(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ದಲಿತ ಅಡುಗೆ ಸಹಾಯಕಿ ಜನರಿಂದ ಶಾಲೆಗೆ ಬಹಿಷ್ಕಾರ

ಅಡುಗೆ ಸಹಾಯಕಿ ದಲಿತಳು, ಆಕೆಯನ್ನು ನೇಮಕ ಮಾಡುವಾಗ ನಮ್ಮನ್ನು ಪರಿಗಣಿಸಿಲ್ಲವೆಂದು ಗ್ರಾಮದ ಸವರ್ಣಿಯರು ತಮ್ಮ ಮಕ್ಕಳು ಶಾಲೆ ಬಹಿಷ್ಕರಿಸಲು ಕುಮ್ಮಕ್ಕು ನೀಡಿರುವ ಅನಾಗರಿಕ ಘಟನೆ ಮುಳಬಾಗಲು ತಾಲೂಕಿನ ಗಡಿ ಗ್ರಾಮವಾದ ಕಗ್ಗನಹಳ್ಳಿಯಲ್ಲಿ ನಡೆದಿದೆ...

ಕೋಲಾರ: ಅಡುಗೆ ಸಹಾಯಕಿ ದಲಿತಳು, ಆಕೆಯನ್ನು ನೇಮಕ ಮಾಡುವಾಗ ನಮ್ಮನ್ನು ಪರಿಗಣಿಸಿಲ್ಲವೆಂದು ಗ್ರಾಮದ ಸವರ್ಣಿಯರು ತಮ್ಮ ಮಕ್ಕಳು ಶಾಲೆ ಬಹಿಷ್ಕರಿಸಲು ಕುಮ್ಮಕ್ಕು ನೀಡಿರುವ ಅನಾಗರಿಕ ಘಟನೆ ಮುಳಬಾಗಲು ತಾಲೂಕಿನ ಗಡಿ ಗ್ರಾಮವಾದ ಕಗ್ಗನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆ ರಾಧಮ್ಮ ಎಂಬುವರು ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಒಪ್ಪದ ಒಂದು ವರ್ಗದ ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರದ ಯೋಜನೆಯಡಿ ನೀಡುವ ಮಧ್ಯಾಹ್ನದ ಊಟ ಸೇವನೆ ಮಾಡದಂತೆ ಸೂಚಿಸಿರುವುದಲ್ಲದೆ, ಶಾಲೆ ಬಹಿಷ್ಕರಿಸುವಂತೆ ಮಾಡಿದ್ದಾರೆ.
ಇದರಿಂದ ನೊಂದ ಅಡುಗೆ ಸಹಾಯಕಿ ರಾಧಮ್ಮ ಸರ್ಕಾರಕ್ಕೆ ದೂರು ನೀಡಿದ್ದರು.

ಇದರಿಂದ ಮತ್ತಷ್ಟು ಕುಪಿತರಾದ ಸವರ್ಣಿಯರು ತಮ್ಮ ಪ್ರಭಾವ ಬಳಸಿ ಶಾಲೆಯಲ್ಲಿದ್ದ ದಲಿತ ಮಕ್ಕಳನ್ನು ಸಹ ಹೊರ ಉಳಿಯುವಂತೆ ಮಾಡಿದ್ದಾರೆ. ಇದರಿಂದ ಬೇಸತ್ತ ರಾಧಮ್ಮ, ತನ್ನ
ಜಾತಿಯವರು ಸಹ ಊಟ ಮಾಡುತ್ತಿಲ್ಲ.ಶಾಲೆಗೆ ಬರುತ್ತಿಲ್ಲ. ಇಂತಹ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ತಮಗೆ ದಯಾ ಮರಣಕ್ಕೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT