ಜಿಲ್ಲಾ ಸುದ್ದಿ

ಎಸ್ ಐ ಜಗದೀಶ್ ಅವರ ಸರ್ವೀಸ್ ರಿವಾಲ್ವರ್ ನಲ್ಲಿ ಬುಲೆಟ್ ಇರಲಿಲ್ಲ!

Shilpa D

ಬೆಂಗಳೂರು: ಬೈಕ್ ಕಳ್ಳರಿಂದ ಹತ್ಯೆಯಾದ  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಎಸ್.ಜಗದೀಶ್ ಅವರ ಸರ್ವಿಸ್‌ ರಿವಾಲ್ವರ್‌ನಲ್ಲಿ ಬಲೆಟ್‌ಗಳೆ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಮಫ್ತಿಯಲ್ಲಿದ್ದ ಜಗದೀಶ್‌ ನೇತೃತ್ವದ ಐವರು ಪೊಲೀಸರ ತಂಡ ಕಳ್ಳರ ಚೇಸಿಂಗ್‌ ಮಾಡಿದ್ದರು, ಕಾರ್ಯಾಚರಣೆಗೆ ಬೈಕ್‌ ಮತ್ತು ಇನ್ನೋವಾ ಕಾರನ್ನು ಬಳಸಿದ್ದರು. ಚೇಸಿಂಗ್‌ ವೇಳೆ ಕಳ್ಳರು ಹೆದ್ದಾರಿಯಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದರು. ಈ ಸಂದರ್ಭದಲ್ಲಿ ಜಗದೀಶ್‌ ಅವರು ಬೈಕ್‌ ತರಲು ಪೇದೆ ವೆಂಕಟೇಶ್‌ ಮೂರ್ತಿ ಅವರಿಗೆ ಹೇಳಿ  ಕೀ ನೀಡಿದ್ದಾರೆ.

ಕಳ್ಳರನ್ನು ಬೆನ್ನಟ್ಟಿದ ಜಗದೀಶ್‌ ಅಡ್ಡಗಟ್ಟಿ ರಿವಾಲ್ವರ್‌ ತೋರಿಸಿದ್ದಾರೆ , ಈ ವೇಳೆ ದುರದೃಷ್ಟವಷಾತ್‌ ಜಗದೀಶ್‌ ಅವರು ಆಯ ತಪ್ಪಿ ಮೋರಿಗೆ ಬಿದ್ದಿದ್ದಾರೆ. ಅಷ್ಟರಲ್ಲಾಗಲೇ ಕಳ್ಳರು ಜಗದೀಶ್‌ ಅವರ ದೇಹದ 7 ಕಡೆ ಡ್ರ್ಯಾಗರ್‌ನಿಂದ ಇರಿದು ಪರಾರಿಯಾಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ವೆಂಕಟೇಶ್‌ ಅವರಿಗೂ ಇರಿದ ಕಳ್ಳರು ಬೈಕ್‌ ,ರಿವಾಲ್ವರ್‌ ಕಸಿದು ಕಸಿದುಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ಎಸ್ಕೇಪ್ ಆಗಿದ್ದಾರೆ.

.

SCROLL FOR NEXT