ಸಂಸದ ಶ್ರೀರಾಮುಲು 
ಜಿಲ್ಲಾ ಸುದ್ದಿ

ಚೆಕ್ ಬೌನ್ಸ್: ಶ್ರೀರಾಮುಲು ಖುದ್ದು ಹಾಜರಿಗೆ ಸೂಚನೆ

ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆಗಸ್ಟ್ 6 ರಂದು ಖುದ್ದು ಹಾಜರಾಗಬೇಕೆಂದು 13 ನೇ ಎಸಿಎಂಎಂ ನ್ಯಾಯಾಲಯ ಬಿಜೆಪಿ ಸಂಸದ ಶ್ರೀರಾಮುಲುಗೆ ನಿರ್ದೇಶನ ನೀಡಿದೆ.

ಬೆಂಗಳೂರು:  ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆಗಸ್ಟ್ 6 ರಂದು ಖುದ್ದು ಹಾಜರಾಗಬೇಕೆಂದು 13 ನೇ ಎಸಿಎಂಎಂ ನ್ಯಾಯಾಲಯ ಬಿಜೆಪಿ ಸಂಸದ ಶ್ರೀರಾಮುಲುಗೆ ನಿರ್ದೇಶನ ನೀಡಿದೆ. ಸೋಮಣ್ಣ ಎಂಬುವವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಶ್ರೀರಾಮುಲು ಅವರಿಗೆ ಹಾಜರಾಗುವಂತೆ ಸೂಚಿಸಿದರು ಗೈರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಹೆಚ್.ಡಿ ಕೋಟೆ ಕ್ಷೇತ್ರದಿಂದ ಬಿಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಿ ಸೋತಿದ್ದರು. ನಂತರ ಎಂ.ಎಲ್.ಸಿ ಸೀಟು ಕೊಡಿಸುವುದಾಗಿ ಎರಡು ಬಾರಿ 75 ಲಕ್ಷದಂತೆ ಒಂದೂವರೆ ಕೋಟಿ ಪಡೆದಿದ್ದರು. ಬಳಿಕ ರಾಯಚೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ರೂ.1 . 46  ಕೋಟಿ ಸಾಲ  ಪಡೆದಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಸೋಮಣ್ಣ ಆರೋಪಿಸಿದ್ದಾರೆ.

ಯಾವುದೇ ಕೆಲಸ ಮಾಡಿಸಿಕೊಡದ ಶ್ರೀರಾಮಲು ಅವರಿಗೆ ಹಣ ಕೇಳಿದಾಗ 2014 ಮಾ.20 ರಂದು ಶ್ರೀರಾಮುಲು ಚೆಕ್ ನೀಡಿದ್ದರು. ಬೆಂಗಳುರಿನ ಹಲಸೂರು ವ್ಯಾಪ್ತಿಯ ಐ.ಎನ್.ಜಿ ವೈಶ್ಯ ಬ್ಯಾಂಕ್ ಚೆಕ್ ನ್ನು ಬ್ಯಾಂಕ್ ಗೆ ಹಾಕಿದಾಗ ಅದು ಬೌನ್ಸ್ ಆಗಿದೆ. ಕೇಳಿದರೆ ಬೆದರಿಕೆ ಹಾಕಿದರು ಎಂದು ಸೋಮಣ್ಣ ನ್ಯಾಯಾಲಯದ ಮೊರೆ ಹೋಗಿದ್ದಾರೆ.     

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT