ಸಚಿವೆ ಉಮಾಶ್ರೀ 
ಜಿಲ್ಲಾ ಸುದ್ದಿ

ಉಮಾಶ್ರೀ ಪತ್ರಪ್ರಮಾದ!

ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿಧನರಾಗುತ್ತಾರೆ ಎಂಬುದು ನಟಿ ಕಂ ಸಚಿವೆ ಉಮಾಶ್ರೀ ಅವರಿಗೆ ಒಂದು ದಿನ ಮುನ್ನ ಅಂದರೆ ಬುಧವಾರವೇ ಗೊತ್ತಿತ್ತಂತೆ!...

ಬೆಂಗಳೂರು: ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ನಿಧನರಾಗುತ್ತಾರೆ ಎಂಬುದು ನಟಿ ಕಂ ಸಚಿವೆ ಉಮಾಶ್ರೀ ಅವರಿಗೆ ಒಂದು ದಿನ ಮುನ್ನ ಅಂದರೆ ಬುಧವಾರವೇ ಗೊತ್ತಿತ್ತಂತೆ!

ಈ `ದಿವ್ಯದೃಷ್ಟಿ' ಎಲ್ಲರ ಅರಿವಿಗೂ ಬರಬಾರದೆಂದು ಶುಕ್ರವಾರದವರೆಗೂ ಕಾದಿದ್ದರಂತೆ. ಅದಕ್ಕೇ ಶುಕ್ರವಾರ ಸಂತಾಪ ಸೂಚಿಸಿದ್ದಾರೆ!! ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ನಿಧನರಾದದ್ದು ಗುರುವಾರ. ಈ ಸುದ್ದಿ ಉಮಾಶ್ರೀ ಗಮನಕ್ಕೆ ಬಂದಿಲ್ಲವೇನೋ!?. ಅಥವಾ `ಅತ್ಯಂತ ಕಾರ್ಯ ಒತ್ತಡ'ದಲ್ಲಿ `ಇಂತಹ' ಮರೆತುಹೋಯಿತೇನೋ. ಅದಕ್ಕೇ `ಬಿಡುವು' ಮಾಡಿಕೊಂಡು ಶುಕ್ರವಾರ ಸಂಜೆ ಶೋಕವ್ಯಕ್ತಪಡಿಸಿದ್ದಾರೆ.

ಒಂದು ದಿನ ತಡವಾಗಿದ್ದಕ್ಕೆ ಸಚಿವೆಯೊಬ್ಬರಿಗೆ ರಾಜ್ಯದ ಆಗುಹೋಗುಗಳ ತಲೆ `ಭಾರ'ವಿನಾಯಿತಿ ಕೊಡಬಹುದೇನೋ. ಆದರೆ, ಅವರು ಶುಕ್ರವಾರ ಕಳುಹಿಸಿರುವ ಶೋಕ ಸಂದೇಶದಲ್ಲಿ ಮಾ.11ರ ದಿನಾಂಕ ನಮೂದಿಸಿದ್ದಾರೆ. ಅಂದರೆ ಸಿದ್ದಲಿಂಗಯ್ಯ ಅವರು ನಿಧನರಾಗುವ ಮುನ್ನವೇ ಶೋಕ ಸಂದೇಶವನ್ನು ಹಿರಿಯ ನಟಿಯೂ ಆದ ಸಚಿವೆ ಉಮಾಶ್ರೀ ಅವರು ತಯಾರು ಮಾಡಿದ್ದಾರೆ. ಆದರೆ, ತಮ್ಮ ಈ `ಭವಿಷ್ಯವಾಣಿ'ಯ ಖದರ್ ಎಲ್ಲರ ಅರಿವಿಗೂ ಬಾರದಿರಲಿ ಎಂದೋ ಏನೋ ಶುಕ್ರವಾರ ಸಂಜೆ ಈ ಶೋಕ ಸಂದೇಶವನ್ನು ಎಲ್ಲ ಮಾಧ್ಯಮಗಳಿಗೂ ಕಳುಹಿಸಿದ್ದಾರೆ. ಪ್ರಜ್ಞಾವಂತೆಯಿಂದ ಇಂಥ ಪ್ರಮಾದವೇ?.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT