ಜಿಲ್ಲಾ ಸುದ್ದಿ

ಜೀವ ರಕ್ಷಕ ಸಾಧನ ತೆಪ್ಪಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಯುಟಿಸಿ ಏರೋಸ್ಪೇಸ್ ಬೆಂಗಳೂರು ವಿಭಾಗ ಅಭಿವೃದ್ಧಿಪಡಿಸಿರುವ ಜೀವ ರಕ್ಷಕ ಸಾಧನ ತೆಪ್ಪಕ್ಕೆ...

ಬೆಂಗಳೂರು: ಯುಟಿಸಿ ಏರೋಸ್ಪೇಸ್ ಬೆಂಗಳೂರು ವಿಭಾಗ ಅಭಿವೃದ್ಧಿಪಡಿಸಿರುವ ಜೀವ ರಕ್ಷಕ ಸಾಧನ ತೆಪ್ಪಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ.

ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ಸಾಧನಕ್ಕೆ ಹಸಿರು ನಿಶಾನೆ ತೋರಿಸಿದ್ದು, ಅಲ್ಲಿಯ ವಿಮಾನಯಾನದ ರಕ್ಷಣಾ ಕಾರ್ಯಾಚರಣೆಗೆ ಇದನ್ನು ಬಳಸ ಲಾಗುತ್ತದೆ. ಭಾರತದಲ್ಲಿ ನಿರ್ಮಾಣಗೊಂಡಿರುವ ಸಾಧನವೊಂದು ಅಮೆರಿಕದ ವಿಮಾನಯಾನಕ್ಕೆ ಬಳಕೆಯಾಗುತ್ತಿರುವುದು ಇದೇ ಮೊದಲು. ಅನುಮೋದನೆ ಪಡೆದ ನಾಲ್ಕು- ವ್ಯಕ್ತಿಗಳ ಜೀವ ಉಳಿಸುವ ತೆಪ್ಪವು ಅಚ್ಚು ಕಟ್ಟಾದ ಹಗುರವಾದ ಸಾಧನ. ವಿಮಾನ ತುರ್ತಾಗಿ ನೀರಿನ ಮೇಲೆ ಇಳಿಯಬೇಕಾಗಿ ಬಂದರೆ ಈ ಸಾಧನದ ನೆರವಿನಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತಕ್ಷಣವೇ ರಕ್ಷಿಸಬಹುದಾಗಿದೆ.

ವಾಯುಯಾನಕ್ಕೆ ದೇಶೀಯವಾಗಿ ತಯಾರಿಸಿದ ಬಿಡಿಭಾಗ ಒದಗಿಸಲು ಯುಟಿಸಿ ಗಮನ ನೀಡಲಿದೆ. `ಮೇಕ್ ಇನ್ ಇಂಡಿಯಾ'ಗೆ  ಇಂಬು ದೊರೆಯುತ್ತದೆ ಎನ್ನುತ್ತಾರೆ  ಯುಟಿಸಿ ಏರೋಸ್ಪೇಸ್ ಸಿಸ್ಟಂಸ್ (ಇಂಡಿಯಾ) ಉಪಾಧ್ಯಕ್ಷ  ಕ್ರಿಸ್ ರಾವ್. ಪ್ರಧಾನಿಯ   ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದಿದ್ದಾರೆ ನಾಗರಿಕ ವಿಮಾನಯಾನದ ಮಹಾ ನಿರ್ದೇಶಕಿ ಎಂ.ಸತ್ಯವತಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT