ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಆಸ್ತಿಗಾಗಿ ಅಣ್ಣನನ್ನೇ ಮುಗಿಸಿದ ತಮ್ಮ

ಪಿತ್ರಾರ್ಜಿತ ಆಸ್ತಿಗಾಗಿ ಜಗಳ ಉಂಟಾಗಿ ಸೋಮವಾರ ಅಣ್ಣನನ್ನು ತಮ್ಮನೇ ಹಾಡಹಗಲು ಕೊಲೆ ಮಾಡಿದ ಘಟನೆ ನರೇಂದ್ರ...

ಧಾರವಾಡ: ಪಿತ್ರಾರ್ಜಿತ ಆಸ್ತಿಗಾಗಿ ಜಗಳ ಉಂಟಾಗಿ ಸೋಮವಾರ ಅಣ್ಣನನ್ನು ತಮ್ಮನೇ ಹಾಡಹಗಲು ಕೊಲೆ ಮಾಡಿದ ಘಟನೆ ನರೇಂದ್ರ ಗ್ರಾಮದಲ್ಲಿ ಜರುಗಿದೆ. 
ಈರಪ್ಪ ದೇಶಣ್ಣವರ (51) ಮೃತ ವ್ಯಕ್ತಿ. ಕೊಲೆ ತಾನೇ ಮಾಡಿದ್ದು ಎಂದು ಶೇಖಪ್ಪ ಒಪ್ಪಿಕೊಂಡಿದ್ದಾನೆ. ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ 20 ವರ್ಷಗಳಿಂದ ಈ ವಿಚಾರವಾಗಿ ಜಗಳವಾಗುತ್ತಿತ್ತು ಎನ್ನಲಾಗಿದೆ. 
ಆಸ್ತಿ ವಿಚಾರವಾಗಿ ಗ್ರಾಪಂನಲ್ಲಿ ರಾಜಿ ಸಂಧಾನವಾಗಿದ್ದರೂ, ಮರಳಿ ಮನೆಗೆ ಬಂದಾಗ ಸೈಕಲ್ ಚೈನ್ ನಿಂದ ಶೇಖಪ್ಪನ ಮೇಲೆ ಅಣ್ಣ ಹಲ್ಲೆ ಮಾಡಿದ್ದಾನೆ. 
ಈ ವೇಳೆ ಶೇಖಪ್ಪ ಮತ್ತು ಆತನ ಮಗ ಸೇರಿ ಈರಪ್ಪನನ್ನು ಚೈನ್ ಸುತ್ತಿಸಿ ನೆಲಕ್ಕೆ ಕೆಡವಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಈ ವೇಳೆ ಈರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕು: ಕೇಜ್ರಿವಾಲ್

SCROLL FOR NEXT