ಪತ್ತೆಯಾದ ಮೈಸೂರು ಒಡೆಯರ್ ಕಾಲದ ಶಾಸನ 
ಜಿಲ್ಲಾ ಸುದ್ದಿ

ಮೈಸೂರಿನ ಹಾಡ್ಯದಲ್ಲಿ 18ನೇ ಶತಮಾನದ ಶಾಸನ ಪತ್ತೆ

ಮೈಸೂರು: ಮೈಸೂರು ಒಡೆಯರ್ ಕಾಲದ ಶಾಸನವೊಂದು ಕೆ.ಆರ್.ನಗರ ತಾಲೂಕು ಹಾಡ್ಯ ಗ್ರಾಮದಲ್ಲಿ ಪತ್ತೆಯಾಗಿದೆ. ಮಾನಸ ಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗದ ಸಂಶೋಧಕ ಸನತ್‍ಕುಮಾರ್ ಅವರು ಹಾಡ್ಯ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಅರ್ಚಕ ಎಚ್.ವಿ. ಜಗದೀಶ್ ಅವರ ಮನೆಯಲ್ಲಿ ಈ ಶಾಸನ ಪತ್ತೆ ಮಾಡಿದ್ದಾರೆ. ಅಲ್ಲಿ ದೊರೆತ ಕಂಚಿನ ಮೂರ್ತಿಯ ಪೀಠದಲ್ಲಿ ಕ್ರಿ.ಶ. 18ನೇ ಶತಮಾನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲಕ್ಕೆ ಸೇರಿದ ಶಾಸನ ಕಂಡುಬಂದಿದೆ.
ಶಾಸನವು ವೀರಭದ್ರ ಶಿಲ್ಪದ ಕೆಳಭಾಗದ ಹಿಂಭಾಗದಲ್ಲಿ ಕೆತ್ತನೆಯಾಗಿದೆ. ಈ ಶಾಸನದಲ್ಲಿ ಸೊಸ್ತಿಶ್ರೀ  ಜಯಾಬ್ಯುದಯ ಶಾಲಿವಾಹನ ಶಕ 1751ನೇ ವಿರೋ ಸಂವತ್ಸರದ ಕಾರ್ತಿಕ ಶು 10 ಲು ಪಾಡ್ಯದ ಶ್ರೀ ವೀರಭದ್ರ ದೇವರ ಉತ್ಸವಮೂರ್ತಿ ಗೋವಿಂದನಹಳಿ ಪುಟಾಚಾರಿ ಮಾಡಿದ ವಿಗ್ರಹಾ (ಹಾ) ಚಗೌಉಡರ ಬುಕ್ತಿ! ಎಂದು ಬರೆದಿದೆ. ಸನತ್ ಕುಮಾರ್ ಅವರು ಮೈಸೂರು ವಿವಿ ಪುರಾತತ್ತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಿ. ಕರಿಯಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಹಾಡ್ಯ ಗ್ರಾಮದಲ್ಲಿ ಕ್ಷೇತ್ರಕಾರ್ಯಕ್ಕೆ ಭೇಟಿ ನೀಡಿದ್ದಾಗ ಈ ಶಾಸನ ಪತ್ತೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT