ಮ್ಮ ಬೆಂಗಳೂರು 6ನೇ ಆವೃತ್ತಿ 
ಜಿಲ್ಲಾ ಸುದ್ದಿ

70 ಗಣ್ಯರಿಗೆ ಪ್ರತಿಷ್ಠಿತ ನಮ್ಮ ಬೆಂಗಳೂರು ಪ್ರಶಸ್ತಿ

`ನಮ್ಮ ಬೆಂಗಳೂರು' 6ನೇ ಆವೃತ್ತಿಯ ಪ್ರತಿಷ್ಠಿತ 2014ನೇ ಸಾಲಿನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಒಟ್ಟು 76,250 ಗಣ್ಯರ ಪೈಕಿ ವಿವಿಧ ಕ್ಷೇತ್ರಗಳಲ್ಲಿನ 70 ಮಂದಿ ಗಣ್ಯರು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ...

ಜಯನಗರದ ಶಾಲಿನಿ ಮೈದಾನದಲ್ಲಿ ವರ್ಣರಂಜಿತ ಕಾರ್ಯಕ್ರಮ
ಬೆಂಗಳೂರು:
`ನಮ್ಮ ಬೆಂಗಳೂರು' 6ನೇ ಆವೃತ್ತಿಯ ಪ್ರತಿಷ್ಠಿತ 2014ನೇ ಸಾಲಿನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಒಟ್ಟು 76,250 ಗಣ್ಯರ ಪೈಕಿ ವಿವಿಧ ಕ್ಷೇತ್ರಗಳಲ್ಲಿನ 70 ಮಂದಿ ಗಣ್ಯರು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಾ. 4 ರಂದು ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸರ್ಕಾರಿ ನೌಕರರ ವಿಭಾಗದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ 7 ಮಂದಿ ಅಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದರೆ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಬಿಎಂಟಿಸಿ ಹಾಗೂ ಬೆಂಗಳೂರು ಸಿಟಿ ಪೊಲೀಸ್ ಇಲಾಖೆಗಳು ಅತ್ಯುತ್ತಮ ಸರ್ಕಾರಿ ಸಂಸ್ಥೆಗಳ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ.

2014ನೇ ಸಾಲಿನ ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ `ನಮ್ಮ ಬೆಂಗಳೂರು ಪ್ರತಿಷ್ಠಾನ'ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಪಬ್ಬಿಶೆಟ್ಟಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ಐದು ವರ್ಷಗಳಿಂದ ನಮ್ಮ  ಬೆಂಗಳೂರು ಪ್ರಶಸ್ತಿ' ನೀಡುತ್ತಾ ಬರುತ್ತಿದೆ. ಬೆಂಗಳೂರಿನ ಸಮಗ್ರ ಪ್ರಗತಿಗೆ ದುಡಿದ ಗಣ್ಯರನ್ನು ಸಾರ್ವಜನಿಕರ ಮೂಲಕ ಗುರುತಿಸಿ, ಅವರನ್ನು ಸನ್ಮಾನಿಸುವುದು ಇದರ ಉದ್ದೇಶವಾಗಿದೆ.

2014 ನೇ ಸಾಲಿನ ಪ್ರಶಸ್ತಿಗೆ `ನಮ್ಮ ಬೆಂಗಳೂರು ಪ್ರತಿಷ್ಠಾನ'ವು ನಾಮ ನಿರ್ದೇಶನ ಪ್ರಕ್ರಿಯೆ ಶುರುಮಾಡಿದಾಗ, ಒಟ್ಟು 76, 250 ಗಣ್ಯರು ನಾಮನಿರ್ದೇಶನಗೊಂಡಿದ್ದರು. ಈ ಪೈಕಿ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿನ 70 ಮಂದಿ ಗಣ್ಯರನ್ನು ಅಂತಿಮವಾಗಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ 'ಎಂದು ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿ, ಮಾಧ್ಯಮ ಸಂಸ್ಥೆ, ನಾಗರಿಕ ವ್ಯಕ್ತಿ, ನಾಗರಿಕ-ಯುವಜನಾಂಗ, ನಾಗರಿಕ ಸಂಸ್ಥೆ (ಸ್ವಯಂ ಸೇವಾ ಸಂಸ್ಥೆ ಮತ್ತು ನಿವಾಸಿ ಕ್ಷೇಮಾಭಿವೃದ್ಧಿ  ಸಂಸ್ಥೆ), ಸರ್ಕಾರಿ ನೌಕರ, ಸರ್ಕಾರಿ ಸಂಸ್ಥೆ, ಚುನಾಯಿತ ಪ್ರತಿನಿಧಿ, ಸಾಮಾಜಿಕ ಉದ್ಯಮಿ, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಸೇರಿದಂತೆ ಇದೇ ಮೊದಲ ಬಾರಿಗೆ ಅನಿವಾಸಿ ಬೆಂಗಳೂರಿಗ ಮತ್ತು ಬೆಂಗಳೂರಿನ ವಿದೇಶಿ ನಿವಾಸಿಗ ಎಂಬ ಎರಡು ಹೊಸ ವಿಭಾಗಗಳಲ್ಲೂ ಪ್ರಶಸ್ತಿಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಲಾಗಿತ್ತು. ಇದರಲ್ಲಿ ಅರ್ಹರಾದ ಪ್ರತಿಭೆಗಳನ್ನು  ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಶಸ್ತಿಗಳ ಮಾನದಂಡ ಕೇವಲ ಅವರು ಪಡೆದ ಮತಗಳ ಸಂಖ್ಯೆಗಳ ಆಧಾರ ಮಾತ್ರವಲ್ಲ, ಬೆಂಗಳೂರಿಗೆ ನೀಡಿದ ಕೊಡುಗೆಯನ್ನೂ ಪರಿಶೀಲಿಸಲಾಗಿದೆ. ಈ ಆಧಾರದಲ್ಲಿ 2014ನೇ ಸಾಲಿಗೆ 70 ಗಣ್ಯರ ಆಯ್ಕೆಯಾಗಿದ್ದಾರೆಂದು ಅವರು ಸ್ಪಷ್ಟಪಡಿಸಿದ್ದಾರೆ. `ನಮ್ಮ ಬೆಂಗಳೂರು ಪ್ರಶಸ್ತಿ'ಯನ್ನು 2009ರಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಆಸಕ್ತಿ ಮತ್ತು ಮಾರ್ಗದರ್ಶನದಿಂದ ಪ್ರಾರಂಭಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಬದಲಾವಣೆಗೆ ಶ್ರಮಿಸಿದವರನ್ನು ಗುರುತಿಸಿ, ಗೌರವಿಸುವ ಮೂಲಕ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷ ಆಯ್ಕೆಯಾದ ಎಲ್ಲ 70 ಮಂದಿಗೂ ಪ್ರಶಸ್ತಿ ನೀಡುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.  


ಸರ್ಕಾರಿ ನೌಕರ

  • ಅಲೋಕ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರು
  • ಎಚ್.ಬಾಳೇಗೌಡ, ಪೊಲೀಸ್ ಇನ್ಸ್ ಪೆಕ್ಟರ್, ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣೆ
  • ಡಾ. ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  • ಪಿ.ದಯಾನಂದ , ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
  • ಪ್ರಣಬ್ ಮೊಹಂತಿ, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
  • ಟಿ.ರಂಗಪ್ಪ , ಪೊಲೀಸ್ ಇನ್ಸ್ ಪೆಕ್ಟರ್, ಅಶೋಕನಗರ ಪೊಲೀಸ್ ಠಾಣೆ
  • ಮನೀಶ್ ಮೌದ್ಗಿಲ್, ಆಯುಕ್ತರು, ಆರ್ ಡಿಪಿಆರ್ ಇಲಾಖೆ
ಸರ್ಕಾರಿ ಸಂಸ್ಥೆ
  • ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬಿಎಂಟಿಸಿ,
  • ಬೆಂಗಳೂರು ಸಿಟಿ ಪೊಲೀಸ್, ಕೆಎಸ್ಆರ್ ಟಿಸಿ, ಲೋಕಾಯುಕ್ತ, ನಿಮ್ಹಾನ್ಸ್
ಮಾಧ್ಯಮ (ವ್ಯಕ್ತಿ)
  • ವಿಶ್ವೇಶ್ವರ ಭಟ್
  • ವಿಜಯಲಕ್ಷ್ಮೀ ಶಿಬರೂರ್
  • ಜಿ.ಮಂಜು ಸಾಯಿನಾಥ್
  • ಬಿ. ಪವಿತ್ರಾ
  • ಹಮೀದ್ ಪಾಳ್ಯ
  • ಭಾವನಾ ಬೆಳಗೆರೆ
ಮಾಧ್ಯಮ ಸಂಸ್ಥೆ
  • ಪ್ರಜಾವಾಣಿ
  • ಹಿಂದು
  • ಚಂದನ ಟಿವಿ
  • ಟಿವಿ 9
  • ನ್ಯೂಸ್ 9
  • ಪಬ್ಲಿಕ್ ಟಿವಿ
  • ಉದಯ ಟಿವಿ
ಬೆಂಗಳೂರಿನ ವಿದೇಶಿ ನಿವಾಸಿಗ
  • ಬೆತ್ ಚಪ್ಮಮ್ಯಾನ್
  • ಸೇನ್ ಬ್ಲಾಗ್ಸ್ ವೆಡ್ಟ್
ಸಾಮಾಜಿಕ ಉದ್ಯಮಿ
  • ಲೇಬರ್ ನೆಟ್
  • ಮಿಡ್ ನೈಟ್ ಎಕ್ಸ್ ಪ್ರೆಸ್
  • ಇಂಡಸ್ ಟ್ರೀ ಕ್ರಾಫ್ಟ್ ಪ್ರೈ. ಲಿ.
  • ಉಜ್ಜೀವನ್
ನಾಗರಿಕ(ವ್ಯಕ್ತಿ)
  • ಪಿ.ಜಿ. ಭಟ್, ನಿವೃತ್ತ ಅಧಿಕಾರಿ, ಕಾತ್ಯಾಯಿನಿ ಚಾಮರಾಜ್, ಸಿವಿಕ್ ಬೆಂಗಳೂರು
  • ಮಧು ಸಿಂಘಾಲ್, ಮಿತ್ರ ಜ್ಯೋತಿ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ
  • ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆ ನಿರ್ದೇಶಕ
  • ಡಾ.ಮೀನಾಕ್ಷಿ ಭರತ್, ಸಾಮಾಜಿಕ ಮತ್ತು ನಾಗರಿಕ ಕಾರ್ಯಕರ್ತೆ
  • ಮಯಿಗೌಡ, ಬ್ಲಾಸೊಮ್ ಬುಕ್ ಹೌಸ್ ಸಂಸ್ಥಾಪಕಿ
  • ಪ್ರಮೋದ್ ಕುಲಕರ್ಣಿ, ಪ್ರೇರಣಾ ಸಹ ಸಂಸ್ಥಾಪಕ
  • ರಾಜ್ ಕುಮಾರ್ ಧಾಮ್, ಪೀಪಲ್ಸ್ ಟ್ರಸ್ಟ್
ನಾಗರಿಕ ಸಂಸ್ಥೆ (ಸ್ವಯಂ ಸೇವಾ ಸಂಸ್ಥೆ)
  • ಡ್ರೀಮ್ ಎ ಡ್ರೀಮ್
  • ಉನ್ನತಿ
  • ಅಕ್ಷರ ಫೌಂಡೇಷನ್
  • 18 ಮೈನಸ್
  • ಅಬಲ ಆಶ್ರಮ
  • ಲೆಟ್ಸ್ ಬಿ ದಿ ಚೇಂಜ್
  • ಪ್ರೇರಣಾ ಟ್ರಸ್ಟ್
  • ಸೇವಾ ಸದನ
  • ಸುಮಂಗಲಿ ಆಶ್ರಮ
ನಾಗರಿಕ ಸಂಸ್ಥೆ (ನಿವಾಸಿ ಕ್ಷೇಮಾಭಿವೃದ್ಧಿ ಸಂಸ್ಥೆ/ ಸಮುದಾಯ ಆಧಾರಿತ ಸಂಸ್ಥೆ)
  • ಸಿಟಿಜನ್ ಆ್ಯಕ್ಸನ್ ಫೋರಂ
  • ವೈಟ್ ಫೀಲ್ಡ್ ರೈಸಿಂಗ್
  • ಎಚ್ಎಸ್ಆರ್ ಲೇಔಟ್ (ಸೆಕ್ಟರ್1)
  • ವೆಲ್ಫೇರ್ ಅಸೋಸಿಯೇಷನ್
  • ಎಂಎಸ್ಆರ್ ನಗರ ನಿವಾಸಿಗಳ ವೆಲ್ಫೇರ್
  • ಅಸೋಸಿಯೇಷನ್
  • ಯಲಹಂಕ ಯುನೈಟೆಡ್ ಎನ್ವಾರ್ನಮೆಂಟ್
  • ಅಸೋಸಿಯೇಷನ್
ನಾಗರಿಕ (ಯುವ)
  • ರಾಹುಲ್ ಪ್ರಸಾದ್, ಜುವೆನೈಲ್ ಕೇರ್ ಚಾರಿಟಬಲ್ ಟ್ರಸ್ಟ್ ಸ್ಥಾಪಕ
  • ಸುರೇಂದ್ರನ್ ಮುರುಗನಂದ ಕೃಷ್ಣನ್, ವಾಲೆಂಟೆರ್ ಫ್ರ್ ಎ ಕಾಸ್ ನ ಸಂಸ್ಥಾಪಕ
  • ಸುಜಿತ್ ಲಾಲ್ವಾನಿ, ಐಯು (ಇನ್ಸ್ಪಿರೇಷನ್ ಆನ್ಲಿಮಿಟೆಡ್) ಸ್ಥಾಪಕ
  • ಸುಭೇಂದು ಶರ್ಮಾ, ಅಫೋರೆಸ್ಟ್ ನ ಸಂಸ್ಥಾಪಕ
ಚುನಾಯಿತ ಪ್ರತಿನಿಧಿ
  • ಡಾ.ಎಂ.ಎಸ್. ಶಿವಪ್ರಸಾದ್, ಪಾಲಿಕೆ ಸದಸ್ಯ, ಅರಮನೆ ನಗರ
  • ಬಿ.ಎಸ್.ಸತ್ಯನಾರಾಯಣ, ಪಾಲಿಕೆ ಸದಸ್ಯ, ಬಸವನಗುಡಿ
  • ಎಸ್.ಸುರೇಶ್ ಕುಮಾರ್, ಶಾಸಕ, ರಾಜಾಜಿನಗರ
  • ಸಿ.ಕೆ.ರಾಮಮೂರ್ತಿ, ಪಾಲಿಕೆ ಸದಸ್ಯ ಪಟ್ಟಾಭಿರಾಮನಗರ
  • ಲತಾ ನರಸಿಂಹಮೂರ್ತಿ, ಪಾಲಿಕೆ ಸದಸ್ಯ, ಎಚ್ಎಸ್ಆರ್ ಲೇಔಟ್.
ಉದ್ಯಮ ವಲಯದ ಸಾಮಾಜಿಕ ಹೊಣೆಗಾರಿಕೆ
  • ಸೊನಾಟಾ ಸಾಫ್ಟ್ ವೇರ್
  • ಕೆನರಾ ಬ್ಯಾಂಕ್
  • ಎಂಫಾಸೀಸ್
  • ಐಟಿಸಿ
  • ಜೀವ ವಿಮಾ ನಿಗಮ (ಎಲ್ಐಸಿ)
ಅನಿವಾಸಿ ಬೆಂಗಳೂರಿಗ
  • ಬಿ.ಟಿ. ಲಕ್ಷ್ಮಣ್
  • ಬಿ. ವಿ.ಜಗದೀಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT