(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಪ್ರತ್ಯೇಕ ಘಟನೆ; ಪ್ರಾಣಿ ದಾಳಿಗೆ ಇಬ್ಬರು ಬಲಿ

: ಪ್ರತ್ಯೇಕ ಕಡೆ ಬುಧವಾರ ಕರಡಿ ಹಾಗೂ ಚಿರತೆ ದಾಳಿಗೆ ಇಬ್ಬರು ಮೃತಪಟ್ಟಿದ್ದರೆ, ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ. ಇನ್ನು ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ...

ಬೆಂಗಳೂರು: ಪ್ರತ್ಯೇಕ ಕಡೆ ಬುಧವಾರ ಕರಡಿ ಹಾಗೂ ಚಿರತೆ ದಾಳಿಗೆ ಇಬ್ಬರು ಮೃತಪಟ್ಟಿದ್ದರೆ, ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ. ಇನ್ನು ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.

ಕರಡಿ ದಾಳಿ: ಹೊಸದುರ್ಗ ತಾಲೂಕಿನ ತಣಿಗೆಕಲ್ಲು ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಧರಣೇಶಪ್ಪ ಎಂಬುವರ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ಕೊಂದು ಹಾಕಿವೆ. ಗ್ರಾಮಸ್ಥರು ಓಡಿಸಲು ಮುಂದಾದರೂ ಒಂದು ಕರಡಿ ಶವದ ಮುಂದೆಯೇ ಇತ್ತು. ಕೊನೆಗೆ ಗ್ರಾಮಸ್ಥರು ಬಡಿದುಕೊಂದಿದ್ದಾರೆ.

ಕೊಂದ ಚಿರತೆ: ಸಂಡೂರು ತಾಲೂಕಿನ ಸಿದ್ದಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಡು ಮೇಯಿಸುತ್ತಿದ್ದ ಕರಡಿ ಭರಮಲಿಂಗಪ್ಪ (70) ಎಂಬುವರ ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ. ಆಡು ಮೇಯಿಸುತ್ತಾ ಊಟಕ್ಕೆ ಕುಳಿತಿದ್ದಾಗ ದಾಳಿ ನಡೆಸಿದೆ. ಸಕಲೇಶಪುರ ತಾಲೂಕಿನ ದಬ್ಬಳ್ಳಿಯಲ್ಲಿ ಕುಮಾರ್ (42) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದೆ. ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಗು ಜಿಲ್ಲೆಯ ಸಿದ್ದಾಪುರದ ಚೆಟ್ಟಳ್ಳಿಯಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21 ರಂದು ಮರು ಮತದಾನ; ಚುನಾವಣಾ ಆಯೋಗ ಆದೇಶ

ಹೌದು ನಾವು ಒಂದ್ ರೀತಿ ಕಡಲ್ಗಳ್ಳರೇ...; ಹೆಮ್ಮೆ ಇದೆ: ಜಲಸಂಧಿಗೆ ದಿಗ್ಬಂಧನದ ವಿಷಯವಾಗಿ ಟ್ರಂಪ್ ಹೊಸ ವರಸೆ!

ಪೊಲೀಸರ ಸಮ್ಮುಖದಲ್ಲೇ ಧಮ್ಕಿ: ಸಾರಾ ಗೋವಿಂದ್ ವಿರುದ್ಧ ಚೇತನ್ ಅಹಿಂಸಾ ದೂರು, FIR ದಾಖಲು!

ಪಶ್ಚಿಮ ಬಂಗಾಳ: ದಕ್ಷಿಣ 24 ಪರಗಣಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ಮುಕ್ತಾಯ; ಸಂಜೆ 5 ಗಂಟೆಯವರೆಗೆ 87% ವೋಟಿಂಗ್

2029ರ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಏಕಾಂಗಿ ಸ್ಪರ್ಧೆ?: ಮಹಾರಾಷ್ಟ್ರ ಸಚಿವನ ಹೇಳಿಕೆ ಕೋಲಾಹಲ!

SCROLL FOR NEXT