(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ನಗರ ಸಮಸ್ಯೆ ಇತ್ಯರ್ಥಕ್ಕೆ 12 ಯೋಜನೆಗಳು ಅಗತ್ಯ

`ಸಿಟಿಜನ್ ಫಾರ್ ದಿ ಕ್ಯಾಂಪೇನ್' ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯುನೈಟೇಡ್ ಟೆಕ್ನಾಲಜೀಸ್ ಮುಂದಾಗಿದೆ...

ಬೆಂಗಳೂರು: `ಸಿಟಿಜನ್ ಫಾರ್ ದಿ ಕ್ಯಾಂಪೇನ್' ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯುನೈಟೇಡ್ ಟೆಕ್ನಾಲಜೀಸ್ ಮುಂದಾಗಿದೆ.

ಮೊಬಿಲಿಟಿ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸುರಕ್ಷತೆ, ಸ್ವಂತ ಕಟ್ಟಡ, ಗುಣಮಟ್ಟದ ನೀರು ಮತ್ತು ಸಾರ್ವಜನಿಕ ಸುರಕ್ಷತೆ, ಸ್ವಂತ ಕಟ್ಟಡ, ಗುಣಮಟ್ಟದ ನೀರು ಮತ್ತು ಸಾರ್ವಜನಿಕ ಸ್ಥಳಗಳ  ಉನ್ನತೀಕರಣಕ್ಕಾಗಿ 12 ಯೋಜನೆಗಳನ್ನು ಯುನೈಟೇಡ್ ಟೆಕ್ನಾಲಜೀಸ್ ಸಿದ್ಧಪಡಿಸುತ್ತಿದೆ. ನೂತ ನ ಆಲೋಚನೆಗಳೊಂದಿಗೆ ಹೊಸ ಯೋಜನೆಗಳನ್ನು ರೂಪಿಸಿರುವ 12 ತಂಡಗಳನ್ನು ಶನಿವಾರ ನಗರದ ಹೋಟೆಲೊಂದರಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಲಾಯಿತು.

ಸಿಪಿಪಿಎಸ್ ಸಹ ಸಂಸ್ಥಾಪಕಿ ಸ್ಮಿತಾ ಶ್ರೀನಿವಾಸನ್ ಮಾತನಾಡಿ, ``ನೆರೆಹೊರೆ ಯವರ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಸುಂದರ ನಗರ ರೂಪಿಸುವುದು ಸಂಸ್ಥೆಯ ಉದ್ದೇಶ. ಈಗಾಗಲೇ ಸಿದ್ಧಗೊಂಡಿರುವ 12 ಯೋಜನೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅನುಮತಿಗೆ ಕಳುಹಿಸಲಾಗಿದೆ. ಬಿಬಿಎಂಪಿ ಅನುಮತಿ ನೀಡಿದರೆ ಮುಂದಿನ ಆರು ತಿಂಗಳೊಳಗೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು,'' ಎಂದು ಹೇಳಿದರು.

``ಸದ್ಯದ ಸಮಾಜಕ್ಕೆ ನೆರೆ ಸುಧಾರಣೆ ಪಾಲುದಾರಿಕೆ ಕಲ್ಪನೆ ಪ್ರಸ್ತುತವಾಗಿದೆ. ನೆರೆಹೊರೆಯವರ ಸಮಸ್ಯೆಗಳನ್ನು ಇತ್ಯರ್ಥ- ಗೊಳಿಸು-ವುದು ಪ್ರಮುಖ ಆದ್ಯತೆಯಾಗಿದೆ. ಬಿಪಿಎಸ್‍ಸಿ, ಸಿಪಿಪಿಎಸ್, ಡಬ್ಲ್ಯೂಆರ್ಐ ಇಂಡಿಯಾ ದಿ ಪ್ರ್ಯಾಕ್ಟೀಸ್ ಆ್ಯಂಡ್ ಯುನೈಟೇಡ್ ವೇ ಆಫ್ ಬೆಂಗಳೂರು ಪಾಲುದಾರಿಕೆ ಹೊಂದಿವೆ,'' ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT