ಆರೋಗ್ಯ ಸಚಿವ ಯು.ಟಿ.ಖಾದರ್ 
ಜಿಲ್ಲಾ ಸುದ್ದಿ

ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಗೊಂದಲ, ಕೇಂದ್ರ ಕ್ರಮ ಕೈಗೊಳ್ಳಲಿ: ಸಚಿವ ಖಾದರ್

ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಎಂಎಸ್‍ಜಿ ಪ್ರಮಾಣದ ಬಗ್ಗೆ ಕೆಲವು ಗೊಂದಲವಿದ್ದು, ಕೇಂದ್ರ ಸರ್ಕಾರ ಕಾನೂನು ತೊಡಕನ್ನು ನಿವಾರಿಸಬೇಕು ಎಂದು...

ಬೆಂಗಳೂರು: ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಎಂಎಸ್‍ಜಿ ಪ್ರಮಾಣದ ಬಗ್ಗೆ ಕೆಲವು ಗೊಂದಲವಿದ್ದು, ಕೇಂದ್ರ ಸರ್ಕಾರ ಕಾನೂನು ತೊಡಕನ್ನು ನಿವಾರಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಎಂಎಸ್‍ಜಿ (ಮೋನೋಸೋಡಿಯಂ ಗುಲ್ಟಾಮೇಟ್) ಪ್ರಮಾಣದ ಮೇಲೆ ಕಡಿವಾಣ ಹೇರುವ ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಕೆಲವು
ಗೊಂದಲವಿದ್ದು, ರಾಜ್ಯ ಸರ್ಕಾರಕ್ಕೆ ಇಂತಹ ಆಹಾರ ಉತ್ಪನ್ನಗಳ ಮೇಲೆ ಕ್ರಮ ವಹಿಸಲು ಕಷ್ಟವಾಗುತ್ತಿದೆ. ಎಂಎಸ್‍ಜಿಯನ್ನು ಸಂಸ್ಥೆಯವರೇ ಆಹಾರ ಉತ್ಪನ್ನಕ್ಕೆ ಹಾಕಿದರೆ ಆಹಾರ ಇಲಾಖೆಗೆ ಈ ಕುರಿತು ಮಾಹಿತಿ ನೀಡಬೇಕಾಗುತ್ತದೆ. ಆದರೆ ಆಹಾರ ಉತ್ಪನ್ನಗಳನ್ನು ತಯಾರಿಸುವಾಗ ನೀರು ಸೇರಿದಂತೆ ಕಚ್ಛಾವಸ್ತುಗಳ ಮೂಲಕವೂ ಎಂಎಸ್‍ಜಿ ಅಂಶ ಉತ್ಪನ್ನಕ್ಕೆ ಸೇರ್ಪಡೆಯಾಗುತ್ತದೆ.

ತಯಾರಿಕಾ ಸಂಸ್ಥೆಗಳಿಗೆ ತಿಳಿಯದಂತೆ ಕಚ್ಛಾವಸ್ತುಗಳ ಮೂಲಕ ಎಂಎಸ್‍ಜಿ ಸೇರ್ಪಡೆಯಾದರೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾಯ್ದೆಯಲ್ಲಿ ಮಾಹಿತಿಯಿಲ್ಲ. ಕೇಂದ್ರ ಸರ್ಕಾರವೇ ಕಾಯ್ದೆಯಲ್ಲಿ ಬದಲಾವಣೆ ತರಬೇಕು ಎಂದರು.

ಮ್ಯಾಗಿಯನ್ನು ಪರೀಕ್ಷಿಸಿದಂತೆ ಇತರೆ 7 ಕಂಪನಿಗಳ ನೂಡಲ್ಸ್ ಉತ್ಪನ್ನಗಳನ್ನು ಪ್ರಯೋಗಾಲಯಕ್ಕೆ ನೀಡಲಾಗಿದೆ. ಆಹಾರ ಉತ್ಪನ್ನಗಳನ್ನು ಪರೀಕ್ಷಿಸಲು ಇರುವ ನಿಯಮದಂತೆ 7 ಕಂಪನಿಗಳ ನೂಡಲ್ಸ್ ಉತ್ಪನ್ನಗಳನ್ನು ಪಶ್ಚಿಮ ಬಂಗಾಳದ ಪ್ರಯೋಗಾಲಯಕ್ಕೆ ನೀಡಲಾಗಿದೆ. ಶೀಘ್ರದಲ್ಲಿ ವರದಿ ಸರ್ಕಾರಕ್ಕೆ ಬರಲಿದ್ದು, ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT