ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಮಾಂಗಲ್ಯ ಸರ ಬಿಟ್ಟು ನೆಕ್ಲೆಸ್ ದರೋಡೆ ಮಾಡಿದ ಕಳ್ಳರು

ಇಬ್ಬರು ಪಾದಚಾರಿ ಹಾಗೂ ಒಬ್ಬ ಬೈಕ್ ಸವಾರನಿಂದ ಚಿನ್ನಾಭರಣ ದೋಚಿ ಪರಾರಿ...

ಬೆಂಗಳೂರು: ನಗರದಲ್ಲಿಂದು ಒಂದೇ ದರೋಡೆಕೋರರ ಗುಂಪಿನಿಂದ ಸರಣಿ ಕಳ್ಳತನ ನಡೆದಿದೆ. ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು 3 ದರೋಡೆಯನ್ನು ನಡೆಸಿದ್ದಾರೆ.

ಬೆಂಗಳೂರಿನ ಲಗ್ಗೆರೆಯ ಬೃಂದಾವನ ರಸ್ತೆ  ಘಟನೆ ನಡೆದಿದೆ. ಇಂದು ಮುಂಜಾನೆಯಿಂದ ಇಬ್ಬರು ಪಾದಚಾರಿಗಳು ಹಾಗೂ ಒಬ್ಬ ಬೈಕ್ ಸವಾರನಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ರಾಜಗೋಪಾನ ನಗರ ನಿವಾಸಿಯಾದ ಮರಿಬಿಟ್ಟೇಗೌಡ ಎಂಬುವರು ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಅವರನ್ನು ಅಡ್ಡಗಟ್ಟಿ ಚಿನ್ನಾಭರಣ ನೀಡುವಂತೆ ಬೆದರಿಕೆ ಹಾಕಿದರು.

ಮರಿಬಿಟ್ಟೆಗೌಡ ಎಂಬುವರಿಂದ 2 ಚಿನ್ನದ ಚೈನ್ ಹಾಗೂ ಅವರ ಪತ್ನಿ ಬಳಿಯಿದ್ದ ಚಿನ್ನದ ನೆಕ್ಲೆಸ್ ಅನ್ನು ದರೋಡೆಕೋರರು ದೋಚಿದ್ದಾರೆ. ಈ ವೇಳೆ ಪತ್ನಿ ಬಳಿಯಿದ್ದ 16 ಚಿನ್ನದ ಮಾಂಗಲ್ಯ ಚೈನ್‌ನ್ನು ಈ ಕಳ್ಳರ ಗುಂಪು ಪಡೆಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇದರ ಬಳಿಕ 2ನೇ ಕಳವಿಗೆ ಮುಂದಾಯಿತು ಈ ದರೋಡೆ ಗುಂಪು. ಮುಂಜಾನೆ 5 ಗಂಟೆಗೆ ಮತ್ತೊಬ್ಬ ಪಾದಾಚಾರಿ ಕೃಷ್ಣಮೂರ್ತಿ ಜೋಯಿಸ ಎಂಬವರಿಂದ 1 ಚಿನ್ನದ ಸರವನ್ನು ದೋಚಿ ಪರಾರಿಯಾಗಿದೆ.

ಮತ್ತೆ ಅದೇ ಪ್ರದೇಶದಲ್ಲಿ ಮುಂಜಾನೆ ಬೈಕ್‌ನಲ್ಲಿ ತೆರಳುತ್ತಿದ್ದ ರಾಜೇಶ್ ಎಂಬುವರ ಮೇಲೆ ಕಣ್ಣಾಕಿದರು. ಬೈಕ್ ಸಾವರನ್ನು ಅಡ್ಡಗಟ್ಟಿದ ಈ ಖದೀಮರು, ಅವರ ಬಳಿಯಿದ್ದ ಚಿನ್ನದ ಸರವನ್ನು ನೀಡುವಂತೆ ಬೆದರಿಕೆ ಹಾಕಿ, ಕಸಿದುಕೊಂಡಿದ್ದಾರೆ.

ಈ ಮೂರು ದರೋಡೆ ಪ್ರಕರಣಗಳು ಬೃಂದಾವನ ರಸ್ತೆಯಲ್ಲೇ ನಡೆದಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಖದೀಮರಿಗಾಗಿ ಜಾಲ ಬೀಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT