ರಾಜ್ಯಪಾಲ ವಜುಭಾಯಿ ವಾಲಾ 
ಜಿಲ್ಲಾ ಸುದ್ದಿ

ಒಬ್ಬರಿಗೊಬ್ಬರು ಕಲೆತು, ಕಲಿಸಿ

ಬಡ ಮಕ್ಕಳು ಓದಲು ಅನುಕೂಲವಾಗುವಂತೆ ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಕಲಿಸುವ `ಈಚ್ ಒನ್ ಟೀಚ್ ಒನ್' ಚಿಂತನೆ ...

ಬೆಂಗಳೂರು: ಬಡ ಮಕ್ಕಳು ಓದಲು ಅನುಕೂಲವಾಗುವಂತೆ ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಕಲಿಸುವ `ಈಚ್ ಒನ್ ಟೀಚ್ ಒನ್' ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು.ಫೀಲ್ಡ್  ಮಾರ್ಶೆಲ್  ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸೋಮವಾರ,ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಗಣರಾಜ್ಯೋತ್ಸವದ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಡತನವನ್ನು ಸಣ್ಣಸಣ್ಣ ವಿಚಾರಗಳಿಂದ ಮುಕ್ತಿಗೊಳಿಸಬೇಕು. ಬಡ ಮಕ್ಕಳು ಶಿಕ್ಷಣ ಪಡೆವುದು ಸುಲಭವಲ್ಲ. ಸಮಾಜ ವ್ಯಕ್ತಿಗೆ ನೀಡಿರುವುದರಲ್ಲಿ ಸ್ವಲ್ಪ ಭಾಗ ವನ್ನು ಬಡವರಿಗಾಗಿ ವ್ಯಯ ಮಾಡಿ ದರೆ ಬಡತನ ನೀಗಿಸಬಹುದು. ಶ್ರೀಮಂತ ಕುಟುಂಬ ವೊಂದು ಬಡ ಕುಟುಂಬವನ್ನು ದತ್ತು ತೆಗೆದುಕೊಂಡು, ಕುಟುಂಬದ ಅಭಿವೃದ್ಧಿ ಹೊಣೆ ಹೊತ್ತುಕೊಂಡರೆ ಬಡತನ ನಿವಾರಣೆ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳು ತಮ್ಮ ಕೇತ್ರಗಳಲ್ಲಿ ಉತ್ತಮ ಕೆಲಸ ಮಾ ಡುತ್ತಿವೆ. ಆರೋಗ್ಯ, ಶಿಕ್ಷಣ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಕೊಡುಗೆ ಸಲ್ಲಿಸು ತ್ತಿವೆ. ಕೇಂದ್ರ, ರಾಜ್ಯ ಹಾಗೂ ಆಯಾ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಇಂಥ ಸಂಸ್ಥೆಗಳಿಗೆ ನೆರವು ನೀಡಬೇಕೆಂದರು. ತಮ್ಮ ಕುಟುಂಬ ತೊರೆದು ದೇಶಪ್ರೇಮದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸುತ್ತಿರುವ ಸೈನಿಕರಿಗೆ ದೇಶದ ಜನರು ಸಹಕಾರದ ಭರವಸೆ ನೀಡಬೇಕು.

ಆದರೆ ಈ ನಡುವೆ ಭಯೋತ್ಪಾದಕ ಕೃತ್ಯಗಳು ಜನರನ್ನು ಆತಂಕಕ್ಕೀಡು ಮಾಡಿವೆ. ಇದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿವೆ. ನೆರೆ ರಾಷ್ಟ್ರಗಳೊಂದಿಗೆ ಸ್ನೇಹ ಬೆಳೆಸಲು ಪರಸ್ಪರ ಕೊಡು-ಕೊಳ್ಳುವಿಕೆಯ ನೀತಿಯನ್ನು ದೇಶ ಅನುಸರಿಸುತ್ತಿದೆ. ಅಂತಾರಾಷ್ಟ್ರೀಯ ಸಂಬಂಧ ಗಳನ್ನು ಗಟ್ಟಿಗೊಳಿಸುವಲ್ಲಿ ದೇಶ ಯಾವಾಗಲೂ ಮುಂಚೂಣಿಯಲ್ಲಿದೆ.ಕೇಂದ್ರ ಸರ್ಕಾರ ಇತ್ತೀಚೆಗೆ ಕ್ರಿಯಾಶೀಲ ವಿದೇಶಿ ನೀತಿಯ ಮೂಲಕ ಶಾಂತಿ ಸ್ಥಾಪಿಸಲು ಯತ್ನಿಸುತ್ತಿದೆ. ವಿಬಿsನ್ನ ದೇಶಗಳೊಂದಿಗೆ ಮೈತ್ರಿ ಹಸ್ತ ಚಾಚಿದ್ದರೂ ಆಗಾಗ್ಗೆ ಉಗ್ರವಾದದ ಕೃತ್ಯಗಳು ಆತಂಕ ಹುಟ್ಟಿಸುತ್ತಿವೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನವಿದೆ. ಇಸ್ರೋ, ಎಚ್‍ಎಎಲ್, ಬಿಇಎಲ್ ಸೇರಿದಂತೆ ಹಲವು ವಿಶ್ವವಿಖ್ಯಾತ ಸಂಸ್ಥೆಗಳು ರಾಜ್ಯದಲ್ಲಿದ್ದು, ಉತ್ತಮ ತಂತ್ರಜ್ಞಾನ ಕಂಪನಿಗಳು ಬೆಂಗಳೂರಿನಲ್ಲಿದೆ. ಇದರಿಂದಾಗಿ `ಸಿಲಿಕಾನ್ ವ್ಯಾಲಿ ಆಫ್  ಇಂಡಿಯಾ ' ಎಂಬ ಹೆಸರನ್ನು ನಗರ ಪಡೆದಿದೆ. ದೇಶದಲ್ಲೂ ಉತ್ತಮ ಕಾರ್ಯಗಳು ನಡೆಯುತ್ತಿದ್ದು, ಸ್ವಚ್ಛ ಭಾರತ ದಂಥ ಆಂದೋಲನಗಳು ಪ್ರಗತಿಗೆ ಕಾರಣವಾಗಿವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ„ಕಾರಿ ವಿ.ಶಂಕರ್, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಹಾಜರಿದ್ದರು.

ಸರ್ಕಾರದ ಶ್ಲಾಘನೆ
ರಾಜ್ಯ ಸರ್ಕಾರದ ಪ್ರಯತ್ನಗಳಿಂದ ಸಾಕಷ್ಟು ಪ್ರಗತಿಯಾಗಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಶ್ಲಾಘಿಸಿದರು. ಇತ್ತೀಚೆಗೆ `ಮೊಬೈಲ್ ಒನ್' ಮೂಲಕ ಸಾರ್ವಜನಿಕ ಸೇವೆಗಳನ್ನು ನೀಡಿ ಸರ್ಕಾರ ಉತ್ತಮ ಸಾಧನೆ ಮಾಡಿದೆ. ರಾಜ್ಯದಲ್ಲಿ ಶಿಶುಮರಣ ಪ್ರಮಾಣ ಇಳಿಕೆಯಾಗಿರುವುದು ಉತ್ತಮ ಬೆಳವಣಿಗೆ. ಮಕ್ಕಳ ಅಪೌಷ್ಟಿಕತೆ ನಿವಾರಿಸುವ ದಿಸೆಯಲ್ಲೂ ರಾಜ್ಯ ಮುಂಚೂಣಿಯಲ್ಲಿದೆ. ಬರಪೀಡಿತ ಜಿಲ್ಲೆಗಳಲ್ಲಿ ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನುಸರ್ಕಾರ ಒದಗಿಸಿದ್ದು, ಯೋಜನೆಗಳ ಸೂಕ್ತ ಅನುಷ್ಠಾನವಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT