(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ರು.10 ಸಾವಿರ ಕೋಟಿ ಮೌಲ್ಯದ ಒತ್ತುವರಿ ತೆರವಿಗೆ ಸಿದ್ಧತೆ

ಸಾರಕ್ಕಿ ಕೆರೆ ಒತ್ತುವರಿ ತೆರವು ಪೂರ್ಣಗೊಳಿಸಿರುವ ಜಿಲ್ಲಾಡಳಿತ ಸುಮಾರು ರು.10 ಸಾವಿರ ಕೋಟಿ ಮೌಲ್ಯದ 4 ಕೆರೆ ಜಾಗಗಳಲ್ಲಿನ ಒತ್ತುವರಿ ತೆರವುಗೊಳಿಸಲು ಸಿದ್ಧತೆ ನಡೆಸಿದೆ...

ಬೆಂಗಳೂರು: ಸಾರಕ್ಕಿ ಕೆರೆ ಒತ್ತುವರಿ ತೆರವು ಪೂರ್ಣಗೊಳಿಸಿರುವ ಜಿಲ್ಲಾಡಳಿತ ಸುಮಾರು ರು.10 ಸಾವಿರ ಕೋಟಿ ಮೌಲ್ಯದ 4 ಕೆರೆ ಜಾಗಗಳಲ್ಲಿನ ಒತ್ತುವರಿ ತೆರವುಗೊಳಿಸಲು ಸಿದ್ಧತೆ ನಡೆಸಿದೆ.

ಸಾರಕ್ಕಿ ಕೆರೆ ಜಾಗದ ಮೌಲ್ಯವೇ ರು.2000 ಕೋಟಿಯಷ್ಟಿದ್ದು, ಇದುವರೆಗಿನ ತೆರವು ಕಾರ್ಯಾಚರಣೆಯಲ್ಲಿ ಇದು ಅತಿ ದೊಡ್ಡ ಮೌಲ್ಯದ ತೆರವು. ಮುಂದಿನ ತಿಂಗಳು ಅಂದಾಜು ರು.10 ಸಾವಿರ ಕೋಟಿ ಮೌಲ್ಯದ ಒತ್ತುವರಿಯಲ್ಲಿ ತೆರವುಗೊಳಿಸಲಿದೆ. ಆದರೆ ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಿರು ವುದರಿಂದ ಒಂದು ತಿಂಗಳಲ್ಲಿ ಸಿದ್ಧತೆ ನಡೆಸುವುದಾಗಿ ಜಿಲ್ಲಾಡಳಿತ ಹೇಳಿದೆ. ಗೌಡನಪಾಳ್ಯ, ಚಿಕ್ಕಲ್ಲಸಂದ್ರ, ಇಟ್ಟಮಡು ಹಾಗೂ ಬಿಳೇಕಹಳ್ಳಿ ಕೆರೆಗಳಲ್ಲಿ ಒತ್ತುವರಿ ತೆರವಿಗೆ ಸಿದ್ಧತೆ ನಡೆಸಲಾಗಿದೆ.

ಗೌಡನಪಾಳ್ಯ ಹಾಗೂ ಕದಿರೇನಹಳ್ಳಿಯ ಸರ್ವೆ ನಂ.33ರಲ್ಲಿ 9.33 ಎಕರೆ, ಚಿಕ್ಕಲ್ಲಸಂದ್ರದ ಸ.ನಂ.10ರಲ್ಲಿ 6.33 ಎಕರೆ,  ಇಟ್ಟಮಡು ಕೆರೆಯ ಮತ್ತೊಂದು ಭಾಗದ ಸ.ನಂ.7 ರಲ್ಲಿ 4 ಎಕರೆ, ಬಿಳೇಕಹಳ್ಳಿ ಕೆರೆಯ ಡಾಲರ್ಸ್ ಕಾಲೋನಿ ಬಳಿ 56 ಎಕರೆಯಲ್ಲಿ ಒತ್ತುವರಿಯಾಗಿದ್ದು, ಒಂದು ತಿಂಗಳ ನಂತರ ಕಾರ್ಯಾಚರಣೆ ಆರಂಭವಾಗಲಿದೆ. ಮತ್ತೊಂದು ಮೂಲಗಳ ಪ್ರಕಾರ ಇಲ್ಲಿ ಸುಮಾರು 100 ಎಕರೆ ಒತ್ತುವರಿಯಾಗಿದ್ದು, ಎಲ್ಲ ಸೇರಿದರೆ ಒಟ್ಟು ರು.10ಸಾವಿರ ಕೋಟಿ ಮೌಲ್ಯದ ಕೆರೆ ಜಾಗ ಒತ್ತುವರಿಯಾಗಿದೆ. ಇಲ್ಲಿ ಬೃಹತ್ ಕಟ್ಟಡಗಳಿದ್ದು, ಕಾರ್ಯಾಚರಣೆಯೂ ದೊಡ್ಡ ಪ್ರಮಾಣದಲ್ಲೇ ನಡೆಯಲಿದೆ.

ಕೆರೆ ಜಾಗದ ಒತ್ತುವರಿ ತೆರವು ಜೊತೆಗೆ ಭೂ ಒತ್ತುವರಿ ತೆರವು ತೆರವು ಕಾರ್ಯಾಚರಣೆಯೂ ನಡೆಯಲಿದೆ. ಆನೇಕಲ್ ತಾಲೂಕಿನಲ್ಲಿ ಬೃಹತ್ ಪ್ರಮಾಣದ ಒತ್ತುವರಿಯಾಗಿದ್ದು, ಗುರುವಾರ ಜಿಲ್ಲಾಡಳಿತದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಸಾರಕ್ಕಿಯಲ್ಲಿ ತೆರವು ಕಾರ್ಯಾಚರಣೆ ಅಂತಿಮಗೊಂಡಿದ್ದು, ಗುರುವಾರ ಬಿಡಿಎಂಗೆ ಜಾಗವನ್ನು ಹಸ್ತಾಂತರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT