ಆರೋಗ್ಯ ಸಚಿವ ಯು.ಟಿ.ಖಾದರ್ 
ಜಿಲ್ಲಾ ಸುದ್ದಿ

ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಗೊಂದಲ, ಕೇಂದ್ರ ಕ್ರಮ ಕೈಗೊಳ್ಳಲಿ: ಸಚಿವ ಖಾದರ್

ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಎಂಎಸ್‍ಜಿ ಪ್ರಮಾಣದ ಬಗ್ಗೆ ಕೆಲವು ಗೊಂದಲವಿದ್ದು, ಕೇಂದ್ರ ಸರ್ಕಾರ ಕಾನೂನು ತೊಡಕನ್ನು ನಿವಾರಿಸಬೇಕು ಎಂದು...

ಬೆಂಗಳೂರು: ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಎಂಎಸ್‍ಜಿ ಪ್ರಮಾಣದ ಬಗ್ಗೆ ಕೆಲವು ಗೊಂದಲವಿದ್ದು, ಕೇಂದ್ರ ಸರ್ಕಾರ ಕಾನೂನು ತೊಡಕನ್ನು ನಿವಾರಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಎಂಎಸ್‍ಜಿ (ಮೋನೋಸೋಡಿಯಂ ಗುಲ್ಟಾಮೇಟ್) ಪ್ರಮಾಣದ ಮೇಲೆ ಕಡಿವಾಣ ಹೇರುವ ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಕೆಲವು
ಗೊಂದಲವಿದ್ದು, ರಾಜ್ಯ ಸರ್ಕಾರಕ್ಕೆ ಇಂತಹ ಆಹಾರ ಉತ್ಪನ್ನಗಳ ಮೇಲೆ ಕ್ರಮ ವಹಿಸಲು ಕಷ್ಟವಾಗುತ್ತಿದೆ. ಎಂಎಸ್‍ಜಿಯನ್ನು ಸಂಸ್ಥೆಯವರೇ ಆಹಾರ ಉತ್ಪನ್ನಕ್ಕೆ ಹಾಕಿದರೆ ಆಹಾರ ಇಲಾಖೆಗೆ ಈ ಕುರಿತು ಮಾಹಿತಿ ನೀಡಬೇಕಾಗುತ್ತದೆ. ಆದರೆ ಆಹಾರ ಉತ್ಪನ್ನಗಳನ್ನು ತಯಾರಿಸುವಾಗ ನೀರು ಸೇರಿದಂತೆ ಕಚ್ಛಾವಸ್ತುಗಳ ಮೂಲಕವೂ ಎಂಎಸ್‍ಜಿ ಅಂಶ ಉತ್ಪನ್ನಕ್ಕೆ ಸೇರ್ಪಡೆಯಾಗುತ್ತದೆ.

ತಯಾರಿಕಾ ಸಂಸ್ಥೆಗಳಿಗೆ ತಿಳಿಯದಂತೆ ಕಚ್ಛಾವಸ್ತುಗಳ ಮೂಲಕ ಎಂಎಸ್‍ಜಿ ಸೇರ್ಪಡೆಯಾದರೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾಯ್ದೆಯಲ್ಲಿ ಮಾಹಿತಿಯಿಲ್ಲ. ಕೇಂದ್ರ ಸರ್ಕಾರವೇ ಕಾಯ್ದೆಯಲ್ಲಿ ಬದಲಾವಣೆ ತರಬೇಕು ಎಂದರು.

ಮ್ಯಾಗಿಯನ್ನು ಪರೀಕ್ಷಿಸಿದಂತೆ ಇತರೆ 7 ಕಂಪನಿಗಳ ನೂಡಲ್ಸ್ ಉತ್ಪನ್ನಗಳನ್ನು ಪ್ರಯೋಗಾಲಯಕ್ಕೆ ನೀಡಲಾಗಿದೆ. ಆಹಾರ ಉತ್ಪನ್ನಗಳನ್ನು ಪರೀಕ್ಷಿಸಲು ಇರುವ ನಿಯಮದಂತೆ 7 ಕಂಪನಿಗಳ ನೂಡಲ್ಸ್ ಉತ್ಪನ್ನಗಳನ್ನು ಪಶ್ಚಿಮ ಬಂಗಾಳದ ಪ್ರಯೋಗಾಲಯಕ್ಕೆ ನೀಡಲಾಗಿದೆ. ಶೀಘ್ರದಲ್ಲಿ ವರದಿ ಸರ್ಕಾರಕ್ಕೆ ಬರಲಿದ್ದು, ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT