ಬೈಲುಕೊಪ್ಪೆ ಬಳಿ ಮಂಗಳವಾರ ಅರಣ್ಯಕ್ಕೆ ಬೆಂಕಿ ತಗಲಿ ಎರಡು ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನೀಲಗಿರಿ ನಾಟಾ ಭಸ್ಮವಾಗಿದೆ. 
ಜಿಲ್ಲಾ ಸುದ್ದಿ

ಬೈಲುಕೊಪ್ಪೆ ಬಳಿ ಕಾಡ್ಗಿಚ್ಚಿಗೆ 2 ಕೋಟಿ ಮೌಲ್ಯದ ನೀಲಗಿರಿ ಭಸ್ಮ

ಸಮೀಪದ ಬೈಲುಕೊಪ್ಪೆ ಬಳಿ ಮಂಗಳವಾರ ಅರಣ್ಯಕ್ಕೆ ಬೆಂಕಿ ತಗಲಿ ಎರಡು ಕೋಟಿ ರುಪಾಯಿಗೂ ಅಧಿಕ...

ಕುಶಾಲನಗರ: ಸಮೀಪದ ಬೈಲುಕೊಪ್ಪೆ ಬಳಿ ಮಂಗಳವಾರ ಅರಣ್ಯಕ್ಕೆ ಬೆಂಕಿ ತಗಲಿ ಎರಡು ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನೀಲಗಿರಿ ನಾಟಾ ಭಸ್ಮವಾಗಿದೆ.

ಮಧ್ಯಾಹ್ನ 1.30ಕ್ಕೆ ಬೆಂಕಿ ಹಿಡಿದಿದ್ದು, ನಂದಿಸಲು ಸಾಧ್ಯವಾಗುತ್ತಿಲ್ಲ. ಅಗ್ನಿ ಶಾಮಕ ದಳ ತಂಡಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದೆ. ಅಗ್ನಿಶಾಮಕ ತಂಡ ಮಧ್ಯಾಹ್ನದಿಂದಲೇ ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ.

ಕೇವಲ ಒಂದು ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸ್ಥಳೀಯರೂ ಬೆಂಕಿ ಆರಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ 20-30 ಎಕ್ರೆ ಜಾಗದಲ್ಲಿ ರು.2 ಕೋಟಿಗೂ ಅಧಿಕ ಮೌಲ್ಯದ ನೀಲಗಿರಿ ಮರಗಳನ್ನು ತುಂಡರಿಸಿ ಸಂಗ್ರಹಿಸಿಡಲಾಗಿತ್ತು. ಕಾಡಿನೊಳಗೆ ಇದ್ದುದರಿಂದ ಬೆಂಕಿಯಲ್ಲಿ ಉರಿಯುತ್ತಲೇ ಇದೆ. ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಇಲ್ಲ. ಸಿಬ್ಬಂದಿ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುರ್ತು ಕಾರಣ'ಗಳಿಂದಾಗಿ ಎಲ್ಲಾ ಅಧ್ವಾನವಾಯಿತು: ವಿಮಾನಗಳ ರದ್ದತಿ ಕುರಿತು IndiGo ಸ್ಪಷ್ಟನೆ

ಪಶ್ಚಿಮ ಬಂಗಾಳ: 'ಬಾಬರಿ ಮಸೀದಿ' ನಿರ್ಮಾಣದ ಪ್ಲಾನ್, TMC ಶಾಸಕ ಹುಮಾಯೂನ್ ಕಬೀರ್ ಅಮಾನತು, ಹೊಸ ಪಕ್ಷ ರಚನೆಯ ಘೋಷಣೆ!

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ವಿಮಾನ ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು; ಕಾರಣವೇನು?: ತನಿಖೆ ಆರಂಭಿಸಿದ DGCA

ಬಿಜಾಪುರ ಎನ್‌ಕೌಂಟರ್‌: ಮತ್ತೆ 6 ನಕ್ಸಲರ ಮೃತದೇಹ ಪತ್ತೆ; ಸಾವಿನ ಸಂಖ್ಯೆ 18ಕ್ಕೆ ಏರಿಕೆ

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

SCROLL FOR NEXT