ಜಿಲ್ಲಾ ಸುದ್ದಿ

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾಗಿ ರಾಮಲಿಂಗೇಗೌಡ ನೇಮಕ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಐ. ಆರ್. ರಾಮಲಿಂಗೇಗೌಡ ಅವರನ್ನು ಮಂಡಳ ನೇಮಕ ಮಾಡಿದೆ.

ಹೈಕೋರ್ಟ್ ಆದೇಶವನ್ನು ಪಾಲಿಸಲು ರಾಮಲಿಂಗೇಗೌಡರನ್ನು ನೇಮಕ ಮಾಡಲಾಗಿದೆ. ಹೀಗಾಗಿ ಸರ್ಕಾರ ಜಯರಾಂ ಅವರನ್ನು ಎಂಡಿ ಆಗಿ ನೇಮಿಸಿ ಜ.30ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಮಂಡಳಿ ಮನವಿ ಮಾಡಿಕೊಂಡಿದೆ.

ಹೈಕೋರ್ಟ್ ವಿಭಾಗೀಯ ಪೀಠದೆದುರು ಮಹಾ ಮಂಡಳಿ ರಾಮಲಿಂಗೇಗೌಡರ ಅಮಾನತು ಹಿಂಪಡೆಯುವುದಾಗಿ ಹೇಳಿತ್ತು. ಅದರಂತೆ ಅಮಾನತು ಹಿಂಪಡೆದು ನೇಮಕ ಮಾಡಲಾಗಿದೆ. ಜ. 31ರಂದು ಎ.ಎಸ್. ಪ್ರೇಮನಾಥ್ ನಿವೃತ್ತಿ ಹೊಂದಿದ್ದು, ಫೆ.1 ರಿಂದ ರಾಮಲಿಂಗೇಗೌಡ ಅ„ಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ರಾಮಲಿಂಗೇಗೌಡರನ್ನು 2011ರ ಜುಲೈನಲ್ಲಿ ಮಂಡಳ ಸೇವೆಯಿಂದ ಅಮಾನತುಗೊಳಿಸಿತ್ತು. ಇದರ ವಿರುದ್ಧ ಅವರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‍ನ ಏಕ ಸದಸ್ಯ ಪೀಠ ರಾಮಲಿಂಗೇಗೌಡರ ಅರ್ಜಿ ವಜಾಗೊಳಿಸಿತ್ತು. ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದ್ದಾಗ ಮಹಾ ಮಂಡಳ ನವೆಂಬರ್ 2014ರಲ್ಲಿ ನ್ಯಾಯಾಲಯಕ್ಕೆ ಅಮಾನತು  ಹಿಂಪಡೆಯುವುದಾಗಿ ಹೇಳಿಕೆ ನೀಡಿತ್ತು. ವಿಭಾಗೀಯ ಪೀಠ ರಾಮಲಿಂಗೇಗೌಡರ ಮನವಿ ಪುರಸ್ಕರಿಸಿ, ಏಕ ಸದಸ್ಯ ಪೀಠದ ಆದೇಶ ರದ್ದುಗೊಳಿಸಿತ್ತು. ಅಮಾನತು ಹಿಂಪಡೆಯುವಂತೆ ಮಂಡಳಕ್ಕೆ ಸೂಚಿಸಿತ್ತು.

SCROLL FOR NEXT