ಜಿಲ್ಲಾ ಸುದ್ದಿ

ನಾನೆಂದೂ ನಾಸ್ತಿಕ ಎಂದು ಹೇಳಿಕೊಂಡಿಲ್ಲ: ಸಿದ್ದರಾಮಯ್ಯ

Guruprasad Narayana

ಬೆಂಗಳೂರು: "ನಾನೆಂದೂ ನಾಸ್ತಿಕ ಎಂದು ಹೇಳಿಕೊಂಡಿಲ್ಲ. ಹಾಗೆಂದಾಕ್ಷಣ ನಾನು ದಿನಾಲು ಕರ್ಪೂರ ಮತ್ತು ತೆಂಗಿನ ಕಾಯಿ ಹಿಡಿದು ದೇವಸ್ಥಾನಗಳನ್ನು ಸುತ್ತುತ್ತೇನೆ ಎಂದಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಸದನದಲ್ಲಿ ಬಿಜೆಪಿ ಪಕ್ಷದ ಉಮೇಶ್ ಕತ್ತಿ, ಮುಖ್ಯಮಂತ್ರಿ ತಿರುಪತಿಯಲ್ಲಿ ಏನು ಪ್ರಾರ್ಥನೆ ಎಂದು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಿದರು. ಬಿಜೆಪಿಯ ಗೋವಿಂದ ಕಾರಜೋಳ ಮುಖ್ಯಮಂತ್ರಿಯವರು ಆಲಮಟ್ಟಿ ಯೋಜನೆಗೆ ೧೦ ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ದೇವರ ಮೇಲೆ ಆಣೆ ಮಾಡಿದ್ದರು ಎಂದದ್ದಕ್ಕೆ ಮುಖ್ಯಮಂತ್ರಿ "ನಾನೆಂದೂ ದೇವರ ಮೇಲೆ ಆಣೆ ಮಾಡಿಲ್ಲ. ಆ ದಿನ ನೀರಾವರಿ ಯೋಜನೆಗಳಿಗೆ ೧೦ ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ವಚನ ನೀಡಿದ್ದೆ ಹಾಗೇಯೆ ಬಿಡುಗಡೆ ಮಾಡಿದ್ದೇನೆ" ಎಂದರು.

SCROLL FOR NEXT