ತು ಅವರು ಪ್ರತಿ ಎಸೆತದಲ್ಲಿಯೂ ಸ್ಟಂಪ್‌ ಹಿಂದೆ ಓಡುತ್ತಿರುವ ವಿಕೆಟ್ ಕೀಪರ್ ಆಗಿದ್ದರೆ, ಅದು ಅವರ ಹತಾಶೆಯನ್ನು ಮತ್ತಷ್ಟು ಹೆಚ್ಚಿಸಬಹುದು’ ಎಂದು ಗವಾಸ್ಕರ್ ಮಿಡ್‌ ಡೇಗೆ ಬರೆದಿರುವ ಅಂಕಣದಲ್ಲಿ ತಿಳಿಸಿದ್ದಾರೆ.

‘ಗೆದ್ದ ತಂಡದ 'ಪ್ಲೇಯರ್ ಆಫ್ ದ ಮ್ಯಾಚ್'ನೊಂದಿಗೆ ಮಾತನಾಡುವುದು ಉತ್ತಮ ಉಪಾಯವಾಗಬಹುದು ಮತ್ತು ಸೋತ ತಂಡದ ನಾಯಕನಿಗೆ ಅವನ ಮುಖದ ಮೇಲೆ ಸ್ವಲ್ಪ ನೀರು ಸಿಂಪಡಿಸಿ, ತನ್ನ ಹಿಡಿತವನ್ನು ಮರಳಿ ಪಡೆಯಲು ಸ್ವಲ್ಪ ಸಮಯ ನೀಡಿ ನಂತರ ಸಂದರ್ಶನಕ್ಕೆ ಕರೆಯಿರಿ. ಪ್ರಸ್ತುತಿ ಸಮಾರಂಭಕ್ಕೆ ಸಿದ್ಧವಾಗಲು ಸ್ವಲ್ಪ ಸಮಯವಿರುತ್ತದೆ. ಆದ್ದರಿಂದ ಸೋತ ತಂಡದ ನಾಯಕನಿಗೆ ಇನ್ನೂ ಕೆಲವು ನಿಮಿಷಗಳನ್ನು ನೀಡುವುದರಿಂದ ಅಂತಹ ವಿಷಯಗಳು ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು’ ಎಂದು ಅವರು ಹೇಳಿದರು.

ಇಂತಹ ಅಭ್ಯಾಸಗಳು ಹೆಚ್ಚಾಗಿ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತವೆ. ಹಾಗೆ ನೋಡಿದರೆ, ಪಂತ್ ಒಬ್ಬ ಉಲ್ಲಾಸಭರಿತ ವ್ಯಕ್ತಿ ಎಂದು ಗವಾಸ್ಕರ್ ಹೇಳಿದ್ದಾರೆ.

‘ರಿಷಭ್ ಪಂತ್ ಅತ್ಯಂತ ಹರ್ಷಚಿತ್ತದಿಂದ ಕೂಡಿದ ವ್ಯಕ್ತಿಗಳಲ್ಲಿ ಒಬ್ಬರು, ಅವರು ಕ್ರೀಡೆಯನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಡಲು ಇಷ್ಟಪಡುತ್ತಾರೆ. ಅವರು ಸೋತರೂ ಸಹ ಸೋತ ತಂಡದ ನಾಯಕನಿಗೆ ತನ್ನ ಆಲೋಚನೆಗಳನ್ನು ಚೇತರಿಸಿಕೊಳ್ಳಲು ಕೆಲವು ನಿಮಿಷಗಳ ಕಾಲಾವಕಾಶ ನೀಡಬೇಕು. ಬದಲಿಗೆ ಉಸಿರಾಡಲು ಸಮಯ ಸಿಗುವ ಮೊದಲೇ ಅವನ ಮುಖಕ್ಕೆ ಮೈಕ್ ಹಿಡಿಯಬಾರದು’ ಎಂದು ಅವರು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ