ಹೊಯ್ಸಳಕ್ಕೂ ಬಂತು ಸಿಸಿಟಿವಿ ಕ್ಯಾಮೆರಾ 
ಜಿಲ್ಲಾ ಸುದ್ದಿ

ಹೊಯ್ಸಳಕ್ಕೂ ಬಂತು ಸಿಸಿಟಿವಿ ಕ್ಯಾಮೆರಾ

ಪರಿಣಾಮಕಾರಿ ಗಸ್ತು ವ್ಯವಸ್ಥೆ ಹಾಗೂ ಅಪರಾಧಿಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ನಗರದಲ್ಲಿ ಗಸ್ತು ತಿರುಗುವ ಪೊಲೀಸ್ ಹೊಯ್ಸಳ ವಾಹನಗಳಿಗೆ ಕ್ಯಾಮೆರಾ ಅಳವಡಿಸಿದೆ...

ಬೆಂಗಳೂರು: ಪರಿಣಾಮಕಾರಿ ಗಸ್ತು ವ್ಯವಸ್ಥೆ ಹಾಗೂ ಅಪರಾಧಿಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ನಗರದಲ್ಲಿ ಗಸ್ತು ತಿರುಗುವ ಪೊಲೀಸ್ ಹೊಯ್ಸಳ ವಾಹನಗಳಿಗೆ ಕ್ಯಾಮೆರಾ ಅಳವಡಿಸಿದೆ.

ಪ್ರಾಯೋಗಿಕವಾಗಿ ಆಗ್ನೇಯ ವಿಭಾಗದ 14 ಠಾಣೆಗಳ ವ್ಯಾಪ್ತಿಯಲ್ಲಿಗಸ್ತು ತಿರುಗುವ 25 ಹೊಯ್ಸಳ ವಾಹನಗಳ ಪೈಕಿ 15 ವಾಹನಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸರು ಯಾವ ಸ್ಥಳದಲ್ಲಿ ಗಸ್ತು ತಿರುಗುತ್ತಾರೆ? ಯಾವ ಸಮಯಕ್ಕೆ, ಯಾವ ಪ್ರದೇಶದಲ್ಲಿರುತ್ತಾರೆ ಎನ್ನುವುದನ್ನು ನಿರಂತರವಾಗಿ ಗಮನಿಸ ಬಹುದು. ಅಲ್ಲದೇ ಪೊಲೀಸರ ಭ್ರಷ್ಟಾಚಾರಕ್ಕೂ ಇದು ಕಡಿವಾಣ ಹಾಕಲಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಮಳೆ, ಬಿಸಿಲಿಗೆ ಹಾನಿಯಾಗದಂತೆ ಪ್ಲಾಸ್ಟಿಕ್ ಕವಚ ಹೊಂದಿರುವ ಕ್ಯಾಮೆರಾವನ್ನು ವಾಹನದ ಮೇಲೆ ಸೈರನ್ ಲೈಟ್ ಗಳ ರಕ್ಷಣೆಗಿರುವ ತಂತಿಗಳ ಮೇಲೆ ಅಳವಡಿಸಲಾಗಿದೆ. ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ವಾಹನದ ಒಳಭಾಗದಲ್ಲಿದೆ. ಗಸ್ತು ತಿರುಗಿದ ವಾಹನ ವಾಪಸ್ ಠಾಣೆಗೆ ಬಂದ ನಂತರ ಪ್ರತಿ 12 ಗಂಟೆಗಳಿಗೊಮ್ಮೆ ವಾಹನದಲ್ಲಿರುವ ರೆಕಾರ್ಡಿಂಗ್ ಹಾರ್ಡ್ ಡಿಸ್ಕ್ ತೆರೆದು ಅದರಲ್ಲಿರುವ ವಿಡಿಯೋವನ್ನು ಠಾಣೆಯಲ್ಲಿರುವ ಕಂಪ್ಯೂಟರ್‍ಗೆ ಡೌನ್‍ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಈ ಕ್ಯಾಮೆರಾ ರಾತ್ರಿಯೂ ಚಿತ್ರೀಕರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ದೊಂಬಿ, ಗಲಾಟೆ, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡುವಾಗ ಅವರ ಮುಖ ಚಹರೆ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದರಿಂದ ಆರೋಪಿಗಳ ಬಂಧನಕ್ಕೂ ಸಹಕಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT