ಜಿಲ್ಲಾ ಸುದ್ದಿ

ನಗರಸಭೆ ಸದಸ್ಯನ ಹತ್ಯೆ

Lakshmi R

ರಾಮನಗರ: ನಗರಸಭೆ ಸದಸ್ಯ ನಿಜಾಂ ಪಾಷ(38) ಅವರನ್ನು ನಗರದ ರೈಲು ನಿಲ್ದಾಣದಲ್ಲಿ ಮಂಗಳವಾರ ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

13ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯರಾಗಿದ್ದ ಇವರು ರೌಡಿ ಪಟ್ಟಿಯಲ್ಲಿದ್ದು, ಕೊಲೆ ಸೇರಿ ನಾನಾ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಹತ್ಯೆಗೆ ಹಳೆ ವೈಷಮ್ಯ ಕಾರಣ ಎಂದು ಶಂಕಿಸಲಾಗಿದೆ. ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮಧ್ಯಾಹ್ನ 3.20ರ ಸುಮಾರಿಗೆ ನಿಜಾಂ ಪಾಷ ತನ್ನ ಸ್ನೇಹಿತ ಅಮೀರ್‌ಜಾನ್ ಎಂಬುವರ ಜತೆ ಬೈಕ್‌ನಲ್ಲಿ ಹಿಂಬದಿ ಕುಳಿತು ನಗರಸಭೆಯಿಂದ ರೈಲು ನಿಲ್ದಾಣ ರಸ್ತೆಯಲ್ಲಿ ತೆರಳುತ್ತಿದ್ದರು. ರೈಲ್ವೆ ಅಂಡರ್ ಪಾಸ್ ಕಡೆಯಿಂದ 5 ಬೈಕ್‌ಗಳಲ್ಲಿ ಬಂದ 10 ದುಷ್ಕರ್ಮಿಗಳು ಪಾಷ ಇದ್ದ ಬೇಕ್ ಅಡ್ಡಗಟ್ಟಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ.

ಕೆಳೆಗ ಬಿದ್ದ ನಿಜಾಂ ಪಾಷ ತಮ್ಮ ಬಳಿಯಿದ್ದ ಪಿಸ್ತೂಲ್ ಹೊರತೆಗೆದಾಗ ದುಷ್ಕರ್ಮಿಗಳ ಪೈಕಿ ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ಪರಾರಿಯಾಗಿದರು. ಈ ಇಬ್ಬರು ನಿಜಾಂ ಪಾಷರಿಂದ ಪಿಸ್ತೂಲ್ ಕಸಿದು, ಅವರ ತಲೆಗೆ ಗುಂಡುಹಾರಿಸಿದರು.

ರಕ್ತದ ಮಡುವಿನಲ್ಲಿ ಬಿದ್ದ ನಿಜಾಂ ಪಾಷ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

SCROLL FOR NEXT