ಚಾಮುಂಡೇಶ್ವರಿ ಸ್ಟುಡಿಯೋ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

‘ಚಿತ್ರಮಂದಿರದಲ್ಲಿ’ ಸಿನೆಮಾ ಪ್ರದರ್ಶನ

ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಸಿನೆಮಾ-ಬೆಳ್ಳಿ ಮಾತು ಶೀರ್ಷಿಕೆಯ ಸಿನೆಮಾ ಪ್ರದರ್ಶನದಲ್ಲಿ ವಿ.ಚಲ ನಿರ್ದೇಶನದ ‘ಚಿತ್ರಮಂದಿರದಲ್ಲಿ’ ಪ್ರಯೋಗಾತ್ಮಕ ಸಿನೆಮಾ ಪ್ರದರ್ಶನಗೊಂಡಿತು...

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಸಿನೆಮಾ-ಬೆಳ್ಳಿ ಮಾತು ಶೀರ್ಷಿಕೆಯ ಸಿನೆಮಾ ಪ್ರದರ್ಶನದಲ್ಲಿ ವಿ.ಚಲ ನಿರ್ದೇಶನದ ‘ಚಿತ್ರಮಂದಿರದಲ್ಲಿ’ ಪ್ರಯೋಗಾತ್ಮಕ ಸಿನೆಮಾ ಪ್ರದರ್ಶನಗೊಂಡಿತು.

ಇದಕ್ಕೂ ಮುನ್ನ ಸಿನೆಮಾದ ನಿರ್ದೇಶಕ ವಿ.ಚಲ ಮಾತನಾಡಿ, ರಂಗಭೂಮಿ ಹಿನ್ನೆಲೆಯಿರುವ ನಾನು ಪ್ರಯೋಗಾತ್ಮಕ ಸಿನೆಮಾವೊಂದನ್ನು ನಿರ್ದೇಶನ ಮಾಡಿದ್ದೇನೆ. ಈ ಸಿನೆಮಾದ
ಮೂಲಕ ಹೊಸತನಕ್ಕೆ ಆದ್ಯತೆ ನೀಡಿದ್ದು, ಕ್ರಿಯಾಶೀಲತೆಯಿಂದ ಕಟ್ಟಿಕೊಟ್ಟಿದ್ದೇನೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಬಿ.ಗಣಪತಿ ಮಾತನಾಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಾಂಸ್ಥಿಕವಾದ ಕ್ರಿಯಾಶೀಲತೆ ಚಲನಶೀಲತೆ ಮೈಗೂಡಿಸಿ ಕೊಳ್ಳುವುದಿಲ್ಲ ಎಂಬ ಮಾತಿದೆ. ಆದರೆ,
ಕರ್ನಾಟಕ ಚಲನಚಿತ್ರ ಅಕಾಡೆಮಿ ಬಹಳ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅಕಾಡೆಮಿಯನ್ನು ಚಲನಶೀಲವಾಗಿಡುವ ಮೂಲಸ ವಿಶ್ವಾಸ ಮೂಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಹೆಚ್ಚು ಪ್ರದರ್ಶನ ಕಾಣದಿರುವುದು ದುರಂತವೇ ಸರಿ. ಇಂತಹ ಸಿನಿಮಾಗಳು ಸದಾ ಸಮಾಜದಲ್ಲಿ ಹರಿಯಬೇಕು ಮತ್ತು ಸಾರ್ವತ್ರಿಕವಾಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು ಶೀರ್ಷಿಕೆಯಡಿ ಚಿತ್ರಮಂದಿರದಲ್ಲಿ ಎನ್ನುವ ಪ್ರಯೋಗಾತ್ಮಕ ಸಿನೆಮಾ ಪ್ರದರ್ಶಿಸುತ್ತಿರುವುದು ಶ್ಲಾಘನಾರ್ಹ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ನಾಯಕ ಶಂಕರ್ ಆರ್ಯನ್, ನಾಯಕಿ ನಮಿತಾ ರಾವ್ ಮತ್ತಿತರರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT