ಜಿಲ್ಲಾ ಸುದ್ದಿ

ಮೈಸೂರು: ಅನ್ಯಗ್ರಹ ಜೀವಿ ಕಂಡು ಬೆಚ್ಚಿ ಬಿದ್ದ ಕಣಗಲ್ ಗ್ರಾಮಸ್ಥರು!

Vishwanath S
ಮೈಸೂರು: ಮೈಸೂರಿನಲ್ಲಿ ವಿಸ್ಮಯವೊಂದು ಕಂಡಿದೆ. ಅನ್ಯಗ್ರಹ ಜೀವಿ ಏಲಿಯನ್ಸ್ ಕಾಣಿಸಿಕೊಂಡ ವದಂತಿ ಹಬ್ಬಿದ ಪರಿಣಾಮ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿನ ಗ್ರಾಮಸ್ಥರು ಕಂಗಾಲಾಗಿರುವ ಘಟನೆ ನಡೆದಿದೆ.
ಮೈಸೂರಿನ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿ ಮುಂಜಾನೆ ರೈತಾಪಿ ಮಹಿಳೆಯರು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾರುವ ತಟ್ಟೆಯ ಮೂಲಕ ಕೆಳಗಿಳಿದ ಏಲಿಯನ್ಸ್​ ಮಹಿಳೆಯರ ಫೋಟೋ ಕ್ಲಿಕ್ಕಿಸಿಕೊಂಡು ಹೋಗಿದೆ ಅಂತ ಅವರು ಹೇಳಿದ್ದಾರೆ.
ಅಂತೂ ಕಣಗಲ್ ಗ್ರಾಮದ ತುಂಬೆಲ್ಲಾ ಅನ್ಯಗ್ರಹ ಜೀವಿ ಕಂಡಿರುವ ಸುದ್ದಿ ಹಬ್ಬಿ ಜನ ಕಂಗಾಲಾಗಿರುವುದಂತೂ ಸತ್ಯ.
SCROLL FOR NEXT