ಸೋಲಾರ್ ವಿದ್ಯುತ್ ಮಾದರಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸೋಲಾರ್ ಯೋಜನೆಗೆ ಕೇಂದ್ರದಿಂದ ಪ್ರಶಂಸೆ

ಭಾರಿ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ಮುಖಂಡರ ತೀವ್ರ ಟೀಕೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರದ ಸೋಲಾರ್ ವಿದ್ಯುತ್ ಯೋಜನೆಯ...

ಬೆಂಗಳೂರು: ಭಾರಿ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ಮುಖಂಡರ ತೀವ್ರ ಟೀಕೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರದ ಸೋಲಾರ್ ವಿದ್ಯುತ್ ಯೋಜನೆಯ ಅನುಷ್ಠಾನ ಮಾದರಿಗೆ  ಈಗ ಕೇಂದ್ರ ಸರ್ಕಾರವೇ ಸರ್ಟಿಫಿಕೇಟ್ ನೀಡಿದೆ.

ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುವುದಕ್ಕೆ ಕರ್ನಾಟಕ ಅನುಷ್ಠಾನ  ಮಾಡುತ್ತಿರುವ ಮಾದರಿಯೇ ಸೂಕ್ತ ಎಂದು ಕೇಂದ್ರ ಇಂಧನ ಇಲಾಖೆ ಎರಡನೇ ಬಾರಿಗೆ  ಪ್ರಶಂಸೆ ವ್ಯಕ್ತಪಡಿಸಿದೆ.

ಈ ಯೋಜನೆಯ ಇತರೆ ಫಲಾನುಭವಿ ರಾಜ್ಯಗಳು ಕರ್ನಾಟಕಕ್ಕೆ ಭೇಟಿ ನೀಡಿ ಅಧ್ಯಯನ  ನಡೆಸಬೇಕೆಂಬ ಟಿಪ್ಪಣಿಯನ್ನು ಕಳುಹಿಸಿಕೊಡಲಾಗಿದೆ.  ಜೊತೆಗೆ, ಕೇಂದ್ರದ ಅಧಿಕಾರಿಗಳ  ತಂಡ ರಾಜ್ಯಕ್ಕೆ ಭೇಟಿ ನೀಡಿ ಸೋಲಾರ್ ಯೋಜನೆಯ ಅನುಷ್ಠಾನ ವಿಧಾನದ ಬಗ್ಗೆ ಅಧ್ಯಯನ ನಡೆಸಿದೆ.

ಕುತೂಹಲಕಾರಿ ಸಂಗತಿ ಎಂದರೆ, ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ವಿಧಾನವೂ ಈ ಅಧ್ಯಯನದಲ್ಲಿ ಸೇರಿಸಲಾಗಿದೆ. 

ಆನ್‍ಲೈನ್ ಅರ್ಜಿ ವಿತರಣೆ:
ಆನ್‍ಲೈನ್ ಅರ್ಜಿ ವಿತರಣೆ ವಿಧಾನ ಹಾಗೂ ಟೆಂಡರ್ ಪ್ರಕ್ರಿಯೆ   ಪಾರದರ್ಶಕವಾಗಿದ್ದು, ಭೂಮಾಲೀಕರು, ವಿಶ್ವವಿದ್ಯಾಲಯಗಳು, ಚಾರಿಟೇಬಲ್ ಸಂಸ್ಥೆಗಳು  ಹಾಗೂ ಖಾಸಗಿ ಪಾಲುದಾರಿಕೆಗೆ ತೆಗೆದುಕೊಂಡ ನಿರ್ಧಾರ ಸಮರ್ಪಕವಾಗಿದೆ' ಎಂದು ಕೇಂದ್ರ ಇಂಧನ ಇಲಾಖೆ ಅಧಿಕಾರಿಗಳು ರಾಜ್ಯಕ್ಕೆ ಕಳುಹಿಸಿರುವ ಶ್ಲಾಘನಾ ಪತ್ರದಲ್ಲಿ ಮತ್ತು ಇತರೆ  ರಾಜ್ಯಗಳಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT