ಜಿಲ್ಲಾ ಸುದ್ದಿ

ಮತ್ತೆ ಮಡೆ, ಎಡೆ ಸ್ನಾನದ ಗಲಾಟೆ

Mainashree
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಡೆ ಸ್ನಾನ ಈ ಬಾರಿಯೂ ವಿವಾದಕ್ಕೆ ಗುರಿಯಾಗಲಿದೆಯೇ ಎನ್ನುವ ಆತಂಕ ಎದುರಾಗಿದೆ. 
ಕೋರ್ಟ್ ಆದೇಶದಂತೆ ಎಡೆ ಸ್ನಾನಕ್ಕೆ ಅವಕಾಶ ನೀಡುವುದಾಗಿ ಜಿಲ್ಲಾಡಳಿತ ಹೇಳಿದರೆ, ಮಡ ಮಡೆ ಸ್ನಾನ ಮಾಡಿಯೇ ಸಿದ್ಧ ಎಂದು ಮಲೆಕುಡಿಯರು ಹೇಳುತ್ತಿದ್ದಾರೆ. ಹೀಗಾಗಿ ಡಿ. 15ರಿಂದ ನಡೆಯುವ ಚಂಪಾ ಷಷ್ಠಿ ಮಹೋತ್ಸವ ರಾಜ್ಯದ ಗಮನ ಸೆಳೆಯಲಿದೆ. 
ಕಳೆದ ವರ್ಷ ಇದೇ ಅವಧಿಯಲ್ಲಿ ಮಡ ಮಡೆ ಸ್ನಾನ ನಡೆದಿತ್ತು. ನಂತರ ಧಾರ್ಮಿಕ ದತ್ತಿ ಇಲಾಖೆ ಸೂಚನೆ ಮೇರೆಗೆ ಎಡೆ ಸ್ನಾನ ನಡೆಸಲಾಗಿತ್ತು. ಈ ಬಾರಿಯೂ ಜಿಲ್ಲಾಡಳಿತ ಇದೇ ಕ್ರಮವನ್ನು ಪಾಲಿಸಲು ಮುಂದಾಗಿದೆ.
SCROLL FOR NEXT