ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ 
ಜಿಲ್ಲಾ ಸುದ್ದಿ

ನಮ್ಮ 29 ಸಚಿವರ ಭತ್ಯೆ ಲೆಕ್ಕ ಬಲು ದುಬಾರಿ!

ಪ್ರಯಾಣ ವೆಚ್ಚವನ್ನು ತಪ್ಪಾಗಿ ತೋರಿಸಿರುವ ರಾಜ್ಯದ 29 ಸಚಿವರು, 2 ವರ್ಷಗಳಲ್ಲಿ ಬರೋಬ್ಬರಿ...

ಬೆಂಗಳೂರು: ಪ್ರಯಾಣ ವೆಚ್ಚವನ್ನು ತಪ್ಪಾಗಿ ತೋರಿಸಿರುವ ರಾಜ್ಯದ 29 ಸಚಿವರು, 2 ವರ್ಷಗಳಲ್ಲಿ ಬರೋಬ್ಬರಿ ರು. 13,79,98,244 ಭತ್ಯೆಯನ್ನು ಪಡೆದುಕೊಂಡಿರುವ ಮಾಹಿತಿ
ಬಹಿರಂಗವಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಬಹಿರಂಗವಾಗಿದ್ದು, ತಮ್ಮ ಪ್ರಯಾಣ ವೆಚ್ಚ ತಪ್ಪಾಗಿ ತೋರಿಸಿರುವ 29 ಸಚಿವರು, ಎರಡು ವರ್ಷಗಳಲ್ಲಿ  ಬರೋಬ್ಬರಿ ರು.13,79,98,244 ಭತ್ಯೆಯನ್ನು ಪಡೆದುಕೊಂಡಿದ್ದಾರೆ. ವೇತನ, ಅತಿಥಿ ಭತ್ಯೆ, ಮನೆ ಬಾಡಿಗೆ ಅಂತ ಕೋಟ್ಯಾಂತರ ರುಪಾಯಿಯನ್ನು ಭತ್ಯೆಯಾಗಿ ಪಡೆದುಕೊಂಡಿರುವ ಸತ್ಯ ಬೆಳಕಿಗೆ ಬಂದಿದೆ.

ರು. 6,26,97,721ಯನ್ನು ವೇತನ, ಮನೆ ಬಾಡಿಗೆ ಮತ್ತು ಅತಿಥಿ ಭತ್ಯೆ ಎಂದು ಹೇಳಿ ಪಡೆದುಕೊಂಡಿದ್ದಾರೆ. 29 ಸಚಿವರು ಕೇವಲ ಪ್ರಯಾಣಕ್ಕಾಗಿಯೇ ರು.7,53,00,523 ಪಡೆದುಕೊಂಡಿದ್ದಾರೆ. ಇನ್ನು ಪ್ರತಿ ಕಿ.ಮೀಗೆ ರು.15 ದರದಲ್ಲಿ ಕಾರುಗಳು ಸಿಗುತ್ತಿರುವ ಸಂದರ್ಭದಲ್ಲೂ ಪ್ರತಿ ಕಿ.ಮೀ ಗೆ ರು.20 ರಿಂದ ರು.30 ದರವನ್ನು ಹೆಚ್ಚಿಸಿ ಭತ್ಯೆ ಪಡೆದುಕೊಂಡಿದ್ದಾರೆ.

ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಮಾಹಿತಿ ಹಕ್ಕು ಕಾಯ್ದೆ ಪಡೆದುಕೊಂಡಿರುವ ಮಾಹಿತಿಯಲ್ಲಿ ಈ ಎಲ್ಲಾ ಅಂಶಗಳು ಬಹಿರಂಗವಾಗಿವೆ. ಯಾವ ಸಚಿವರು ಕೂಡ ಜಿಲ್ಲೆಗಳಿಗೆ ಸರಿಯಾಗಿ ಬರುತ್ತಿಲ್ಲ,

ಸರಿಯಾಗಿ ಕೆಲಸ ಮಾಡುತ್ತಿಲ್ಲ ಆದರೂ ಕೂಡ ಹೆಚ್ಚು ಭತ್ಯೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅತಿ ಹೆಚ್ಚು ಪ್ರಯಾಣ ಭತ್ಯೆ ಪಡೆದ ಸಚಿವರ ವಿವರನ್ನು ಪಡೆದುಕೊಂಡಿದ್ದು, ಅದರಲ್ಲಿ ಸಚಿವ ವಿನಯಕುಮಾರ್ ಸೊರಕೆ ರು.56,62,611, ಆರೋಗ್ಯ ಸಚಿವ ಯು.ಟಿ ಕಾದರ್ ರು.54,42,657, ಅರಣ್ಯ ಖಾತೆ ಸಚಿವ ರಮಾನಾಥ್ ರೈ ರು.51,44,218, ಸಚಿವ ಬಾಬೂರಾವ್ ಚಿಂಚನಸೂರ್ ರು.44,63,127 ಅವರು ಹೆಚ್ಚಿನ ಮಟ್ಟದ ಭತ್ಯೆ ಪಡೆದುಕೊಂಡಿದ್ದು, ಕಡಿಮೆ ಪ್ರಯಾಣ ದರ ಪಡೆದಿರುವ ಕಂದಾಯ ಇಲಾಖೆಯ ಸಚಿವ ಶ್ರೀನಿವಾಸ ಪ್ರಸಾದ್ ಕೇವಲ ರು.2,29,286 ಪ್ರಯಾಣ ಭತ್ಯೆ ಪಡೆದುಕೊಂಡಿದ್ದಾರೆ.

ತಮಗೆ ನೀಡಿರುವಂತಹ ಭತ್ಯೆ ಮಿತಿಯನ್ನು ಮೀರಿ ಹೆಚ್ಚಿನ ಪ್ರಯಾಣ ದರ ತೋರಿಸಿ ಹೆಚ್ಚು ಭತ್ಯೆ ಪಡೆದುಕೊಂಡಿದ್ದಾರೆ. ಕೋಟ್ಯಂತರ ರುಪಾಯಿಗಳನ್ನು ಕೇವಲ ಪ್ರಯಾಣ ದರಕ್ಕಾಗಿ ಪಡೆದುಕೊಂಡಿರುವಂತದ್ದು ಇದೀಗ ಬಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT