ಜಿಲ್ಲಾ ಸುದ್ದಿ

ಅಸಹಿಷ್ಣುತೆ ಮುಸಲ್ಮಾನರಲ್ಲಿಯೂ ಇದೆ: ಪೇಜಾವರ ಶ್ರೀ

Sumana Upadhyaya

ಕೋಲಾರ: ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದೆ. ಅದು ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಮುಸಲ್ಮಾನರಲ್ಲಿ ಇದಕ್ಕಿಂತ ಹೆಚ್ಚಿನ ಅಸಹಿಷ್ಣುತೆ ಇದೆ. ಆದರೆ ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಾನು ಅಸಹಿಷ್ಣುತೆಯನ್ನು ವಿರೋಧಿಸುತ್ತೇನೆ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಕೋಲಾರದ ಮುಳಬಾಗಿಲಿನಲ್ಲಿ ಮಾತನಾಡಿದ ಅವರು, ಅಸಹಿಷ್ಣುತೆ ದೇಶದ ಅಭಿವೃದ್ದಿಗೆ ಮಾರಕ. ಅದು ಯಾವುದೇ ಧರ್ಮದಲ್ಲಿರಲಿ ಅದನ್ನು ವಿರೋಧಿಸಬೇಕು. ಇಂದು ಅಸಹಿಷ್ಣುತೆಯನ್ನು ರಾಜಕೀಯವಾಗಿ ಬಳಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕೆಡಿಸಲಾಗುತ್ತದೆ. ಇದರಿಂದ ಯಾರಿಗೂ ಪ್ರಯೋಜನವಾಗದು ಎಂದರು. ಅವರು ಕೋಲಾರದ ದಲಿತರ ಕೇರಿಗೆ ಭೇಟಿ ನೀಡಿದ್ದರು.

SCROLL FOR NEXT