ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಜಾತಿ ಗಣತಿಯಲ್ಲಿ ಹೆಸರು ಸರಿಯಾಗಿ ಭರ್ತಿ ಮಾಡಿ

ಜಾತಿಗಣತಿ ಹತ್ತಿರ ಬರುತ್ತಿದ್ದಂತೆ ಎಲ್ಲ ಜನಾಂಗಗಳ ಮುಖಂಡರು ಜಾತಿ ಕಾಲಂನಲ್ಲಿ ನೀಡಬೇಕಾದ ಮಾಹಿತಿಯನ್ನು ಕುರಿತು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಜನಾಂಗದವರಿಗೆ ಜಾಗೃತಿ ಮೂಡಿಸುತ್ತಿದ್ದಾರೆ...

ಬೆಂಗಳೂರು: ಜಾತಿಗಣತಿ ಹತ್ತಿರ ಬರುತ್ತಿದ್ದಂತೆ ಎಲ್ಲ ಜನಾಂಗಗಳ ಮುಖಂಡರು ಜಾತಿ ಕಾಲಂನಲ್ಲಿ ನೀಡಬೇಕಾದ ಮಾಹಿತಿಯನ್ನು ಕುರಿತು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಜನಾಂಗದವರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಜಾತಿವಾರು ಸಮೀಕ್ಷೆಯಲ್ಲಿ ಕಾಡುಗೊಲ್ಲ ಜನಾಂಗದ ಪ್ರತಿಯೊಬ್ಬರು ಕಡ್ಡಾಯವಾಗಿ ಜಾತಿ ಕಾಲಂನಲ್ಲಿ `ಕಾಡುಗೊಲ್ಲ' ರೆಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ. ಅದೇ ರೀತಿ ಪರ್ಯಾಯ ಪದ ಎನ್ನುವ ಕಲಾಂಗಳಲ್ಲಿ ಅಡವಿ ಗೊಲ್ಲ(0011) ಮತ್ತು ಹಟ್ಟಿ ಗೊಲ್ಲ(0434) ಎಂದು ಬರೆಸಬೇಕು ಎಂದು ಬರೆಸುವಂತೆ ಕಾಡುಗೊಲ್ಲರ ಸಂಘದ ಅಧ್ಯಕ್ಷ ವಿ. ನಾಗಪ್ಪ ತಿಳಿಸಿದರು.

`ಗೊಲ್ಲ' ಎಂದು ನಮೂದಿಸಿ: `ಗೊಲ್ಲ' ಸಮುದಾಯದ ಪ್ರತಿಯೊಬ್ಬರು ಅರ್ಜಿ ಕಾಲಂನಲ್ಲಿ `ಗೊಲ್ಲ' ಹಾಗೂ ಉಪಜಾತಿಯನ್ನು ಅಲೆಮಾರಿ/ ಅರೆ ಅಲೆಮಾರಿ ಎಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಗೊಲ್ಲರ (ಯಾದವ)ಸಂಘದ ಅಧ್ಯಕ್ಷ ಬಿ.ಎಸ್.ಲಕ್ಷ್ಮೀಪತಿ ತಿಳಿಸಿದರು. ರಾಜ್ಯದ ಕುರುಬ ಸಮುದಾಯದ ಪ್ರತಿಯೊಬ್ಬರು ಜಾತಿಗಣತಿ ಅರ್ಜಿ ಕಾಲಂನಲ್ಲಿ `ಕುರುಬ' ಎಂದು ಕಡ್ಡಾಯವಾಗಿ ನಮೂದಿಸ ಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.

ಕಮ್ಮಾರರೆಂದು ಬರೆಸಿ: ಕಮ್ಮಾರ ಜನಾಂಗದವರು ಜಾತಿ ಕಾಲಂನಲ್ಲಿ `ಕಮ್ಮಾರ' ಹಾಗೂ ಉಪಜಾತಿ ಕಾಲಂನಲ್ಲಿ ಸ್ಥಳೀಯವಾಗಿ ಗುರುತಿಸುವಂತೆ ಕಮ್ಮಾರ, ಕಂಬಾರ, ಬೈಲು, ಕಂಸಾಳೆ, ಮರಾಠಿ ಕಮ್ಮಾರ ಎಂದು ನಮೂದಿಸುವಂತೆ ರಾಜ್ಯ ಕಮ್ಮಾರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಶೇ. 8.5 ರಷ್ಟು ಬೆಳವಣಿಗೆಯೊಂದಿಗೆ ಮುಂಬೈ, ದೆಹಲಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ! ಇಲ್ಲಿದೆ ವರದಿ...

ಮಸೂದೆ ಅಂಗೀಕರಿಸಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ, ಹಾಗೆಂದು ಅನಿರ್ದಿಷ್ಟಾವಧಿ ವಿಳಂಬ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ

ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ ನಂತರ 'ಗಮ್ಚಾ' ಬೀಸಿ ಗಮನ ಸೆಳೆದ ಮೋದಿ!

ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)

SCROLL FOR NEXT