ಜಿಲ್ಲಾ ಸುದ್ದಿ

ಬಸ್ ಪ್ರಯಾಣ ದರ ಇಳಿಕೆ: ಉಲ್ಟಾ ಹೊಡೆದ ಮುಖ್ಯಮಂತ್ರಿ

Mainashree

ಹಾಸನ: ಬಿಜೆಪಿ ಸರ್ಕಾರ ಇರೋ ರಾಜ್ಯಗಳಲ್ಲೇನು ಬಸ್ ದರ ಇಳಿಸಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯಕ್ಕೆ ರಾಜ್ಯದಲ್ಲಿ ಬಸ್ ಪ್ರಯಾಣ ದರ ಇಳಿಕೆ ಇಲ್ಲ ಎಂಬ ಸೂಚನೆ ನೀಡಿದರು.

ಪೆಟ್ರೋಲ್, ಡಿಸೇಲ್ ದರ ದೇಶಾದ್ಯಂತ ಇಳಿದಿದೆ. ಹಾಗೆಂದ ಮೇಲೆ ಬಿಜೆಪಿ ಅಧಿಕಾರ ಇರುವ ಗುಜರಾತ್, ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿ ಬಸ್ ಪ್ರಯಾಣ ದರ ಇಳಿಸಿಲ್ಲ. ಆಧರೂ ರಾಜ್ಯದಲ್ಲಿ ಬಿಜಿಪೆ ಮಂದಿ ಬಸ್ ದರ ಇಳಿಸಬೇಕೆಂದು ಒತ್ತಾಯಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಶನಿವಾರ ಸುದ್ದಿಗಾರನೊಂದಿಗೆ ಮಾತನಾಡುತ್ತ ತಿಳಿಸಿದರು.

ನಷ್ಟ ಸರಿದೂಗಿದೆ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಷ್ಟದಲ್ಲಿ ಇದ್ದವು. ಡಿಸೇಲ್ ದರ ಕಡಿಮೆ ಆಗಿರುವುದರಿಂದ ನಷ್ಟ ಸರಿದೂಗಿದೆ. ಆದರೂ ದರ ಇಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿ, ಪರಿಶೀಲಿಸಲಾಗುವುದು ಎಂದರು.

SCROLL FOR NEXT