ಪುರಭವನ 
ಜಿಲ್ಲಾ ಸುದ್ದಿ

ಪುರಭವನ ದಿನದ ಬಾಡಿಗೆ ಇಳಿಕೆ ಸಂಭವ

ಹಲವು ತಿಂಗಳಿಂದ ವಿರೋಧ ಹಾಗೂ ಗೊಂದಲದ ನಡುವೆ ಪುರಭವನದ ದಿನದ ಬಾಡಿಗೆ ರು.1.25 ಲಕ್ಷದಿಂದ ದರ...

ಬೆಂಗಳೂರು: ಹಲವು ತಿಂಗಳಿಂದ ವಿರೋಧ ಹಾಗೂ ಗೊಂದಲದ ನಡುವೆ ಪುರಭವನದ ದಿನದ ಬಾಡಿಗೆ ರು.1.25 ಲಕ್ಷದಿಂದ ದರ ರು.67,000 ಹಾಗೂ ರು.30,000ಕ್ಕೆ ಇಳಿಕೆಯಾಗುವ ಹಂತಕ್ಕೆ ತಲುಪಿದೆ. 
ವಿಶೇಷ ಆಯುಕ್ತ ಜೆ.ರವಿಶಂಕರ್ ನೇತೃತ್ವದ ಸಮಿತಿ ಈ ಕುರಿತು ವರದಿ ನೀಡಿದ್ದು, ಬಾಡಿಗೆ ದರವನ್ನು ರು.67,000 ಹಾಗೂ ರು.30,000 ಎಂದು ಎರಡು ವಿಧವಾಗಿ ವರ್ಗೀಕರಿಸಲಾಗಿದೆ. ಈ ಪ್ರಸ್ತಾವನೆಯನ್ನು ಆಯುಕ್ತ ಕುಮಾರ್ ನಾಯಕ್ ಪರಿಶೀಲಿಸಲಿದ್ದು, ನಂತರ ಮೇಯರ್ ಮಂಜುನಾಥ ರೆಡ್ಡಿ ಕೌನ್ಸಿಲ್ ನಲ್ಲಿ ಮಂಡಿಸಲಿದ್ದಾರೆ. ಕೌನ್ಸಿಲ್ ಸದಸ್ಯರ ಅನುಮೋದನೆ ಪಡೆದ ನಂತರ ಬಾಡಿಗೆ ಪರಿಷ್ಕರಣೆಯಾಗಲಿದೆ. 
ಪುರಭವನ ನವೀಕರಣ ಕಾಮಗಾರಿ ಬಳಿಕ, ಸಾಲದ ಹೊರೆ ಹಾಗೂ ನವೀಕರಣ ಕಾಮಗಾರಿಗೆ ತಗುಲಿದ ವೆಚ್ಚವನ್ನು ಪರಿಗಣಿಸಿ ದಿನ ಬಾಡಿಗೆಯನ್ನು ರು.1.25 ಲಕ್ಷಕ್ಕೆ ಏರಿಸಲಾಗಿತ್ತು. ಇದು ಸಾಹಿತ್ಯಾಸಕ್ತರು, ರಂಗಕರ್ಮಿಗಳ ಕೋಪಕ್ಕೆ ಗುರಿಯಾಗಿದ್ದು, ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು. ಶಾಂತಕುಮಾರಿ ಅವರು ಮೇಯರ್ ಆಗಿದ್ದಾಗ ಸುಮಾರು ರು.6 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆದಿತ್ತು. 
ಇದಕ್ಕೂ ಮುನ್ನ ದಿನ ಬಾಡಿಗೆ ದರ ಕೇವಲ ರು.5,000ವಾಗಿತ್ತು. ಆಡಳಿತಾಧಿಕಾರಿ ವಿಜಯಭಾಸ್ಕರ್ ಅವರ ಅವಧಿಯಲ್ಲಿ ಬಾಡಿಗೆ ಪರಿಷ್ಕರಿಸುವ ಬಗ್ಗೆ ಬ್ರಾಡ್‍ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ (ಬಿಇಸಿಐಎಲ್)ನ ನಿವೃತ್ತ ಅಧಿಕಾರಿ ನರಸಿಂಹಸ್ವಾಮಿ ಅವರ ಸಲಹೆ ಕೇಳಲಾಗಿತ್ತು. 
ಟಿಕೆಟ್ ಶುಲ್ಕ ವಿಧಿಸುವ ಪ್ರದರ್ಶನಗಳಿಗೆ ರು.73,000, ಸಾಮಾನ್ಯ ಕಾರ್ಯಕ್ರಮಗಳಿಗೆ ರು.67,000 ಹಾಗೂ ಕನ್ನಡ ಸಾಹಿತ್ಯ, ಕಲೆ  ಕಾರ್ಯಕ್ರಮಗಳಿಗೆ ರು.30,000 ಬಾಡಿಗೆ ನಿಗದಿ ಮಾಡಬಹುದು ಎಂದು ಸ್ವಾಮಿ ಅವರು ಸಲಹೆ ನೀಡಿದ್ದರು. ಈ ಪ್ರಸ್ತಾವನೆಯೂ ಬಿಬಿಎಂಪಿಯಲ್ಲಿ ಇರುವಾಗಲೇ ಮತ್ತೊಂದು ಸಮಿತಿ ವರದಿ ನೀಡಿದೆ. ಆದರೆ ರು.30,000ದ ದರವನ್ನೂ ಕಡಿಮೆ ದರ ನಿಗದಿ ಮಾಡಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT