ಕ್ವೀನ್ಸ್ ಅಪಾರ್ಟ್ ಮೆಂಟ್ ಪಕ್ಕ ಕಟ್ಟಡ ನಿರ್ಮಿಸುತ್ತಿರುವ ಲೆಗೆಸಿ ಸಂಸ್ಥೆ ಪಕ್ಕದ ಕಟ್ಟಡಗಳಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಿದೆ. 
ಜಿಲ್ಲಾ ಸುದ್ದಿ

ಮರಳಿ ಮನೆ ಸೇರಿದ ನಿವಾಸಿಗಳು

ಕನ್ನಿಂಗ್ ಹ್ಯಾಂ ರಸ್ತೆಯ ಕ್ವೀನ್ಸ್ ಅಪಾರ್ಟ್ ಮೆಂಟ್ ವಾಸಿಸಲು ಸುರಕ್ಷಿತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಂತಿಮ ವರದಿ ನೀಡಿದ್ದರಿಂದ, ಅಪಾರ್ಟ್ ಮೆಂಟ್ ನ 'ಸಿ' ಬ್ಲಾಕ್ ನ 32 ಕುಟುಂಬಗಳು ಕಟ್ಟಡಕ್ಕೆ ಮರಳಿವೆ...

ಬೆಂಗಳೂರು: ಕನ್ನಿಂಗ್ ಹ್ಯಾಂ ರಸ್ತೆಯ ಕ್ವೀನ್ಸ್ ಅಪಾರ್ಟ್ ಮೆಂಟ್ ವಾಸಿಸಲು ಸುರಕ್ಷಿತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಂತಿಮ ವರದಿ ನೀಡಿದ್ದರಿಂದ, ಅಪಾರ್ಟ್ ಮೆಂಟ್ ನ 'ಸಿ' ಬ್ಲಾಕ್ ನ 32 ಕುಟುಂಬಗಳು ಕಟ್ಟಡಕ್ಕೆ ಮರಳಿವೆ.

17 ದಿನಗಳ ನಂತರ ಕುಟುಂಬಗಳ ಮನೆಗೆ ಮರಳಿದ್ದು, ಇದುವರೆಗೆ ಸಿಟ್ರಸ್ ಹೊಟೇಲ್ ನಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು. ಲೆಗೆಸಿ ಬಿಲ್ಡರ್ ನಿಂದ ನಡೆಯುತ್ತಿರುವ ಕಟ್ಟಡ ಕಾಮಗಾರಿಯಿಂದ ಕ್ವೀನ್ಸ್ ಅಪಾರ್ಟ್ ಮೆಂಟ್ ಗೆ ಯಾವುದೇ ಹಾನಿಯಿಲ್ಲ ಎಂದು ಅಧಿಕಾರಿಗಳ ತಂಡ ವರದಿ ನೀಡಿದೆ.

ಹೀಗಾಗಿ ಕುಟುಂಬಗಳು ಸಂತಸದಿಂದ ಮನೆಗೆ ಮರಳಿದ್ದು, ಹೊಟೇಲ್ ನಲ್ಲಿ ವಸತಿ, ಆಹಾರ ಸೇರಿದಂತೆ ಎಲ್ಲ ಬಿಲ್ ಗಳನ್ನು ಲೆಗೆಸಿ ಸಂಸ್ಥೆ ಪಾವತಿ ಮಾಡಿದೆ. ವಾಣಿಜ್ಯ ತೆರಿಗೆ ಅಧಿಕಾರಿಗಳ ವಸತಿ ಸಂಕೀರ್ಣಕ್ಕೂ ಕಟ್ಟಡ ಕಾಮಗಾರಿಯಿಂದ ಹಾನಿಯಾಗಿದ್ದು, 6 ಕುಟುಂಬಗಳು ಇನ್ನೂ ಹೊಟೇಲ್ ನಿಂದ ವಾಪಸ್ ಬಂದಿಲ್ಲ. ಈ ಜಾಗದಲ್ಲಿ ಕಟ್ಟಡ ಕಾಮಗಾರಿ ಮುಂದುವರಿದಿದೆ.

ಜೂನ್ 15ರಂದು ಲೆಗೆಸಿ ಸಂಸ್ಥೆಯ ಕಟ್ಟಡ ಕಾಮಗಾರಿಯಿಂದ ಕ್ವೀನ್ಸ್ ಅಪಾರ್ಟ್ ಮೆಂಟ್ ಗೆ ಹಾನಿಯಾಗಿದ್ದು, ಸಿ ಬ್ಲಾಕ್ ನಿವಾಸಿಗಳು ಆತಂಕಗೊಂಡಿದ್ದರು. ಪಾಯ ಅಗೆಯುವಾಗ ಕುಸಿದ ಜಾಗದ ಹತ್ತಿರದಲ್ಲೇ ವಾಸಿಸುತ್ತಿದ್ದವರನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿತ್ತು. ಕಟ್ಟಡದ ಅಧ್ಯಯನ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳ ತಂಡ, ಅಪಾರ್ಟ್ ಮೆಂಟ್ ದುರಸ್ತಿ ಪೂರ್ಣಗೊಳ್ಳುವವರೆಗೂ ನಿವಾಸಿಗಳನ್ನು ಮತ್ತೆ ಮನೆಗೆ ಕಳುಹಿಸಬಾರದು ಎಂದು ಮಧ್ಯಂತರ ವರದಿಯಲ್ಲಿ ತಿಳಿಸಿತ್ತು. ಹೀಗಾಗಿ ಹೊಟೇಲ್ ನಲ್ಲೇ ನಿವಾಸಿಗಳು ವಾಸಿಸಬೇಕಾಯಿತು.

ಈಗ ಅಂತಿಮ ವರದಿ ನೀಡಿರುವ ಅಧಿಕಾರಿಗಳ ತಂಡ, ನಿವಾಸಿಗಳು ಮರಳಿ ಮನೆ ಸೇರಬಹುದು ಎಂದು ತಿಳಿಸಿದೆ. 32 ಕುಟುಂಬಗಳ ನಿವಾಸಿಗಳು ಒಂದೇ ಹೊಟೇಲ್ ನಲ್ಲಿ ತಂಗಿದ್ದು, ಮತ್ತೆ ಕ್ವೀನ್ಸ್ ಅಪಾರ್ಟ್ ಮೆಂಟ್ ನಲ್ಲಿನ ತಮ್ಮ ಫ್ಲ್ಯಾಟ್ ಗೆ ಹಿಂದಿರುಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT