ಬೆಂಗಳೂರು ನಗರಾಭಿವೃದ್ಧಿ ಕೆ.ಜೆ.ಜಾರ್ಜ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಒತ್ತುವರಿ ಸಮಸ್ಯೆಗೆ ಒಗ್ಗೂಡಿ ಪರಿಹಾರ

``ಕೆರೆ ಒತ್ತುವರಿಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿರುವುದು ನಮ್ಮ ಕಣ್ಣ ಮುಂದಿವೆ. ಎಲ್ಲರೂ ಸೇರಿ ಈ ಸಮಸ್ಯೆ ಪರಿಹರಿಸುತ್ತೇವೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ನನಗೆ ಮಹತ್ವದ ಜವಾಬ್ದಾರಿಗಳಿವೆ, ಘನತ್ಯಾಜ್ಯ ಸಮಸ್ಯೆ ನಿವಾರಿಸಲು ಸರ್ಕಾರ...

ಬೆಂಗಳೂರು: ``ಕೆರೆ ಒತ್ತುವರಿಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿರುವುದು ನಮ್ಮ ಕಣ್ಣ ಮುಂದಿವೆ. ಎಲ್ಲರೂ ಸೇರಿ ಈ ಸಮಸ್ಯೆ ಪರಿಹರಿಸುತ್ತೇವೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ನನಗೆ ಮಹತ್ವದ ಜವಾಬ್ದಾರಿಗಳಿವೆ, ಘನತ್ಯಾಜ್ಯ ಸಮಸ್ಯೆ ನಿವಾರಿಸಲು ಸರ್ಕಾರ ಸಕಲ ರೀತಿಯಿಂದಲೂ ಸಜ್ಜಾಗಿದೆ.

ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಆರಂಭಿಸಲು ತೀರ್ಮಾನಿಸಲಾಗಿದೆ. ತ್ಯಾಜ್ಯ, ಕೆರೆ ಒತ್ತುವರಿ, ಟ್ರಾಫಿಕ್ ಸಮಸ್ಯೆಗಳೆಲ್ಲವೂ ಶೀಘ್ರ ತಹಬದಿಗೆ ಬರಲಿವೆ ,'' ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ``ಬೆಂಗಳೂರಿನಲ್ಲಿ ನಿತ್ಯ ನಾಲ್ಕು ಸಾವಿರ ಟನ್ ಗಳಿಗೂ ಅಧಿಕ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ,'' ಎಂದರು.

`` ಈ ಪೈಕಿ 750 ಟನ್ ಕಸವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೆಲದಲ್ಲಿ ಕಸ ಹೂಳುವುದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ಹೀಗಾಗಿ ಯೂರೋಪ್, ನೆದರ್‍ಲ್ಯಾಂಡ್, ಚೀನಾ ಮಾದರಿಯಲ್ಲಿ  ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಬೆಂಗಳೂರು, ನಂತರದಲ್ಲಿ ರಾಜ್ಯದ ಇತರ ಕಡೆ ಈ ಘಟಕಗಳನ್ನು ತೆರಯಲಾಗುವುದು,'' ಎಂದರು.

``ಮಿತಿಮೀರದ ಜನದಟ್ಟಣೆಯಿಂದ ನಗರ ಸಮಸ್ಯೆಗೆ ಸಿಲುಕದೆ. ಮೆಟ್ರೋ ಹಾಗೂ ಮೋನೋ ರೈಲು ಸೇವೆಗಳು ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂಬಡ್ತಿ ಅಲ್ಲ..: ``ನನಗೆ ಸಚಿವ ಸ್ಥಾನದಲ್ಲಿ ಹಿಂಬಡ್ತಿ ನೀಡಲಾಗಿದೆ ಎಂಬುದು ಸುಳ್ಳು.ಯಾರಿಗೆ ಯಾವ ಖಾತೆ ನೀಡಬೇಕೆಂಬುದು ಸಿಎಂ ಪರಮಾಧಿಕಾರ ಅದೇ ರೀತಿ ಗೃಹ ಖಾತೆ
ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದರಿಂದ ಅದು ನಂಬರ್ ಟೂ ಖಾತೆಯಂತೆ ಕಾಣಬಹುದು. ಆದರೆ ನನಗೆ ಸಿಕ್ಕಿರುವ ಬೆಂಗಳೂರು ನಗರ ಅಭಿವೃದ್ಧಿ ಖಾತೆಯಲ್ಲಿ ಹಲವು
ಮಹತ್ವದ ಜವಾಬ್ದಾರಿಗಳಿವೆ. ಬೆಂಗಳೂರಿಗೇ ಪ್ರತ್ಯೇಕ ಸಚಿವರನ್ನು ನೀಡುವುದಾಗಿ ಪಾಲಿಕೆ ಚುನಾವಣೆ ವೇಳೆ ಸಿಎಂ ಭರವಸೆ ನೀಡಿದ್ದರು.

ಅದರಂತೆ ನನಗೆ ಅದರ ಜವಾಬ್ದಾರಿ ನೀಡಿದ್ದಾರೆ. ಗೃಹ ಸಚಿವನಾಗಿ ಅತ್ಯುತ್ತಮವಾಗಿ ಕೆಲಸ ಮಾಡಿ ತೃಪ್ತಿ ಇದೆ. ನನ್ನ ಕಾಲದಲ್ಲಿ ಒಂದು ಗೋಲಿಬಾರ್ ಆಗಲಿಲ್ಲ. ಒಂದು ಟಿಯರ್ ಗ್ಯಾಸ್ ಸಿಡಿಯಲಿಲ್ಲ. ದೊಡ್ಡ ಪ್ರಮಾಣದ ಲಾಠಿ ಚಾರ್ಜ್ ಕೂಡಾ ಆಗಲಿಲ್ಲ,'' ಎಂದು ಹೇಳಿದರು.

ಪರಮ್ ಅನುಭವಿ:
ಎಲ್ಲೋ ಒಂದು ಕಡೆ ಸಣ್ಣ ಪುಟ್ಟ ಗಲಾಟೆ ನಡೆದರೂ ಬಿಜೆಪಿಯವರು ನನ್ನ ರಾಜೀನಾಮೆಗೆ ಕೇಳುತ್ತಿದ್ದರು. ಆದರೆ ಈಗ ಗೃಹ ಸಚಿವರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಅನುಭವ ಇರುವವರು. ಉತ್ತಮವಾಗಿ ಕೆಲಸ ಮಾಡುತ್ತಾರೆ. ಆದರೆ ಬಿಜೆಪಿಯವರು ಪದೇ ಪದೇ ಅವರ ರಾಜಿನಾಮೆ ಕೇಳಬಾರದು ಎಂದರು.

ಜನಪ್ರತಿನಿಧಿಯೇ, ಪತ್ರಕರ್ತರೇ?:
ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಅವರು ತಮ್ಮ ವಿರುದ್ಧ ಮಾಡಿರುವ ಆಪಾದನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ``ನನ್ನ ಬಗ್ಗೆ ಮಾತನಾಡಲು ಅವರೇನು ಜನಪ್ರತಿನಿಧಿಯೇ? ಪತ್ರಕರ್ತರೇ? ನನ್ನ ವಿರುದ್ಧ ಮಾತನಾಡಬಾರದು ಎಂದು ಹೇಳಿದ್ದರೂ ಮಾತನಾಡುತ್ತಾರೆ. ಅಂತವಹ ಮಾತಿಗೆ ನಾನೇಕೆ ಪ್ರತಿಕ್ರಿಯೆ ನೀಡಲಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT