ಅಪಹರಣ(ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ಅಕ್ಕರೆಯ ಕರೆ ದೂಡಿತು ಅಪಹರಣಕಾರರ ಬಲೆಗೆ

ಹಿಂದು ಮುಂದು ನೋಡದೆ ಯುವತಿಯೊಬ್ಬಳ ಆಹ್ವಾನದ ಮೇರೆಗೆ ಸ್ಥಳಕ್ಕೆ ಬಂದು ನಿಂತ ವಾಸಿಂಗೆ ಅಲ್ಲಿ ಆಘಾತ ಕಾದಿತ್ತು.

ಬೆಂಗಳೂರು: ಆತ ಅಕ್ಕಿ ವ್ಯಾಪರಿಯೊಬ್ಬರ ಪುತ್ರ ವಾಸಿಂ. ಕೋಲಾರದ ಕೆಜಿಎಫ್ ನವನಾದ ವಾಸಿಂ ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ. ಮೊನ್ನೆ, ನ.5ರಂದು ಸಂಜೆ 5.30ರ ಹೊತ್ತಿಗೆ ಆತನ ಮೊಬೈಲ್‍ಗೆ  ಮಿಸ್ಡ್ ಕಾಲ್ ಬಂದಿತ್ತು. ಅದಕ್ಕೆ ಕೆರೆ ಮಾಡಿದ ವಾಸಿಂಗೆ ಅತ್ತ ಕಡೆಯಿಂದ ಹೆಣ್ಣಿನ ದನಿಯೊಂದು ಕೇಳಿಸಿತ್ತು. ಅತನಿಗೆ ಆಕೆಯ ಪರಿಚವೇನೂ ಇರಲಿಲ್ಲವಾದರೂ, ಆ ಹೆಣ್ಣು ಸ್ವಲ್ಪ ಸಲುಗೆಯಿಂದಲೇ ಮಾತನಾಡಿದ್ದಳು. ಅಲ್ಲದೆ, ತನ್ನನ್ನು ಭೇಟಿಯಾಗಬೇಕಿದ್ದರೆ ಬಿಟಿಎಂ ಲೇಔಟ್ ಬರುವಂತೆ ತಿಳಿಸಿದ್ದಳು.
ಹಿಂದು ಮುಂದು ನೋಡದೆ ಆಕೆ ಹೇಳಿದ್ದ ಸ್ಥಳಕ್ಕೆ ಬಂದು ನಿಂತ ವಾಸಿಂಗೆ ಅಲ್ಲಿ ಆಘಾತ ಕಾದಿತ್ತು. ಅದೇನೆಂದರೆ, ತಾನೇ ಅಪಹರಣಕಾರರ ಜಾಲಕ್ಕೆ ಸಿಲುಕಿದ್ದೇನೆ ಎಂಬುದು. ಹೌದು... ನಗರದಲ್ಲಿ ಈ ರೀತಿ ಏಮಾರಿಸಿ ಯುವಕನನ್ನು ಹಣಕ್ಕಾಗಿ ಅಪಹರಿಸಲಾಗಿದೆ. ಆದರೆ, ಎಷ್ಟು ಸುಲಭವಾಗಿ ಯುವಕನನ್ನು ಅಪಹರಿಸಲಾಗಿತ್ತೋ ಅಷ್ಟೇ ಸುಲಭವಾಗಿ ಅಪಹರಣಕಾರರ ಜಾಡನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಮೂವರನ್ನು ಬಂ„ಸಿರುವ ಪೊಲೀಸರು, ಅವರನ್ನೆಲ್ಲ ಜೈಲಿಗಟ್ಟಿದ್ದಾರೆ. ಬಂಧಿತರಿವರು ದೊಡ್ಡಮಾವಳ್ಳಿಯ ಶಾಹಿದ್ ಅಲಿ(23), ಲಕ್ಕಸಂದ್ರದ ನವಾಜ್‍ವುಲ್ಲಾಖಾನ್(27) ಮತ್ತು ಸೋಮೇಶ್ವರನಗರದ ಅಬ್ದುಲ್
ಜಾಫರ್ (20).

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT