ನಿರಂಜನ 
ಜಿಲ್ಲಾ ಸುದ್ದಿ

ಖ್ಯಾತ ಸಾಹಿತಿ ನಿರಂಜನರ ಎಲ್ಲ ಕೃತಿಗಳೂ ಅಂತರ್ಜಾಲದಲ್ಲಿ ಲಭ್ಯ

ಕರ್ನಾಟಕದ ಖ್ಯಾತ ಸಾಹಿತಿ, ಹೋರಾಟಗಾರ ದಿವಂಗತ ನಿರಂಜನ ಅವರ ಕೃತಿಗಳು ಇನ್ನು ಮುಂದೆ ಅಂತರ್ಜಾಲದಲ್ಲಿ ...

ಬೆಂಗಳೂರು: ಕರ್ನಾಟಕದ ಖ್ಯಾತ ಸಾಹಿತಿ, ಹೋರಾಟಗಾರ ದಿವಂಗತ ನಿರಂಜನ ಅವರ ಕೃತಿಗಳು ಇನ್ನು ಮುಂದೆ ಅಂತರ್ಜಾಲದಲ್ಲಿ ಉಚಿತ ಓದಿಗೆ ಸಿಗಲಿವೆ. ಚಿರಸ್ಮರಣೆ, ಮೃತ್ಯುಂಜಯ ಇಂತಹ ಖ್ಯಾತ ಕಾದಂಬರಿಗಳನ್ನು ಬರೆದ ನಿರಂಜನ ಅವರ ಬಹುತೇಕ ಎಲ್ಲ ಕೃತಿಗಳನ್ನು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಅಡಿಯಲ್ಲಿ ಉಚಿತ ಬಳಕೆಗೆ ವಿಕಿಸೋರ್ಸ್ ನಲ್ಲಿ ಸಿಕ್ಕಲಿವೆ.

ಇವುಗಳಲ್ಲಿ ನಿರಂಜನರ ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ಪ್ರಬಂಧಗಳು, ರಾಜಕೀಯ ಲೇಖನಗಳು ಕೂಡ ಒಳಗೊಂಡಂತೆ ಸುಮಾರು ೫೫ ಕೃತಿಗಳಿವೆ.

ಮೈಸೂರು ವಿಶ್ವವಿದ್ಯಾಲಯಕ್ಕೆ 'ಜ್ಞಾನ ಗಂಗೋತ್ರಿ" ಹೆಸರಿನಲ್ಲಿ ಪ್ರಧಾನ ಸಂಪಾದಕರಾಗಿ ಸಂಪಾದಿಸಿದ್ದ ಕನ್ನಡ ವಿಶ್ವಕೋಶ ಮತ್ತು ನವಕರ್ನಾಟಕ ಪ್ರಕಾಶನಕ್ಕೆ ಪ್ರಧಾನ ಸಂಪಾದಕರಾಗಿ ಸಂಪಾದಿಸಿದ ೨೫ ಸಂಪುಟದ ವಿಶ್ವ ಕಥಾ ಕೋಶದಿಂದ ನಿರಂಜನ ಅವರು ಮನೆಮಾತಾಗಿದ್ದರು.

ಈಗಾಗಲೇ ನಿರಂಜನ ಸಂಪಾದಿಸಿರುವ ವಿಶ್ವಕೋಶ ವಿಕಿಸೋರ್ಸ್ ನಲ್ಲಿ ಲಭ್ಯವಿದೆ.

1.      http://bit.ly/1pllLKJ ಈ ಲಿಂಕಿನಲ್ಲಿ ಈ ಪುಸ್ತಕ ಲಭ್ಯವಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT