ಮುಖ್ಯಮಂತ್ರಿ ಸಿದ್ದರಾಮಯ್ಯ 
ಜಿಲ್ಲಾ ಸುದ್ದಿ

ಚಾಮುಂಡೇಶ್ವರಿ ಕ್ಷೇತ್ರಕ್ಕೆ ೧೨೦ ಕೋಟಿ ಕೊಟ್ಟ ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಆಕಾರ ನೀಡಲು ಸಹಾಯ ಮಾಡಿರುವ ಚಾಮುಂಡೇಶ್ವರಿ ವಿಧಾನಸಭಾ...

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಆಕಾರ ನೀಡಲು  ಸಹಾಯ ಮಾಡಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನದ ಸಿಂಹಪಾಲು ದೊರಕಿದೆ. ಚಾಮುಂಡೇಶ್ವರಿಯ ವಿವಿಧ ಯೋಜನೆಗಳಿಗೆ ಸಿ ಎಂ ೧೨೦ ಕೋಟಿ ರೂ ಅನುದಾನ ನೀಡಿದ್ದಾರೆ.

೧೨೦ ಕೋಟಿಯಲ್ಲಿ, ೫೩ ಕೋಟಿ ಪಿ ಡಬ್ಲ್ಯು ಡಿ ಕೆಲಸಗಳಿಗೆ, ೩೧ ಕೋಟಿ ಕುಡಿಯುವ ನೀರಿನ ಯೋಜನೆಗೆ ಹಾಗೂ ೨೯.೩೫ ಕೋಟಿ ಆಶ್ರಯ ಮನೆಗಳ ಯೋಜನೆಗೆ ಎಂದು ಮಾಜಿ ಜಿಲ್ಲಾ ಪರಿಷದ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಅವರ ನಿಕಟವರ್ತಿ ಕೆ ಮರಿಗೌಡ ವರದಿಗಾರರಿಗೆ ತಿಳಿಸಿದ್ದಾರೆ.

ಬಹುತೇಕ ಪಿ ಡಬ್ಲ್ಯು ಡಿ ಕೆಲಸಗಳು ಕ್ಷೇತ್ರದ ರಸ್ತೆಗಳ ಅಗಲೀಕರಣ ಮತ್ತು ದುರಸ್ತೀಕರಣವಾಗಿದ್ದು, ಕುಡಿಯುವ ನೀರಿನ ಯೋಜನೆ ೧೦೦ ಹಳ್ಳಿಗಳಿಗೆ ಸಹಕಾರಿಯಾಗಲಿದೆ. ಮಂಡಕಳ್ಳಿ ಗ್ರಾಮದ ೪೦.೩೨ ಎಕರೆ ಜಾಗದಲ್ಲಿ ಸುಮಾರು ೨೪೪೬ ಆಶ್ರಯ ಮನೆಗಳು ತಲೆ ಎತ್ತಲಿವೆ. ಈಗಾಗಲೇ ೧೦ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ವಿವಿಧ ಯೋಜನೆಯಗಳ ಕಾರ್ಯ ಪ್ರಾರಂಭವಾಗಿದೆ.

ಉಂಡುವಾಡಿ ಕುಡಿಯುವ ಯೋಜನೆಗೆ ಸಿದ್ದರಾಮಯ್ಯನವರು ಶೀಘ್ರದಲ್ಲೆ ರಾಜ್ಯದ ೫೦% ಪಾಲನ್ನು ಬಿಡುಗಡೆ ಮಾಡಲಿದ್ದು, ಈ ಯೋಜನೆ ಯೆಲ್ವಾಲ, ಮೈಸೂರು ನಗರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕು ಸೇರಿದಂತೆ ೯೭ ಹಳ್ಳಿಗಳು ಪಲಾನುಭವಿಗಳಾಗಲಿವೆ ಎಂದು ಮರಿಗೌಡ ತಿಳಿಸಿದ್ದಾರೆ. "ಈ ಕ್ಷೇತ್ರದ ಜೊತೆ ವಿಶೇಷ ಸಂಬಂಧ ಹೊಂದಿರುವ ಸಿದ್ದರಾಮಯ್ಯನವರು, ಕ್ಷೇತ್ರಕ್ಕೆ ಏನಾದರು ಮಾಡಲು ಯಾವಾಗಲು ಆಸಕ್ತರಾಗಿದ್ದರು. ವಿಧಾನಸಭಾ ಅಧಿವೇಶನದ ನಂತರ ಯೋಜನೆಗಳ ಕಾರ್ಯ ವೃದ್ಧಿಯನ್ನು ಪರಿವೀಕ್ಷಣೆ ಮಾಡಲು ಸಭೆ ಕರೆಯಲಿದ್ದಾರೆ" ಎಂದಿದ್ದಾರೆ ಮರಿಗೌಡ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT