ಜಿಲ್ಲಾ ಸುದ್ದಿ

ಕೋರ್ಟ್ ಗೆ ಮತ್ತೆ ಬಂದ ನಿತ್ಯಾನಂದ

Mainashree

ರಾಮನಗರ: ನಿತ್ಯಾನಂದ ವಿರುದ್ಧದ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏ.15ಕ್ಕೆ ಮುಂದೂಡಿದೆ.

ಸಿಐಡಿ ಸಲ್ಲಿಸಿದ್ದ ದೋಷಾರೋಪಣ ಪಟ್ಟಿಯಲ್ಲಿ 148 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿದ ಬಗ್ಗೆ ನಿತ್ಯಾನಂದ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆಗೆ ಪ್ರಾಸಿ ಕ್ಯೂಷನ್ ಪರ ವಕೀಲ ವಡವಡಗಿ ತಕರಾರು ಸಲ್ಲಿಸಿದರು.

ವಿಚಾರಣೆ ವೇಳೆ ನಿತ್ಯಾನಂದ ಸಹಿತ 6 ಮಂದಿ ಆರೋಪಿಗಳು ಹಾಜರಿದ್ದರು. ನ್ಯಾಯಾಧೀಶರಾದ ಮಂಜುಳಾ ಅವರು ಆರೋಪಿಗಳ ಅನುಪಸ್ಥಿತಿಯಲ್ಲಿ ವಾದ, ಪ್ರತಿವಾದಕ್ಕೆ ಏ.1ರಂದು ಅವಕಾಶ ಕಲ್ಪಿಸಿ, ಪ್ರಕರಣದ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿದ್ದರು.

SCROLL FOR NEXT