ಟಿ.ಎಂ. ವಿಜಯಭಾಸ್ಕರ್ 
ಜಿಲ್ಲಾ ಸುದ್ದಿ

ಬಿಬಿಎಂಪಿ ಆದಾಯ ಹೆಚ್ಚಳಕ್ಕೆ ಆದ್ಯತೆ: ವಿಜಯಭಾಸ್ಕರ್

ಜನರು ಬಿಬಿಎಂಪಿಯಲ್ಲಿ ಸುಧಾರಣೆ ಬಯಸುತ್ತಿದ್ದು, ಆದಾಯ ಹೆಚ್ಚಿಸುವ ಅಗತ್ಯವಿದೆ ಎಂದು ಬಿಬಿಎಂಪಿಗೆ ಶನಿವಾರ ಆಡಳಿತಾಧಿಕಾರಿಯಾಗಿ...

ಬೆಂಗಳೂರು: ಜನರು ಬಿಬಿಎಂಪಿಯಲ್ಲಿ ಸುಧಾರಣೆ ಬಯಸುತ್ತಿದ್ದು, ಆದಾಯ ಹೆಚ್ಚಿಸುವ ಅಗತ್ಯವಿದೆ ಎಂದು ಬಿಬಿಎಂಪಿಗೆ ಶನಿವಾರ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಟಿ.ಎಂ.ವಿಜಯಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಆಯುಕ್ತ ಎಂ.ಲಕ್ಷ್ಮಿನಾರಾಯಣ ಅವರು ವಿಜಯಭಾಸ್ಕರ್ ಅವರನ್ನು ಬಿಬಿಎಂಪಿಗೆ ಸ್ವಾಗತಿಸಿದರು. ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವುದು ಸಂತಸ ತಂದಿದೆ. ಇದು ಹೆಮ್ಮೆಯ ವಿಚಾರವಾಗಿದ್ದು, ಸರ್ಕಾರದ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ. ಜನರು ಬಿಬಿಎಂಪಿಯಲ್ಲಿ ಬದಲಾವಣೆ ಬಯಸಿದ್ದು, ಹೆಚ್ಚಿನ ಆದಾಯ ತರುವ ವ್ಯವಸ್ಥೆ ಸುಧಾರಣೆ ಮಾಡಬಹುದು. ಹೆಚ್ಚಿನ ಆದಾಯ ತರುವುದು ಹಾಗೂ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬದಲಾವಣೆ ತರಬಹುದು. ಬಿಬಿಎಂಪಿಯಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕವಾದ ವ್ಯವಸ್ಥೆಯಿದೆ. ಸಾರ್ವಜನಿಕರು ನೇರವಾಗಿ ಭೇಟಿಯಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಶೀಘ್ರದಲ್ಲಿ ಅವಕಾಶ ನೀಡಲಿದ್ದೇನೆ ಎಂದು ತಿಳಿಸಿದರು.

ವರ್ಗಾವಣೆಯಾದವರು ಯಾರ್ಯಾರು?
ಬೆಂಗಳೂರು:
ಬಿಬಿಎಂಪಿ ವಿಸರ್ಜನೆಯಿಂದ ಆಡಳಿತಾ„ಕಾರಿಯಾಗಿ ಟಿ.ಎಂ. ವಿಜಯಭಾಸ್ಕರ್ ಹಾಗೂ ಆಯುಕ್ತರಾಗಿ ಜಿ. ಕುಮಾರನಾಯಕ್ ಅವರನ್ನು ಸರ್ಕಾರ ನೇಮಿಸಿದ್ದು, ಇವರೊಂದಿಗೆ ನಾಲ್ಕೈದು ಐಎಎಸ್ ಅಧಿಕಾರಿಗಳ ವಗಾರ್ವಣೆಯಾಗಿದೆ.
-ಟಿ.ಎಂ. ವಿಜಯಭಾಸ್ಕರ್- ಆಡಳಿತಾಧಿಕಾರಿ, ಬಿಬಿಎಂಪಿ.
- ಜಿ. ಕುಮಾರ್ ನಾಯಕ್- ಆಯುಕ್ತ, ಬಿಬಿಎಂಪಿ.
-ಪಂಕಜ್‍ಕುಮಾರ್ ಪಾಂಡೆ- ವ್ಯವಸ್ಥಾಪಕ ನಿರ್ದೇಶಕ, ಕೆಪಿಟಿಸಿಎಲ್.
-ಅಭಿರಾಮ್ ಜಿ. ಶಂಕರ್- ಉಪ ಕಾರ್ಯದರ್ಶಿ, (ಡಿಪಿಎಆರ್ ಸೇವೆಗಳು-2)
-ನಂಜುಂಡೇಗೌಡ (ಕೆಎಎಸ್)- ಕೊಡಗು ಜಿಲ್ಲೆ ಮಡಿಕೇರಿ ಉಪವಿಭಾಗಾ„ಕಾರಿ.

ನಾಳೆ ವಿಧೇಯಕ ಮಂಡನೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಏ.20 ಸೋಮವಾರ ಬೆಳಗ್ಗೆ 11 ಗಂಟೆಗೆ 2015 ನೇ ಸಾಲಿನ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕವನ್ನು  ಮಂಡಿಸಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಓಂ. ಪ್ರಕಾಶ್ ತಿಳಿಸಿದ್ದಾರೆ. ಅದೇ ದಿನ ಮಧ್ಯಾಹ್ನ 2 ಗಂಟೆಗೆ ವಿಧಾನ ಪರಿಷತ್ ಸಮಾವೇಶಗೊಳ್ಳಲಿದೆ ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT