ಆರ್ಥಿಕ ನೆರವು ನೀಡಲು ತಿನಿಸುಗಳ ಮಾರಾಟ ಮಾಡುತ್ತಿರುವ ಮುಸ್ಲಿಂ ಯುವಕರು 
ಜಿಲ್ಲಾ ಸುದ್ದಿ

ಕ್ಯಾನ್ಸರ್ ಪೀಡಿತ ತರುಣಿಗೆ ರಂಜಾನ್ ಉಪವಾಸ ನಿರತ ಯುವಕರ ನೆರವು

ರಂಜಾನ್ ಇಸ್ಲಾಂ ಧರ್ಮೀಯರಿಗೆ ಹಬ್ಬ ಮಾತ್ರವಲ್ಲ, ಧರ್ಮ ಧರ್ಮಗಳನ್ನು ಬೆಸೆಯುವ ಆಚರಣೆಯೂ ಹೌದು ಎಂಬುದನ್ನು ಬೆನ್ಸನ್ ಟೌನ್ ನ ಹುಡುಗರು ಸಾಬೀತುಪಡಿಸಿದ್ದಾರೆ.

ಬೆಂಗಳೂರು: ರಂಜಾನ್ ಇಸ್ಲಾಂ ಧರ್ಮೀಯರಿಗೆ  ಹಬ್ಬ ಮಾತ್ರವಲ್ಲ, ಧರ್ಮ ಧರ್ಮಗಳನ್ನು ಬೆಸೆಯುವ ಆಚರಣೆಯೂ ಹೌದು ಎಂಬುದನ್ನು ಬೆನ್ಸನ್ ಟೌನ್ ನ ಹುಡುಗರು ಸಾಬೀತುಪಡಿಸಿದ್ದಾರೆ.

ಉಪವಾಸ ಪೂರ್ಣಗೊಳಿಸುವವರಿಗೆ ತಿನಿಸುಗಳನ್ನು ಮಾರುವ ಮೂಲಕ ಕ್ಯಾನ್ಸರ್ ನಿಂದ ಬಳಲುತ್ತಿರುವ 13 ವರ್ಷದ ಹಿಂದೂ ಬಡ ಬಾಲಕಿಯ ಆರ್ಥಿಕ ನೆರವಿಗೆ ಮುಂದಾಗಿದ್ದಾರೆ. ಬೆನ್ಸನ್ ಟೌನ್ ನ 3 ನೇ ಅಡ್ಡರಸ್ತೆಯಲ್ಲಿನ ಮುಸ್ಲಿಂ ನಿವಾಸಿಗಳು ಬೆಳಿಗ್ಗೆ 5 :30 ಹಾಗೂ ಸಂಜೆ 6 ರ ವೇಳೆಗೆ ಮಸೀದಿಗೆ ಉಪವಾಸ ಆರಂಭಿಸಲು ಹಾಗೂ ಅಂತ್ಯಗೊಳಿಸಲು ತೆರಳುತ್ತಾರೆ. ಮಸೀದಿಯ ಮುಂದೆ ಮಳಿಗೆ ತೆರೆದಿರುವ ಹುಡುಗರು ಇಲ್ಲಿ ತಿನಿಸುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ. ಆದರೆ ಹಣವನ್ನು ತಮಗಾಗಿ ಬಳಸದೇ ತಮ್ಮದೇ ಬಡಾವಣೆಯ ಬಾಲಕಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಕೂಡಿಡುತ್ತಿದ್ದಾರೆ.

ನೆರವಿನ ಹಸ್ತ: ಒಂದು ತಿಂಗಳ ಹಿಂದಷ್ಟೆ ಬೆನ್ಸನ್ ಟೌನ್ ನ ಉದ್ಯಮಿ ಖುರಮ್ ಹಾಗೂ ವಿದ್ಯಾರ್ಥಿ ಫೈಸಲ್ ಗೆ ತಮ್ಮ ಪರಿಚಯದವರ ಮಗು ಕ್ಯಾನ್ಸರ್ ಗೆ ಒಳಗಾಗಿರುವುದು ತಿಳಿದಿದೆ. ಬಾಲಕಿಗೆ ಆರ್ಥಿಕ ಸಹಾಯ ಮಾಡುವುದಕ್ಕೆ ನಿರ್ಧರಿಸಿ ಸಾರ್ವಜನಿಕರಿಂದ ದಾನ ಕೇಳಿ ಹಣ ಸಂಗ್ರಹಿಸುವ ಮೂಲಕ ಆರ್ಥಿಕ ಸಹಾಯಕ್ಕೆ ಮುಂದಾದ ಇವರು ಮಸೀದಿಯ ಮುಂದೆ ಸಣ್ಣ ಮಳಿಗೆ ನಿರ್ಮಿಸಿ ಆಹಾರ ತಿನಿಸುಗಳನ್ನು ಮಾರತೊಡಗುತ್ತಾರೆ. ಮುಂಜಾನೆ 5 ಕ್ಕೆ ಎದ್ದು ಸಮೋಸ, ಪರೋಟ, ಚಕ್ಕುಲಿ, ಕಜ್ಜಾಯ, ಪಾನೀಯಗಳನ್ನು ತಯಾರಿಸಿ ಮಳಿಗೆಗೆ ಕೊಂಡೊಯ್ದು ಮಾರುತ್ತಿರುತ್ತಾರೆ. ಇದರಿಂದ ಸಂಗ್ರಹವಾಗುವ ಹಣವನ್ನೇ ಕ್ಯಾನ್ಸರ್ ಪೀಡಿತ ಬಾಲಕಿಯ ಪೋಷಕರಿಗೆ ನೀಡಲಾಗುತ್ತಿದೆ. ಈ ಹುಡುಗರ ಸಂಬಂಧಿಗಳಾದ ಹಾಗೂ ಸ್ನೇಹಿತರಾದ ಅದ್ನಾನ್, ತಮನ್ನಾ, ಹಸನ್ನಾ ಹಾಗೂ ಯೂಸರ್ ಹಣ ಸಂಗ್ರಹ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ತಿನಿಸುಗಳ ಮಾರಾಟದ ಜೊತೆಗೆ ಮಳಿಗೆಯಲ್ಲಿ ಕ್ಯಾನ್ಸರ್ ಪೀಡಿತ ಬಾಲಕಿಗೆ ಸಹಾಯ ಮಾಡಿ ಎಂಬ ಫಲಕವಿರುವ ಡಬ್ಬವನ್ನು ಇಡಲಾಗಿದೆ. ಈ ಮಸೀದಿಗೆ ನಿತ್ಯ 200 -300  ಮಂದಿ ಪ್ರಾರ್ಥನೆಗಾಗಿ ಬರುತ್ತಿದ್ದು ಈ ಕಾರ್ಯಕ್ಕೆ ಬೆಂಬಲ ದೊರೆಯುತ್ತಿದೆ. ಧರ್ಮದ ಗಡಿ ಮೀರಿದ ಮಾನವೀಯತೆಗೆ ವ್ಯಾಪಕ ನೆರವು ದೊರೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT