ಎಸ್ ಐ ಜಗದೀಶ್ 
ಜಿಲ್ಲಾ ಸುದ್ದಿ

ಎಸ್ ಐ ಜಗದೀಶ್ ಅವರ ಸರ್ವೀಸ್ ರಿವಾಲ್ವರ್ ನಲ್ಲಿ ಬುಲೆಟ್ ಇರಲಿಲ್ಲ!

ಹತ್ಯೆಯಾದ ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಎಸ್.ಜಗದೀಶ್ ಅವರ ಸರ್ವಿಸ್‌ ರಿವಾಲ್ವರ್‌ನಲ್ಲಿ ಬಲೆಟ್‌ಗಳೆ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು: ಬೈಕ್ ಕಳ್ಳರಿಂದ ಹತ್ಯೆಯಾದ  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಎಸ್.ಜಗದೀಶ್ ಅವರ ಸರ್ವಿಸ್‌ ರಿವಾಲ್ವರ್‌ನಲ್ಲಿ ಬಲೆಟ್‌ಗಳೆ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಮಫ್ತಿಯಲ್ಲಿದ್ದ ಜಗದೀಶ್‌ ನೇತೃತ್ವದ ಐವರು ಪೊಲೀಸರ ತಂಡ ಕಳ್ಳರ ಚೇಸಿಂಗ್‌ ಮಾಡಿದ್ದರು, ಕಾರ್ಯಾಚರಣೆಗೆ ಬೈಕ್‌ ಮತ್ತು ಇನ್ನೋವಾ ಕಾರನ್ನು ಬಳಸಿದ್ದರು. ಚೇಸಿಂಗ್‌ ವೇಳೆ ಕಳ್ಳರು ಹೆದ್ದಾರಿಯಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದರು. ಈ ಸಂದರ್ಭದಲ್ಲಿ ಜಗದೀಶ್‌ ಅವರು ಬೈಕ್‌ ತರಲು ಪೇದೆ ವೆಂಕಟೇಶ್‌ ಮೂರ್ತಿ ಅವರಿಗೆ ಹೇಳಿ  ಕೀ ನೀಡಿದ್ದಾರೆ.

ಕಳ್ಳರನ್ನು ಬೆನ್ನಟ್ಟಿದ ಜಗದೀಶ್‌ ಅಡ್ಡಗಟ್ಟಿ ರಿವಾಲ್ವರ್‌ ತೋರಿಸಿದ್ದಾರೆ , ಈ ವೇಳೆ ದುರದೃಷ್ಟವಷಾತ್‌ ಜಗದೀಶ್‌ ಅವರು ಆಯ ತಪ್ಪಿ ಮೋರಿಗೆ ಬಿದ್ದಿದ್ದಾರೆ. ಅಷ್ಟರಲ್ಲಾಗಲೇ ಕಳ್ಳರು ಜಗದೀಶ್‌ ಅವರ ದೇಹದ 7 ಕಡೆ ಡ್ರ್ಯಾಗರ್‌ನಿಂದ ಇರಿದು ಪರಾರಿಯಾಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ವೆಂಕಟೇಶ್‌ ಅವರಿಗೂ ಇರಿದ ಕಳ್ಳರು ಬೈಕ್‌ ,ರಿವಾಲ್ವರ್‌ ಕಸಿದು ಕಸಿದುಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ಎಸ್ಕೇಪ್ ಆಗಿದ್ದಾರೆ.

.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT