ಸಂಚಾರ ಠಾಣೆ ಪೊಲೀಸ್ (ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ಹೆಚ್ಚು ದಂಡ ವಸೂಲಿ ಮಾಡಿ ರಶೀದಿ ಕೊಡ ಸಂಚಾರ ಠಾಣೆ ಎಸ್‍ಐ ಅಮಾನತು

ಚಾಲಕರೊಬ್ಬರಿಂದ ರೂ 100 ದಂಡದ ಬದಲು ರೂ 1,100 ಪಡೆದು ರಶೀದಿ ನೀಡದೆ, ಬೈಕ್ ಜಪ್ತಿಗೆ ಮುಂದಾದ ಆರೋಪದ ಮೇಲೆ ಸಂಚಾರ ಪೊಲೀಸ್ ಠಾಣೆ ಎಸ್‍ಐ ಆಂಜನಪ್ಪ ಅಮಾನತುಗೊಂಡಿದ್ದಾರೆ.

ಬೆಂಗಳೂರು: ಬೈಕ್ ಚಾಲಕರೊಬ್ಬರಿಂದ ರೂ 100 ದಂಡದ ಬದಲು ರೂ 1,100 ಪಡೆದು ರಶೀದಿ ನೀಡದೆ, ಬೈಕ್ ಜಪ್ತಿಗೆ ಮುಂದಾದ ಆರೋಪದ ಮೇಲೆ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಆಂಜನಪ್ಪ ಸೋಮವಾರ ಅಮಾನತುಗೊಂಡಿದ್ದಾರೆ.

ಡಿ.5ರಂದು ರಾತ್ರಿ 11ರ ವೇಳೆಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಅಮೃತ್ ಬೇರಿ
ಬೇಲಿಮಠ ಜಂಕ್ಷನ್ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಮದ್ಯಪಾನ
ಮಾಡಿ ವಾಹನ ಚಾಲನೆ ಮಾಡುವವರನ್ನು ತಪಾಸಣೆ ನಡೆಸುತ್ತಿದ್ದ ಎಸ್.ಆಂಜನಪ್ಪ,
ಅಮೃತ್ ಬೇರಿ ಅವರ ಬೈಕ್ ತಡೆದು ನಿಮ್ಮ ಬೈಕ್ ಕರ್ಕಶ ಹಾರ್ನ್ ಹೊಂದಿದೆ.
ಅಲ್ಲದೇ ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಹೇಳಿ, ರೂ 1,100 ದಂಡ ಪಾವತಿಸುವಂತೆ ಹೇಳಿದ್ದಾರೆ. ಬಳಿಕ ದಂಡ ಪಾವತಿಸಿದ ಅಮೃತ್ ಅವರು ರಶೀದಿ ಕೇಳಿದ್ದಾರೆ. ರಶೀದಿ ನೀಡಲು ಎಸ್‍ಐ ಆಂಜನಪ್ಪ ನಿರಾಕರಿಸಿದ್ದಾರೆ. ಬಳಿಕ ಮನೆ ಸೇರಿದ
ಅಮೃತ್, ಸಂಚಾರಿ ನಿಯಮ ಉಲ್ಲಂಘನೆಗೆ ನಿಗದಿ ಮಾಡಿರುವ ದಂಡ ಕುರಿತು ಅಂತರ್ಜಾಲದಲ್ಲಿ ಹುಡುಕಿ ಮಾಹಿತಿ ತೆಗೆದಿದ್ದಾರೆ. ಈ ವೇಳೆ ತಾವು ಪಾವತಿಸಬೇಕಾದ ದಂಡ ಮೊತ್ತ ಕೇವಲ ರೂ 100 ಮಾತ್ರ ಎಂಬುದು ತಿಳಿದಿದೆ.

ತಮ್ಮಿಂದ ಎಸ್‍ಐ ರೂ 1 ಸಾವಿರ ಹೆಚ್ಚುವರಿ ಪಡೆದಿದ್ದಾರೆಂಬುದು ಗೊತ್ತಾಗಿದೆ.
ಈ ಸಂಬಂಧ ಅಮೃತ್ ಬೇರಿ ಬೆಂಗಳೂರು ಪೊಲೀಸ್ ಫೇಸ್ ಬುಕ್ ಪುಟದಲ್ಲಿ ಅಂದು
ನಡೆದ ಘಟನೆಯನ್ನು ವಿವರವಾಗಿ ದಾಖಲಿಸಿದ್ದರು. ಎಸ್‍ಐ ಆಂಜನಪ್ಪ ಘಟನೆ ನಡೆದ
ದಿನದಂದೇ ಬೈಕ್ ಜಪ್ತಿ ಮಾಡುವಂತೆ ಪೇದೆಯೊಬ್ಬರನ್ನು ಮನೆಯ ಬಳಿ ಕಳುಹಿಸಿದ್ದ ಬಗ್ಗೆಯೂ ಅಮೃತ್ ದೂರಿನಲ್ಲಿ ದಾಖಲಿಸಿದ್ದರು. ದೂರು ಕುರಿತ ಪ್ರಾಥಮಿಕ ತನಿಖೆಯಲ್ಲಿ
ಎಸ್‍ಐ ಆಂಜನಪ್ಪ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ
ಅವರನ್ನು ಅಮಾನತು ಮಾಡಲಾಗಿದೆ' ಎಂದು ಪಶ್ಚಿಮ ವಿಭಾಗದ(ಸಂಚಾರ) ಡಿಸಿಪಿ ಎಸ್. ಗಿರೀಶ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT