ಮುಖ್ಯಮಂತ್ರಿ ಸಿದ್ದರಾಮಯ್ಯ 
ಜಿಲ್ಲಾ ಸುದ್ದಿ

ಚಾಮುಂಡೇಶ್ವರಿ ಕ್ಷೇತ್ರಕ್ಕೆ ೧೨೦ ಕೋಟಿ ಕೊಟ್ಟ ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಆಕಾರ ನೀಡಲು ಸಹಾಯ ಮಾಡಿರುವ ಚಾಮುಂಡೇಶ್ವರಿ ವಿಧಾನಸಭಾ...

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಆಕಾರ ನೀಡಲು  ಸಹಾಯ ಮಾಡಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನದ ಸಿಂಹಪಾಲು ದೊರಕಿದೆ. ಚಾಮುಂಡೇಶ್ವರಿಯ ವಿವಿಧ ಯೋಜನೆಗಳಿಗೆ ಸಿ ಎಂ ೧೨೦ ಕೋಟಿ ರೂ ಅನುದಾನ ನೀಡಿದ್ದಾರೆ.

೧೨೦ ಕೋಟಿಯಲ್ಲಿ, ೫೩ ಕೋಟಿ ಪಿ ಡಬ್ಲ್ಯು ಡಿ ಕೆಲಸಗಳಿಗೆ, ೩೧ ಕೋಟಿ ಕುಡಿಯುವ ನೀರಿನ ಯೋಜನೆಗೆ ಹಾಗೂ ೨೯.೩೫ ಕೋಟಿ ಆಶ್ರಯ ಮನೆಗಳ ಯೋಜನೆಗೆ ಎಂದು ಮಾಜಿ ಜಿಲ್ಲಾ ಪರಿಷದ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಅವರ ನಿಕಟವರ್ತಿ ಕೆ ಮರಿಗೌಡ ವರದಿಗಾರರಿಗೆ ತಿಳಿಸಿದ್ದಾರೆ.

ಬಹುತೇಕ ಪಿ ಡಬ್ಲ್ಯು ಡಿ ಕೆಲಸಗಳು ಕ್ಷೇತ್ರದ ರಸ್ತೆಗಳ ಅಗಲೀಕರಣ ಮತ್ತು ದುರಸ್ತೀಕರಣವಾಗಿದ್ದು, ಕುಡಿಯುವ ನೀರಿನ ಯೋಜನೆ ೧೦೦ ಹಳ್ಳಿಗಳಿಗೆ ಸಹಕಾರಿಯಾಗಲಿದೆ. ಮಂಡಕಳ್ಳಿ ಗ್ರಾಮದ ೪೦.೩೨ ಎಕರೆ ಜಾಗದಲ್ಲಿ ಸುಮಾರು ೨೪೪೬ ಆಶ್ರಯ ಮನೆಗಳು ತಲೆ ಎತ್ತಲಿವೆ. ಈಗಾಗಲೇ ೧೦ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ವಿವಿಧ ಯೋಜನೆಯಗಳ ಕಾರ್ಯ ಪ್ರಾರಂಭವಾಗಿದೆ.

ಉಂಡುವಾಡಿ ಕುಡಿಯುವ ಯೋಜನೆಗೆ ಸಿದ್ದರಾಮಯ್ಯನವರು ಶೀಘ್ರದಲ್ಲೆ ರಾಜ್ಯದ ೫೦% ಪಾಲನ್ನು ಬಿಡುಗಡೆ ಮಾಡಲಿದ್ದು, ಈ ಯೋಜನೆ ಯೆಲ್ವಾಲ, ಮೈಸೂರು ನಗರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕು ಸೇರಿದಂತೆ ೯೭ ಹಳ್ಳಿಗಳು ಪಲಾನುಭವಿಗಳಾಗಲಿವೆ ಎಂದು ಮರಿಗೌಡ ತಿಳಿಸಿದ್ದಾರೆ. "ಈ ಕ್ಷೇತ್ರದ ಜೊತೆ ವಿಶೇಷ ಸಂಬಂಧ ಹೊಂದಿರುವ ಸಿದ್ದರಾಮಯ್ಯನವರು, ಕ್ಷೇತ್ರಕ್ಕೆ ಏನಾದರು ಮಾಡಲು ಯಾವಾಗಲು ಆಸಕ್ತರಾಗಿದ್ದರು. ವಿಧಾನಸಭಾ ಅಧಿವೇಶನದ ನಂತರ ಯೋಜನೆಗಳ ಕಾರ್ಯ ವೃದ್ಧಿಯನ್ನು ಪರಿವೀಕ್ಷಣೆ ಮಾಡಲು ಸಭೆ ಕರೆಯಲಿದ್ದಾರೆ" ಎಂದಿದ್ದಾರೆ ಮರಿಗೌಡ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT